Friday, 10 July 2020

ದುಆ ನಮ್ಮ ಆಯುಧ

السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

▪•••┈┈•••💧•••┈┈•••▪
*:::🌳ದುಆ ಮುಅಮಿನರ ಆಯುಧ🌳:::*
▪•••┈┈•✿❁✿•┈┈•••▪

                           *****

ಹಜ್ಜಾಜ್ ಇಬ್ನು ಯೂಸುಫ್ ಅಕ್ರಮಿಯಾದ ಆಡಳಿತಾರನಾಗಿದ್ದ . ಅಧಿಕಾರದ ದರ್ಪದೊಂದಿಗೆ ಅಹಂಕಾರ, ಕರುಣೆ ಇಲ್ಲದ ಆಡಳಿತ , ಜನರ ಜೀವನದೊಂದಿಗೆ ಚೆಲ್ಲಾಟ . ಅದೆಷ್ಟೋ ಸತ್ಕರ್ಮಿಗಳನ್ನು ಕೊಂದು ಹಾಕಿದ್ದನು . *ಹಜ್ಜಾಜ್ ಇಬ್ನು ಯೂಸುಫ್* ಎಂಬ ಆಡಳಿತಗಾರನ ಅನೈತಿಕತೆ ಮತ್ತು ಸರ್ವಾಧಿಕಾರಕ್ಕೆ ಇಮಾಮ್ ಹಸನುಲ್ ಬಸ್ವರಿ (ರಅ) ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದರು. ಹಜ್ಜಾಜ್ ವಿರುದ್ಧ ಬೆರಳು ಎತ್ತುವ ಧೈರ್ಯ ಯಾರಿಗೂ ಇರಲಿಲ್ಲ. ಹಸನುಲ್
ಬಸ್ವರಿ (ರಅ) ರವರನ್ನು ಅರಮನೆಗೆ ಕರೆತರಲು ಹಜ್ಜಾಜ್ ಆದೇಶಿಸಿದನು .

ಹಜ್ಜಾಜ್  ಇಮಾಮ್ ಹಸನುಲ್ ಬಸ್ವರಿಯವರನ್ನು  ಜನರ ಮುಂದೆ ನಿಲ್ಲಿಸಿ ಹೀಗೆ ಹೇಳಿದನು "ಓ ಜನರೇ, ನೀವು ಬಸ್ವರಿಯ ಗುಲಾಮರಾಗಿದ್ದೀರಾ? ಹೇಡಿಗಳು ..ನಾನು ನಿಮ್ಮನ್ನು ಹಸನ್ ಬಸ್ವರಿಯ ರಕ್ತವನ್ನು ಕುಡಿಯುವಂತೆ ಮಾಡುತ್ತೇನೆ. ”

ಇಮಾಮ್ ಹಸನುಲ್ ಬಸ್ವರಿ (ರಅ) ರವರನ್ನು  ಹಜ್ಜಾಜನ ಸೈನಿಕರು ಮರಣದಂಡನೆ ಸ್ಥಳಕ್ಕೆ ಕರೆದೊಯ್ದರು. ಆಗ ಬಸ್ವರಿಯವರು ತನ್ನ  ಮುಖವನ್ನು ಹಜ್ಜಾಜನ ಕಡೆಗೆ ತಿರುಗಿಸಿದರು . ಆಗಲೂ ಮಹಾನವರ ತುಟಿಗಳು ಅಲ್ಲಾಹನ ಪವಿತ್ರ ನಾಮಗಳನ್ನು ಜಪಿಸುತ್ತಿತ್ತು . ಮಹಾನರ ಮುಖವನ್ನು ನೋಡಿದ ಹಜ್ಜಾಜ್ ಭಯಭೀತನಾಗಲು ಪ್ರಾರಂಭಿಸಿದನು , ಆತನನ್ನು ಭಯ ಆವರಿಸಿಕೊಂಡಿತು .

ಅಲ್ಲಾಹನ ಕಾರುಣ್ಯ ಜ್ವಾಲೆ ಬಸ್ವರಿಯವರ ಮುಖದಲ್ಲಿ ಹರಿಯಿತು. ಹಜ್ಜಾಜನು ಭಯದಿಂದ ಕೂಗಿದನು: "ಹೇ ಅಬು ಸಯೀದ್, ನನ್ನನ್ನು ಕ್ಷಮಿಸು ,ನೀವು ವಿದ್ವಾಂಸರ ಆಧ್ಯಾತ್ಮಿಕ ನಾಯಕ” ಎನ್ನುತ್ತಾ ಹಸನುಲ್ ಬಸ್ವರಿ (ರಅ) ರವರ ಗಡ್ಡ ಮತ್ತು ತಲೆಯ ಮೇಲೆ ಸುಗಂಧ ಲೇಪಿಸಿ ಹಜ್ಜಾಜ್ ಗೌರವಿಸಿದನು.

ಮಹಾನರಾದ ಹಸನುಲ್ ಬಸ್ವರಿಯವರು ಹಜ್ಜಾಜನ ಮುಖವನ್ನು ನೋಡಿ ಈ ರೀತಿ ಪ್ರಾರ್ಥಿಸಿದ್ದರು "ಅಲ್ಲಾಹನೇ...ಹಝ್ರತ್ ಇಬ್ರಾಹಿಮ್ ನಬಿಯವರಿಗೆ ಬೆಂಕಿಯ ಕೆನ್ನಾಲಗೆಯಿಂದ ರಕ್ಷಣೆ ಮತ್ತು ತಂಪನ್ನು ನೀಡಿದಂತೆ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನನಗೂ ರಕ್ಷಣೆ ಮತ್ತು ತಂಪನ್ನು ನೀಡು.." .

💝👇💖

ನೋಟ್ :- ವರ್ತಮಾನದ ಎಲ್ಲಾ ಕಷ್ಟ ಕಾರ್ಪಲ್ಯಗಳಿಂದ ರಕ್ಷಣೆ ಹೊಂದಲು ನಾವೂ ಕೂಡಾ ಪ್ರಾರ್ಥಿಸೋಣ...! ಇನ್ಶಾ ಅಲ್ಲಾಹ್.
ನಿಮ್ಮ ಪ್ರಾರ್ಥನೆಯಲ್ಲಿ ನಮನ್ನೂ ನಮ್ಮ ಗೆಳೆಯರನ್ನೂ ಪ್ರತ್ಯೇಕವಾಗಿ ನಮ್ಮ ಗುರುವರ್ಯರಾದ ಉಲೆಮಾ ನೇತಾರರನ್ನೂ ಒಳಪಡಿಸಲು ಮರೆಯದಿರಿ.... ಅಲ್ಲಾಹನು ತೌಫೀಖ್ ಕರುಣಿಸಲಿ... ಆಮೀನ್. 🤲
 
صلّوا على النبي ﷺ 
اللهم صل على سيدنا محمد وعلى اله وصحبه وسلم

 〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰
   
   

No comments:

Post a Comment