Friday, 10 July 2020

ಮಲಕುಗಳು ಧಫನ ಮಾಡಿದ ಸ್ವಹಾಬಿ

السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ
*══❁✿🕳.﷽ .🕳✿❁══*
▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

▪•••┈┈•••💧•••┈┈•••▪
*:::ಮಲಕುಗಳು ಧಫನ ಮಾಡಿದ ಸ್ವಹಾಬಿ :::*
▪•••┈┈•✿❁✿•┈┈•••▪

ಖುರೈಶಿ ಕುಫ್ಫಾರುಗಳು ಮಹಾನರಾದ ಖುಬೈಬ್ (ರಅ) ಕೊಲ್ಲಲು ಖರ್ಜೂರದ ಮರಕ್ಕೆ ಕಟ್ಟಿಹಾಕಿದರು . ಅಬೂ ಸುಫ್ಯಾನ್ ಖುಬೈಬ್(ರಅ) ರವರನ್ನು ಸಮೀಪಿಸಿ ಕೇಳಿದರು "ನಿನ್ನ ಸ್ಥಾನದಲ್ಲಿ ಮುಹಮ್ಮದ್ ಇರುವುದನ್ನು ನೀನು ನೆನೆಸಿಕೊಳ್ಳುವೆಯಾ..? ಆಗ ಖುಬೈಬ್ (ರಅ) "ಅಲ್ಲಾಹನ ಮೇಲಾಣೆ ನನ್ನ ಪ್ರವಾದಿಯವರ ಕಾಲಿಗೆ ಒಂದು ಮುಳ್ಳು ಚುಚ್ಚುವುದೂ ಕೂಡಾ ನನ್ನಿಂದ ಸಹಿಸಲು ಸಾಧ್ಯವಿಲ್ಲ" . ನಂತರ ಅಬೂ ಸುಫ್ಯಾನ್ ಹೇಳಿದರು "ನಿನಗೆ ಕೊನೇ ಆಗ್ರಹ ಏನಾದರೂ ಇದೆಯೇ...?" ಖುಬೈಬ್ (ರಅ) "ನನಗೆ ಎರಡು ರಕಅತ್ ನಮಾಝ್ ನಿರ್ವಹಿಸಬೇಕು" . ನಮಾಝಿಗೆ ಅನುವು ಮಾಡಿಕೊಡಲಾಯಿತು . ನಮಾಝ್ ಪೂರ್ತಿಗೊಳಿಸಿದ ಖುಬೈಬ್ (ರಅ) ಹೇಳಿದರು "ನಾನು ಮರಣವನ್ನು ಭಯಪಡುವೆನೆಂದು ನೀವುಗಳು ಭಾವಿಸುತ್ತಿರದಿದ್ದರೆ, ಅಲ್ಲಾಹನಿಗೆ ಇನ್ನೂ ಹೆಚ್ಚಿನ ನಮಾಝ್ ನಿರ್ವಹಿಸುತ್ತಿದ್ದೆ" . ನಂತರ ಅವರನ್ನು ಮರಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿ ಕೊಂದರು . ಅವರು ಕೊಲ್ಲಲು ಮುಂದಾದಾಗ ಖುಬೈಬ್ (ರಅ) ಹೀಗೆ ಪ್ರಾರ್ಥಿಸಿದ್ದರು "ಅಲ್ಲಾಹನೇ ನನ್ನೀ ತ್ಯಾಗ ನನ್ನ ಪ್ರವಾದಿಯವರಿಗೆ ತಿಳಿಯುವಂತಾಗಲಿ" .

ಜಿಬ್ರೀಲ್ (ಅಸ) ರವರ ಮೂಲಕ ವಿವರ ತಿಳಿದ ಪುಣ್ಯ ಪ್ರವಾದಿ ಮಹಮದ್ ಮುಸ್ತಫಾ ಸ್ವಲ್ಲಲ್ಲಾ ಹು ಅಲೈಹಿ ವಸಲ್ಲಂ ರವರು, ಖುಬೈಬ್ (ರಅ) ರವಲ ಮಯ್ಯಿತನ್ನು ತರಲು  ಒಬ್ಬರು ಸ್ವಹಾಬಿಯನ್ನು ಕಳುಹಿಸಿದರು.

ಸ್ವಹಾಬಿ ಮಕ್ಕಾ ತಲುಪಿದಾಗ ರಾತ್ರಿಯಾಗಿತ್ತು, ಯಾರೂ ಕಾಣದಂತೆ ಖುಬೈಬ್ (ರಅ) ರವರ ಶರೀರ ನೇತಾಡುತ್ತಿದ್ದ ಮರವನ್ನು ಸಮೀಪಿಸಿ, ಮೇಲೇರಿದರು. ಮರಕ್ಕೆ ಬಿಗಿದಿದ್ದ ಹಗ್ಗವನ್ನು ಬಿಚ್ಚಿ ಶರೀರವನ್ನು ಕೆಳಗಿಳಿಸಿದರು . ನಂತರ ಆ ಸ್ವಹಾಬಿ ಮರದಿಂದ ಕೆಳಗಿಳಿದು ನೋಡಿದರೆ ಅಲ್ಲಿ ಖುಬೈಬ್ (ರಅ) ರವರ ಶರೀರ ಕಂಡು ಬರಲಿಲ್ಲ.  ಸುತ್ತಲೂ ಹುಡುಕಾಡಿದರು ಆದರೆ ಎಲ್ಲೂ ಕಾಣಲಿಲ್ಲ, ಏನಾಯಿತು, ಮಯ್ಯಿತ್ ಎಲ್ಲಿ ಮಾಯವಾಯಿತು..? ರಾತ್ರಿ ಆದ್ದರಿಂದ ಕತ್ತಲಲ್ಲಿ ಕಾಣದೆ ,ಬೆಳಗಾದ ನಂತರ ಹುಡುಕಿ ಕಂಡೊಯ್ಯೋಣವೆಂದು ಬೆಳಗಾಗುವುದನ್ನು ಕಾದು ಕುಳಿತರು.  ಬೆಳಗಾದರೂ ಕಾಣದಿರುವಾಗ ಆ ಸ್ವಹಾಬಿ ಬೇಸರದಿಂದ ಪ್ರವಾದಿಯವರ(ಸಅ) ಸನ್ನಿಧಿಗೆ ಮರಳಿದರು .   ಆ ಸ್ವಹಾಬಿಯನ್ನು ನೋಡಿ ಪ್ರವಾದಿ (ಸಅ) ಹೇಳಿದರು ಆ ಶರೀರ ನಿನಗಿರುವುದಲ್ಲ , ಅವರ ಶರೀರವನ್ನು ಮಲಕುಗಳು ಧಫನ ಮಾಡಿದರು . ಎಂದರು .

🤲ಅಲ್ಲಾಹನ ಇಷ್ಟ ದಾಸರುಗಳ ಬರಕತ್ತಿನಿಂದ ನಮ್ಮ ಈಮಾನ್ ವೃಧ್ಧಿಸಲಿ.....!ಆಮೀನ್.

صلّوا على النبي ﷺ 
اللهم صل على سيدنا محمد وعلى اله وصحبه وسلم

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

No comments:

Post a Comment