Friday, 10 July 2020

ಪ್ರೇಮ

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

〰〰❁✿🌹🌹✿❁ 〰〰
*ಪ್ರೇಮ.!?*
〰〰❁✿🌹🌹✿❁ 〰〰


ಮುಸ್ಲಿಂ ಹೆಣ್ಣು ಮಕ್ಕಳಿಗೆ ಹೊರಗಡೆ ಅಲೆದಾಡಲು, ಗಂಡು ಮಕ್ಕಳೊಂದಿಗೆ ಬೆರೆಯಲು , ಸಲ್ಲಪಿಸಲು ಪ್ರಪಂಚದ ಎಲ್ಲಾ ಕಡೆಗಳಲ್ಲೂ ಸೌಕರ್ಯವಿದೆ . ಪೋಷಕರು , ಅಧ್ಯಾಪಕರು ಮತ್ತು ಸಮುದಾಯ ನಾಯಕರುಗಳು ನಿಯಂತ್ರಣವಿಟ್ಟಿದ್ದರೂ, ಪ್ರೇಮ ಸಲ್ಲಾಪಗಳನ್ನಾಗಲೀ, ಪ್ರೀತಿ ಬಂಧಗಳನ್ನಾಗಲೀ , ಶಾರೀರಿಕ ಲೈಂಗಿಕ ಬಂಧಗಳನ್ನಾಗಲೀ ತಡೆಯಲು ಸಾಧ್ಯವಾಗಲಿಲ್ಲ. ವ್ಯಕ್ತಿ ಸ್ವಾತಂತ್ರ್ಯ, ತಮ್ಮ ಅವಕಾಶಗಳು , ವಿಧ್ಯಾಬ್ಯಾಸ, ಕಸುಬು ಇವೆಲ್ಲವುಗಳು ಎಲ್ಲಾ ಧರ್ಮೀಯರಂತೆ ಮುಸ್ಲಿಂ ಹೆಣ್ಣುಮಕ್ಕಳೂ ಪಡೆಯುತ್ತಿದ್ದಾರೆ .

ಎಲ್ಲಾ ತಡೆಗಳನ್ನಿಟ್ಟು ಭದ್ರವಾಗಿಡಲು ಶ್ರಮಿಸುತ್ತಿರುವ ಕುಟುಂಬಗಳಲ್ಲೂ ಕೂಡ ಗಂಡು ಹೆಣ್ಣು ಸಮ್ಮಿಶ್ರವಾಗಿ ಶಾರೀರಿಕ ಹಾಗೂ ಲೈಗಿಕ ಬಂಧಗಳಲ್ಲಿ ತೊಡಗಿಕೊಂಡಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ . ಲೈಂಗಿಕತೆಗೆ ಪ್ರೀತಿ ಪ್ರೇಮದ ಅಗತ್ಯವಿಲ್ಲ,  ಸೌಹಾರ್ಧತೆ ಕೂಡಾ ಮನುಷ್ಯರನ್ನು ಕೆಲವೊಮ್ಮೆ ಲೈಂಗಿಕತೆಗೆ ಕೊಂಡೊಯ್ಯುತ್ತದೆ .
ಧಾರ್ಮಿಕ ನಿಯಮಾವಳಿಗಳನ್ನು ಗಾಳಿಗೆ ತೂರಿದ ಆಧುನಿಕ ಗಂಡು ಹೆಣ್ಣು ಬಂಧಗಳು ಧರ್ಮ ಸಂಸ್ಕೃತಿಯನ್ನು ದುರ್ಭಲವಾಗಿಸಿದೆ .

ಮುಸ್ಲಿಂ ಹೆಣ್ಣಿನ ಲೋಕ ಬದಲಾಗಿದೆ , ಒಂದು ಕಾಲದಲ್ಲಿ ಬುರ್ಖಾದಲ್ಲಿ ಶರೀರವನ್ನು ಅಡಗಿಸಿಟ್ಟಿದ್ದವರು , ಇಂದು ಅದೇ ಬುರ್ಖಾವನ್ನು ತಮ್ಮ ಶರೀರ ಉಬ್ಬು ತಗ್ಗುಗಳು ಅನ್ಯರಿಗೆ ಗೋಚರವಾಗುವಂತೆ ಹೊಸ ರೂಪು ಕೊಟ್ಟಿದ್ದಾರೆ .

ಯೌವ್ವನ ತುಂಬಿ ತುಳುಕುವ ಹೃದಯಗಳು , ಸಿನೆಮಾ ತಾರೆಗಳನ್ನು , ಆಟಗಾರರನ್ನು ಮಾದರಿಯನ್ನಾಗಿಸಿ ಪ್ರೀತಿ ಪ್ರೇಮಕ್ಕೆ ಮರುಳಾಗಿ ಹೋಗಿದ್ದಾರೆ . ಕಾಲ್ಪನಿಕ ಪ್ರೇಮ ಕಥೆಗಳನ್ನು ತಮ್ಮ ಗುರಿಯನ್ನಾಗಿಸಿದ ಯೌವ್ವನದ ಚಿಗುರೊಡೆಯುತ್ತಿರುವ ಮೃದು ಹೃದಗಳು. ಎಂಟು ಒಂಬತ್ತು ತರಗತಿಗಳಲ್ಲೇ ಮೊಳಕೆಯೊಡೆಯುವ ಈ ಪ್ರೀತಿ ಪ್ರೇಮಗಳು ಕ್ರಮೇಣ, ತಮ್ಮ ಹಾವಭಾವಗಳನ್ನು ಬದಲಿಸುತ್ತಾ ಇರುಳನ್ನು ಹುಡುಕಲು ಶುರುವಾಗುತ್ತದೆ . ತಾವಿಬ್ಬರಿರುವ ಒಂದು ಲೋಕವನ್ನು ಸಂಕಲ್ಪಿಸುತ್ತಾ ಯಾವುದಾದರೂ ಲಾಡ್ಜ್-ಗಳಲ್ಲೋ, ಗುಡ್ಡೆ-ಗಾಡುಗಳಲ್ಲೋ , ಯಾವುದಾದರೂ ಶಿಥಿಲಗೊಂಡ ಮನೆಯಲ್ಲೋ ತಮ್ಮ ಶಾರೀರಿಕ ಇಚ್ಛೆಗಳನ್ನು ಪೂರೈಸಿಕೊಳ್ಳಲು ನೋಡುತ್ತಾರೆ . ಈ ವಿಧ್ಯಾರ್ಥಿನಿಗಳ ಭಾವನೆ ತಾವು ತಮ್ಮ ಯೌವ್ವನವನ್ನು ಪ್ರೇಮಿಸಿ ಪ್ರೀತಿಸಿ ಆಗ್ರಹಗಳನ್ನು ಪೂರೈಸಿಕೊಂಡರೆ ಅದು ನಮಗೆ ಸಾರ್ಥಕ, ಮುಂದಕ್ಕೆ ಮುಂದೂಡಿದರೆ ಯೌವ್ವನದ ಉಲ್ಲಾಸ ನಿಮಿಶಗಳು ನಷ್ಟವಾದೀತು ಎಂದಾಗಿದೆ .

ಯೂನಿಫೋಂ ಹಾಕಿದ ವಿಧ್ಯಾರ್ಥಿನಿಗಳು ಐಸ್ ಕ್ರೀಂ ಪಾರ್ಲರ್ಗಳಲ್ಲೂ , ಮಾಲ್-ಗಳಲ್ಲೂ , ಕಾಫಿ ಕೆಫೆಗಳಲ್ಲೂ , ಸೈಬರ್ ಸೆಂಟರ್ ಗಳಲ್ಲೂ ತಮ್ಮ ತಮ್ಮ ಗೆಳೆಯ ಗೆಳತಿಯರೊಂದಿಗೆ ಪ್ರೇಮ ಹಂಚಿಕೊಳ್ಳಲು ಅಲೆದಾಡುತ್ತಿದ್ದಾರೆ . ಜಾಗೃತರಾಗಬೇಕಾದ ಪೋಶಕರು ಮಕ್ಕಳಿಗೆ ಬುಧ್ದಿವಾದ ಹೇಳಲು ಹಿಂಜರಿಯುತ್ತಿದ್ದಾರೆ , ಮಕ್ಕಳೇನಾದರು ಎಡವಟ್ಟು ಮಾಡುವರೋ ಎಂಬ ಭಯ. 

ಧಾರ್ಮಿಕತೆಗೆ ಮಂಕು ಬೂದಿ ಎರಚಿದ ಹದಿ ಹರೆಯದ ಯುವಕ-ಯುವತಿಯರು ತಮ್ಮ ಬಾಳ ಬೆಳಕನ್ನು ತಾವಾಗಿಯೇ ನಂದಿಸುತ್ತಿದ್ದಾರೆ. ಪ್ರಾಯದ ಬಿಸುಪಿಗೆ ಹರೆಯದ ಆಸೆಗಳಿಗೆ ಕಡಿವಾಣ ಹಾಕಲಾರದೆ ಕ್ಷಣಿಕ ಸುಖದ ಬೆನ್ನು ಬಿದ್ದು ಜೀವನ ಏನೆಂದು ಅರ್ಥವಾಗುವ ಮೊದಲೇ ಜೀವನಕ್ಕೆ ನಾಂದಿ ಹಾಡುತ್ತಿದ್ದಾರೆ . ಸ್ವ ಶರೀರವನ್ನು ನಿಯಂತ್ರಿಸಲಾಗದ ಯುವತಿಯರನ್ನು ಕಂಡು , ತಮ್ಮ ಮಕ್ಕಳಿಗೆ ಸರಿದಾರಿ ತೋರಿಸಿ ಕೊಡಲಾಗದ ಪೋಷಕರು ತಲೆಯ ಮೇಲೆ ಕೈ ಇಟ್ಟು ಕುಳಿತಿದ್ದಾರೆ .

ಇಷ್ಟಕ್ಕೂ ಕಾರಣವೇನು. . ?
ಇದಕ್ಕೆಲ್ಲಾ ಹೊಣೆ ಯಾರು. . ?
ಸರಿಪಡಿಸಲು ದಾರಿ ಇದೆಯೇ. . ?


ಚಿಂತಿಸಿ,

*ನಿಮ್ಮ ಮಕ್ಕಳು ನಿಮಗೆ ಅನುಗ್ರಹವೆಂದು ನುಡಿದ ಅದೇ ಪವಿತ್ರ ಗ್ರಂಥ ಖುರ್-ಆನ್ ಮತ್ತೊಂದೆಡೆ ನಿಮ್ಮ ಮಕ್ಕಳು ನಿಮಗೆ ನಾಶವೆಂದೂ ನುಡಿದಿದೆ .*

ನಿಮ್ಮ ಮಕ್ಕಳು ನಿಮಗೆ ಅನುಗ್ರಹವಾಗಿರಬೇಕಾದರೆ ಧಾರ್ಮಿಕತೆಗೆ ಮರಳಿ , ಧಾರ್ಮಿಕ ಚೌಕಟ್ಟಿನಲ್ಲಿ ಬೆಳೆಸಿ , , , , ,

*ಅಲ್ಲಾಹನು ಕರುಣಿಸಲಿ. . . .

 〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

No comments:

Post a Comment