السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ
*══❁✿🕳.﷽ .🕳✿❁══*
▪••┈┈•••💧•••┈┈••▪
*::::: 🌳🌱ಮೊಳಕೆ🌱🌳 :::::*
▪••┈┈•✿❁✿•┈┈••▪
☘☘☘☘☘☘☘
💝ಅತ್ಯುತ್ತಮ ದಾನ💖
☘☘☘☘☘☘☘
*****
ಒಂದು ದಿನ ನೆಬಿಯವರು ﷺ ಮಸೀದಿಯಲ್ಲಿ ಕುಳಿತು ತಮ್ಮ ಮುಂದೆ ಆಸೀನರಾಗಿರುವ ಸ್ವಹಾಬಿ ವರ್ಯರುಗಳನ್ನು ನೋಡುತ್ತಾ "ಪ್ರೀತಿಯ ಸ್ವಹಾಬಿಗಳೆ ಬಡವರಿಗೆ ಸಹಾಯ ಮಾಡಲು ನಿಮ್ಮಲ್ಲಿ ಇರುವುದನ್ನು ಕೊಡಿ ಎಂದು ಕೇಳಿಕೊಂಡರು .
ಇದನ್ನು ಕೇಳಿದ ತಕ್ಷಣ ಸ್ವಹಾಬಿಗಳೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಓಡಿದರು . ತಮ್ಮಲ್ಲಿರುವುದನ್ನು ತಂದು ನೆಬಿಯವರಲ್ಲಿ ನೀಡಿದರು .
ಸ್ವಹಾಬಿಗಳೆಲ್ಲರೂ ಅತ್ತಿತ್ತ ಓಡಾಡುವುದನ್ನು ಕಂಡ ಎರಡು ಕಾಲೂ ಎಡಕೈಯ್ಯೂ ಇಲ್ಲದ ಇಬ್ನು ಮುಖೈಲ್ (ರಅ) ರವರು ಅವರನ್ನು ತಡೆದು ನೀವೇಕೆ ಇಷ್ಟು ಆತುರದಲ್ಲಿ ಓಡಾಡುತ್ತಿರುವಿರಿ ಎಂದು ಕೇಳಿದರು .
ಅವರಲ್ಲಿ ಒಬ್ಬರು ಸ್ವಹಾಬಿ ವರ್ಯರು ಹೇಳಿದರು: ನೆಬಿ ﷺ ರವರು ದಾನ ಕೇಳಿರುತ್ತಾರೆ ನಾವು ಅದನ್ನು ನೀಡಲು ಹೋಗುತ್ತಿದ್ದೇವೆ.
ಇದನ್ನು ಕೇಳುವಾಗ ಇಬ್ನು ಮುಖೈಲ್ (ರಅ) ವಿಗೆ ತುಂಬಾ ಬೇಸರವಾಯಿತು . ನಾಳೆ ಸ್ವರ್ಗ ದರ್ಶನ ಕಂಡು ಮರಣ ಹೊಂದುವ ದಾರಿಯಾಗಿದೆ ಪ್ರವಾದಿ ﷺ ಯವರು ಹೇಳಿರುವುದು . ಯಾ ಅಲ್ಲಾಹ್... ನಾನೇನು ನೀಡಲಿ ನನ್ನಲ್ಲೇನೂ ಇಲ್ಲ .
ಅವರು ತೆವಳುತ್ತಾ ತನ್ನ ನೆರೆ ಮನೆಯ ಯಹೂದಿಯನ್ನು ಸಮೀಪಿಸಿ ಅವರೊಂದಿಗೆ ನನಗೇನಾದರೂ ಕೆಲಸ ನೀಡಿ ಎಂದು ಕೇಳಿಕೊಂಡರು .
ಆತ ಕೇಳಿದ ನೀನು ಯಾವ ಕೆಲಸ ಮಾಡಬಲ್ಲೆ ..? ನಿನಗೆ ಎರಡು ಕಾಲೂ ಇಲ್ಲ ಒಂದು ಕೈಯ್ಯೂ ಇಲ್ಲ . ನಿನ್ನಿಂದ ಕೆಲಸ ಮಾಡಲು ಸಾಧ್ಯವೇ...?
ನಾನು ನಿಮ್ಮ ಖರ್ಜೂರದ ಮರಕ್ಕೆ ನೀರು ಹಾಯಿಸುವೆ , ನೀವು ಒಪ್ಪಿಗೆ ನೀಡಿದರೆ .
ಯಹೂದಿಯ ಅನುಮತಿಯೊಂದಿಗೆ ಇಬ್ನು ಮುಖೈಲ್ ರವರು ನೀರೆತ್ತಲು ಬಾವಿಯನ್ನು ಸಮೀಪಿಸಿದರು. ಒಂದು ಕೈಯಿಂದ ಹಗ್ಗವನ್ನು ಎಳೆದು ಹಲ್ಲಿನಿಂದ ಕಚ್ಚಿ ಹಿಡಿದು ತುಂಬಾ ಕಷ್ಟಪಟ್ಟು ನೀರೆತ್ತಿದರು .
ಸುಮಾರು ಹೊತ್ತಿನ ನಂತರ ಯಹೂದಿ ಬಂದು ನೋಡಿದಾಗ ಇಬ್ನು ಮುಖೈಲರನ್ನು ಅಲ್ಲಿ ಕಾಣಲಿಲ್ಲ . ಬಾವಿಯ ಸುತ್ತಲೂ ನೋಡಿದರು ಅಲ್ಲಿ ಅಲ್ಲಲ್ಲಿ ರಕ್ತದ ಕಲೆಗಳು ತುಂಬಿದೆ . ಯಹೂದಿಗೆ ಹೆದರಿಕೆಯಾಯಿತು ಬಾವಿನ್ನೊಮ್ಮೆ ಇಣುಕಿ ನೋಡಿದರು ಇಲ್ಲ ಅಲ್ಲಿ ಯಾವ ಸುಳಿವೂ ಇಲ್ಲ . ತನ್ನ ತೋಟದ ಸುತ್ತಲೂ ನೋಡಿದರು ಅಲ್ಲಿ ರಕ್ತಸಿಕ್ತವಾಗಿ ಮಲಗಿರುವ ಇಬ್ನು ಮುಖೈಲರನ್ನು ಕಂಡು ಓಡಿ ಬಂದು ನೀನು ಯಾಕಿಷ್ಟು ಕಷ್ಟ ಪಡುತ್ತಿದ್ದೀಯಾ...? ಹಣ ಬೇಕಿದ್ದರೆ ನನ್ನಲ್ಲಿ ಕೇಳಬಹುದಿತ್ತಲ್ಲವೇ..?
ಆಗ ಇಬ್ನು ಮುಖೈಲ್ ,
ಇದು ನನಗಾಗಿ ಅಲ್ಲ ಪ್ರವಾದಿಯವರು ಸ್ವದಖ ಕೇಳಿರುತ್ತಾರೆ . ಯಾಚನೆ ಮಾಡಿದ ಹಣ ದಾನಕ್ಕೆ ನೀಡಲು ನಾನು ಇಷ್ಟ ಪಡುವುದಿಲ್ಲ.
ನನಗೆ ಕೂಲಿ ಬೇಕು .
ಆ ಯಹೂದಿ ನಾಲ್ಕು ದಿನಾರನ್ನು ನೀಡಿದನು.
ಅದನ್ನು ಪಡೆದು ಸಂತೋಷದಿಂದ ಪ್ರವಾದಿಯವರ ಸನ್ನಿಧಿಗೆ ತೆವಳುತ್ತಾ ಸಾಗಿದರು .
ಪ್ರವಾದಿ (ಸ್ವ.ಅ) ರವರು ಕೇಳಿದರು ಇಬ್ನು ಮುಖೈಲ್ ಏನಾಯಿತು ನಿಮಗೆ, ನಿಮ್ಮನ್ನು ಯಾರಾದರೂ ಅಕ್ರಮಿಸಿದರೇ...?
ನನ್ನನ್ನು ಯಾರೂ ಅಕ್ರಮಿಸಲಿಲ್ಲ ನೆಬಿಯವರೇ....
ನಾನು ಕೆಲಸ ಮಾಡುತ್ತಿರುವಾಗ ಇದು ಸಂಭವಿಸಿದೆ .
ನೀವು ಯಾತಕ್ಕಾಗಿ ಕೆಲಸ ಮಾಡಿದಿರಿ..?
ನೀವು ನನ್ನಲ್ಲಿ ಸ್ವದಖ ಕೇಳಲಿಲ್ಲವೇ..? ಸ್ವದಖ ನೀಡುವ ಸಲುವಾಗಿ , ನಾನು ಕೆಲಸ ಮಾಡಿದೆನು
ಓ ಪ್ರವಾದಿ ವರ್ಯರೇ ನನಗೆ ಸ್ವರ್ಗ ಕಂಡು ಮರಣ ಹೊಂದಬೇಕು . ನಾನು ಏಕಾಂಗಿಯಾಗುವ ಖಬರಿನಲ್ಲಿ ನನಗೆ ರಕ್ಷಣೆ ಹೊಂದಬೇಕು .
ಪುಣ್ಯ ಪ್ರವಾದಿಯವರು (ಸ್ವ.ಅ) ಎದ್ದು ನಿಂತು ಇಬ್ನು ಮುಖೈಲರನ್ನು ಬಿಗಿಯಾಗಿ ಅಪ್ಪಿಕೊಂಡು ಅತ್ತು ಬಿಟ್ಟರು .
صلّوا على النبي ﷺ
اللهم صل على سيدنا محمد وعلى اله وصحبه وسلم
〰〰❁✿🌹•🌹✿❁〰〰
*✍|🅜|🅤|🅢|🅐|🅕|🅘|🅡|*
〰〰❁✿🌹•🌹✿❁〰〰
*══❁✿🕳.﷽ .🕳✿❁══*
▪••┈┈•••💧•••┈┈••▪
*::::: 🌳🌱ಮೊಳಕೆ🌱🌳 :::::*
▪••┈┈•✿❁✿•┈┈••▪
☘☘☘☘☘☘☘
💝ಅತ್ಯುತ್ತಮ ದಾನ💖
☘☘☘☘☘☘☘
*****
ಒಂದು ದಿನ ನೆಬಿಯವರು ﷺ ಮಸೀದಿಯಲ್ಲಿ ಕುಳಿತು ತಮ್ಮ ಮುಂದೆ ಆಸೀನರಾಗಿರುವ ಸ್ವಹಾಬಿ ವರ್ಯರುಗಳನ್ನು ನೋಡುತ್ತಾ "ಪ್ರೀತಿಯ ಸ್ವಹಾಬಿಗಳೆ ಬಡವರಿಗೆ ಸಹಾಯ ಮಾಡಲು ನಿಮ್ಮಲ್ಲಿ ಇರುವುದನ್ನು ಕೊಡಿ ಎಂದು ಕೇಳಿಕೊಂಡರು .
ಇದನ್ನು ಕೇಳಿದ ತಕ್ಷಣ ಸ್ವಹಾಬಿಗಳೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಓಡಿದರು . ತಮ್ಮಲ್ಲಿರುವುದನ್ನು ತಂದು ನೆಬಿಯವರಲ್ಲಿ ನೀಡಿದರು .
ಸ್ವಹಾಬಿಗಳೆಲ್ಲರೂ ಅತ್ತಿತ್ತ ಓಡಾಡುವುದನ್ನು ಕಂಡ ಎರಡು ಕಾಲೂ ಎಡಕೈಯ್ಯೂ ಇಲ್ಲದ ಇಬ್ನು ಮುಖೈಲ್ (ರಅ) ರವರು ಅವರನ್ನು ತಡೆದು ನೀವೇಕೆ ಇಷ್ಟು ಆತುರದಲ್ಲಿ ಓಡಾಡುತ್ತಿರುವಿರಿ ಎಂದು ಕೇಳಿದರು .
ಅವರಲ್ಲಿ ಒಬ್ಬರು ಸ್ವಹಾಬಿ ವರ್ಯರು ಹೇಳಿದರು: ನೆಬಿ ﷺ ರವರು ದಾನ ಕೇಳಿರುತ್ತಾರೆ ನಾವು ಅದನ್ನು ನೀಡಲು ಹೋಗುತ್ತಿದ್ದೇವೆ.
ಇದನ್ನು ಕೇಳುವಾಗ ಇಬ್ನು ಮುಖೈಲ್ (ರಅ) ವಿಗೆ ತುಂಬಾ ಬೇಸರವಾಯಿತು . ನಾಳೆ ಸ್ವರ್ಗ ದರ್ಶನ ಕಂಡು ಮರಣ ಹೊಂದುವ ದಾರಿಯಾಗಿದೆ ಪ್ರವಾದಿ ﷺ ಯವರು ಹೇಳಿರುವುದು . ಯಾ ಅಲ್ಲಾಹ್... ನಾನೇನು ನೀಡಲಿ ನನ್ನಲ್ಲೇನೂ ಇಲ್ಲ .
ಅವರು ತೆವಳುತ್ತಾ ತನ್ನ ನೆರೆ ಮನೆಯ ಯಹೂದಿಯನ್ನು ಸಮೀಪಿಸಿ ಅವರೊಂದಿಗೆ ನನಗೇನಾದರೂ ಕೆಲಸ ನೀಡಿ ಎಂದು ಕೇಳಿಕೊಂಡರು .
ಆತ ಕೇಳಿದ ನೀನು ಯಾವ ಕೆಲಸ ಮಾಡಬಲ್ಲೆ ..? ನಿನಗೆ ಎರಡು ಕಾಲೂ ಇಲ್ಲ ಒಂದು ಕೈಯ್ಯೂ ಇಲ್ಲ . ನಿನ್ನಿಂದ ಕೆಲಸ ಮಾಡಲು ಸಾಧ್ಯವೇ...?
ನಾನು ನಿಮ್ಮ ಖರ್ಜೂರದ ಮರಕ್ಕೆ ನೀರು ಹಾಯಿಸುವೆ , ನೀವು ಒಪ್ಪಿಗೆ ನೀಡಿದರೆ .
ಯಹೂದಿಯ ಅನುಮತಿಯೊಂದಿಗೆ ಇಬ್ನು ಮುಖೈಲ್ ರವರು ನೀರೆತ್ತಲು ಬಾವಿಯನ್ನು ಸಮೀಪಿಸಿದರು. ಒಂದು ಕೈಯಿಂದ ಹಗ್ಗವನ್ನು ಎಳೆದು ಹಲ್ಲಿನಿಂದ ಕಚ್ಚಿ ಹಿಡಿದು ತುಂಬಾ ಕಷ್ಟಪಟ್ಟು ನೀರೆತ್ತಿದರು .
ಸುಮಾರು ಹೊತ್ತಿನ ನಂತರ ಯಹೂದಿ ಬಂದು ನೋಡಿದಾಗ ಇಬ್ನು ಮುಖೈಲರನ್ನು ಅಲ್ಲಿ ಕಾಣಲಿಲ್ಲ . ಬಾವಿಯ ಸುತ್ತಲೂ ನೋಡಿದರು ಅಲ್ಲಿ ಅಲ್ಲಲ್ಲಿ ರಕ್ತದ ಕಲೆಗಳು ತುಂಬಿದೆ . ಯಹೂದಿಗೆ ಹೆದರಿಕೆಯಾಯಿತು ಬಾವಿನ್ನೊಮ್ಮೆ ಇಣುಕಿ ನೋಡಿದರು ಇಲ್ಲ ಅಲ್ಲಿ ಯಾವ ಸುಳಿವೂ ಇಲ್ಲ . ತನ್ನ ತೋಟದ ಸುತ್ತಲೂ ನೋಡಿದರು ಅಲ್ಲಿ ರಕ್ತಸಿಕ್ತವಾಗಿ ಮಲಗಿರುವ ಇಬ್ನು ಮುಖೈಲರನ್ನು ಕಂಡು ಓಡಿ ಬಂದು ನೀನು ಯಾಕಿಷ್ಟು ಕಷ್ಟ ಪಡುತ್ತಿದ್ದೀಯಾ...? ಹಣ ಬೇಕಿದ್ದರೆ ನನ್ನಲ್ಲಿ ಕೇಳಬಹುದಿತ್ತಲ್ಲವೇ..?
ಆಗ ಇಬ್ನು ಮುಖೈಲ್ ,
ಇದು ನನಗಾಗಿ ಅಲ್ಲ ಪ್ರವಾದಿಯವರು ಸ್ವದಖ ಕೇಳಿರುತ್ತಾರೆ . ಯಾಚನೆ ಮಾಡಿದ ಹಣ ದಾನಕ್ಕೆ ನೀಡಲು ನಾನು ಇಷ್ಟ ಪಡುವುದಿಲ್ಲ.
ನನಗೆ ಕೂಲಿ ಬೇಕು .
ಆ ಯಹೂದಿ ನಾಲ್ಕು ದಿನಾರನ್ನು ನೀಡಿದನು.
ಅದನ್ನು ಪಡೆದು ಸಂತೋಷದಿಂದ ಪ್ರವಾದಿಯವರ ಸನ್ನಿಧಿಗೆ ತೆವಳುತ್ತಾ ಸಾಗಿದರು .
ಪ್ರವಾದಿ (ಸ್ವ.ಅ) ರವರು ಕೇಳಿದರು ಇಬ್ನು ಮುಖೈಲ್ ಏನಾಯಿತು ನಿಮಗೆ, ನಿಮ್ಮನ್ನು ಯಾರಾದರೂ ಅಕ್ರಮಿಸಿದರೇ...?
ನನ್ನನ್ನು ಯಾರೂ ಅಕ್ರಮಿಸಲಿಲ್ಲ ನೆಬಿಯವರೇ....
ನಾನು ಕೆಲಸ ಮಾಡುತ್ತಿರುವಾಗ ಇದು ಸಂಭವಿಸಿದೆ .
ನೀವು ಯಾತಕ್ಕಾಗಿ ಕೆಲಸ ಮಾಡಿದಿರಿ..?
ನೀವು ನನ್ನಲ್ಲಿ ಸ್ವದಖ ಕೇಳಲಿಲ್ಲವೇ..? ಸ್ವದಖ ನೀಡುವ ಸಲುವಾಗಿ , ನಾನು ಕೆಲಸ ಮಾಡಿದೆನು
ಓ ಪ್ರವಾದಿ ವರ್ಯರೇ ನನಗೆ ಸ್ವರ್ಗ ಕಂಡು ಮರಣ ಹೊಂದಬೇಕು . ನಾನು ಏಕಾಂಗಿಯಾಗುವ ಖಬರಿನಲ್ಲಿ ನನಗೆ ರಕ್ಷಣೆ ಹೊಂದಬೇಕು .
ಪುಣ್ಯ ಪ್ರವಾದಿಯವರು (ಸ್ವ.ಅ) ಎದ್ದು ನಿಂತು ಇಬ್ನು ಮುಖೈಲರನ್ನು ಬಿಗಿಯಾಗಿ ಅಪ್ಪಿಕೊಂಡು ಅತ್ತು ಬಿಟ್ಟರು .
صلّوا على النبي ﷺ
اللهم صل على سيدنا محمد وعلى اله وصحبه وسلم
〰〰❁✿🌹•🌹✿❁〰〰
*✍|🅜|🅤|🅢|🅐|🅕|🅘|🅡|*
〰〰❁✿🌹•🌹✿❁〰〰
No comments:
Post a Comment