Friday, 10 July 2020

ಕಾವಲುಗಾರ

السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ
*══❁✿🕳.﷽ .🕳✿❁══*
▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

▪•••┈┈•••💧•••┈┈•••▪
*:::🌳🌱ಕಾವಲುಗಾರ🌱🌳:::*
▪•••┈┈•✿❁✿•┈┈•••▪
                       
ನಾನೊಬ್ಬ ಕಾವಲುಗಾರ , ನನ್ನ ಸಂಪತ್ತಿಗೆ ನಾನೇ ಕಾವಲುಗಾರ , ಯಾರಿಗಾಗಿಯೋ ದುಡಿದು ಯಾರಿಗಾಗಿಯೋ ಸಂಪತ್ತು ಶೇಖರಿಸುವ ಯಾರದೋ ಒಬ್ಬ ಗುಲಾಮನಂತೆ . ನನ್ನ ಶೇಖರಣೆಯಲ್ಲಿ ಏನಾದರೂ ಕೊರತೆ ಕಂಡುಬಂದರೆ ದುಃಖ ತಾಳಲಾಗುವುದಿಲ್ಲ . ಸಂಪಾದನೆಯಲ್ಲಿ ಅಭಿವೃದ್ಧಿ ಕಂಡು ಬಂದರೆ ಕೃತಜ್ಞತೆಯನ್ನೂ ಮರೆಯುತ್ತೇನೆ. ನಾನೇಕೆ ಹೀಗೆ...?

ಬರಿಗೈಯಲ್ಲಿ ಬಂದವನಲ್ಲವೇ...? ಬಲಹೀನನಾಗಿದ್ದವನಲ್ಲವೇ...?
ಪರ ಸಹಾಯವಿಲ್ಲದೆ ಜೀವಿಸಲು ತಿಯದವನಲ್ಲವೇ...?

ಅವನು ನನಗೆ ಆರೋಗ್ಯ ಕರುಣಿಸಿದ
ಅವನು ನನ್ನ ವ್ಯಾಪಾರವನ್ನು ಅಭಿವೃದ್ಧಿಗೊಳಿಸಿದ
ಅವನು ನೀಡಿದವುಗಳಲ್ಲಿ ಅನುಭವಿಸಲು ಕಾಲಾವಧಿ ನೀಡಿದ .
ಅವನು ಕಷ್ಟ ಸುಖಗಳೆರಡನ್ನೂ ನೀಡಿದ .
ಈಗ ಅವನು ನೀಡಿರುವುದನ್ನು ಬಿಟ್ಟು ಕೊಡಲು ಹೇಳುತ್ತಿದ್ದಾನೆ.
ನನ್ನಿಂದ ಈ ನಷ್ಟಗಳನ್ನು ಸಹಿಸಲು ಸಾಧ್ಯವೇ..?

ಇಹಲೋಕದ ನಷ್ಟಗಳು ಈಮಾನಿನ ಸಂಗಾತಿ ಅಲ್ಲವೇ...? ದೇಹದ ಬೆಳವಣಿಗೆ (ಆರೋಗ್ಯ) ಮತ್ತು ಹೇರಳ ಸಂಪತ್ತು ನನಗೆ ಲಭಿಸಿದ ಅನುಗ್ರಹಗಳಲ್ಲವೇ..? ಆದರೂ ಶರೀರದ ಬಲಹೀನತೆ ಮತ್ತು ಸಂಪತ್ತು ನಾಶ ನನಗೆ ತಾಳಲಾರದಷ್ಟು ದುಃಖವನ್ನು ಉಂಟುಮಾಡುತ್ತಿದೆ ಯಾಕೆ . ಈ ಕಷ್ಟ ನಷ್ಟಗಳಲ್ಲೂ ಒಡೆಯನ ಅನುಗ್ರಹವಿದೆ ಅನ್ನುವುದನ್ನು ನಾನು ಮರೆತೆನೇ...? .
ನನ್ನ ಪರಿಶ್ರಮಗಳೆಲ್ಲವೂ  ಇಹಲೋಕಕ್ಕೆ ಸೀಮಿತವಾಯಿತೇ....?
ನಾಳೆಗಾಗಿ ಏನಾದರೂ ಶ್ರಮಿಸಿದೆನೇ...?

ಬೆಳಕಿನ ಹಾದಿಯನ್ನು ತೋರಿದ ಪೂರ್ವಜರ ಜೀವನವು , ಪವಿತ್ರ ಇಸ್ಲಾಂ ಧರ್ಮಕ್ಕೆ ಒಂದು ದಾರಿ ದೀಪವಾಗಿತ್ತು , ಆದರೆ ಇಂದಿನ ತಲೆಮಾರು ಇಹದ ಶೋಕಿನಲ್ಲಿ ತಮಗೆ ನಷ್ಟಗಳನ್ನು ಮಾತ್ರ ಒದಗಿಸುತ್ತಿದೆ . ಸಂಪತ್ತಿನ ಮಹಿಮೆಯೋ...? ,ಅಧಿಕಾರದ ದರ್ಪವೋ..? ,ಆಡಂಬರದ ನಶೆಯೋ..? ನನಗೆ ಇದು ಶಾಶ್ವತವಲ್ಲ ಎಂಬ ತಿಳುವಳಿಕೆ ಇದೆ ಆದರೂ ... ಬಿಟ್ಟು ಕೊಡಲು ಮನಸ್ಸಿಲ್ಲ

ನಮ್ಮ ಪೂರ್ವಜರು..., ಇಹಲೋಕದಲ್ಲಿ ಸಂಪಾದನೆಗೈದ ಸಂಪತ್ತುಗಳನ್ನು ಅಲ್ಲಾಹನ ದಾರಿಯಲ್ಲಿ ನೀಡಿ ಅದಕ್ಕೆ ಬದಲಾಗಿ ಪರಿಪೂರ್ಣ ವಿಶ್ವಾಸವನ್ನು ಪಡೆದವರಾಗಿದ್ದರು . ಖಂಡಿತವಾಗಿಯೂ ಅವರ ಆ ತ್ಯಾಗ ಮಹತ್ವವಾದದ್ದೇ ಆಗಿದೆ .

ನಮ್ಮ ಸಂಪಾದನೆಯು ನಾವು ಭೂಮಿಯಿಂದ ಅಗಲುವಷ್ಟು ಕಾಲ ನಮ್ಮಲಿರುತ್ತದೆ ,ಹೊರತು ಅದು ನಮ್ಮೊಂದಿಗೆ ಶಾಶ್ವತವಾಗಿರುವುದಿಲ್ಲ . ಇರುವಷ್ಟು ಕಾಲ ನಾವು ನಮ್ಮ ಸಂಪತ್ತಿಗೆ ಕಾವಲುಗಾರನಾಗಿರುತ್ತೇವೆ . ನಮ್ಮ ನಂತರ ಬರುವ ವಾರೀಸುದಾರರಿಗೆ ಸೇರಬೇಕಾದ ಆಸ್ತಿಗಳ ಕಾವಲುಗಾರನಷ್ಟೆ...!

ಮಹಾನರಾದ ಶುಐಬ್ (ರಅ) ಹಿಜ್ರ ಹೊರಟಾಗ ದಾರಿ ಮಧ್ಯೆ , ಮುಶ್ರಿಕುಗಳ ಕೈಯಲ್ಲಿ ಸಿಕ್ಕಿಬಿದ್ದಾಗ , ಮಕ್ಕಾ ಕುಫ್ಫಾರುಗಳಾದ ಮುಶ್ರಿಕುಗಳು, "ಎಲ್ಲಿಂದಲೋ ನಮ್ಮ ಊರಿಗೆ ಬಂದು ವ್ಯಾಪಾರ ಮಾಡಿ , ದೊಡ್ಡ ಶ್ರೀಮಂತನಾಗಿ ಈಗ ನೀನು ನಿನ್ನ ಸಂಪತ್ತಿನೊಂದಿಗೆ ರಕ್ಷೆ ಪಡೆಯಲು ನೋಡುತ್ತಿಯೇನೊ..?" ಎಂದು ಹೇಳಿದಾಗ , ಸ್ವಹಾಬಿ ವರ್ಯರಾದ ಶುಐಬ್ (ರಅ) ಅವರಲ್ಲಿ ಹೇಳಿದರು "ದಯವಿಟ್ಟು ನೀವುಗಳು ನನ್ನನ್ನು ತಡೆಯಬೇಡಿ , ನನ್ನ ಸ್ವತ್ತುಗಳೆಲ್ಲವೂ ನಾನು ನಿಮಗೆ ಬಿಟ್ಟು ಕೊಟ್ಟಿರುವೆನು , ನಾನು ನನ್ನ ಪ್ರೀತಿಯ ಪ್ರವಾದಿ(ಸಅ) ರೊಂದಿಗೆ ಸೇರಲು ಹೊರಟಿರುವೆ" . ತನ್ನ ಆಯುಷ್ಯದ ಸಂಪಾದನೆಗಳೆಲ್ಲವನ್ನೂ ತ್ಯಜಿಸಿದ ಆ ಮಹಾನ್ ಸ್ವಹಾಬಿಯವರನ್ನು ಮದೀನದಲ್ಲಿ ಸ್ವೀಕರಿಸಿದ ಸಂದರ್ಭದಲ್ಲಿ ಪುಣ್ಯ ಪ್ರವಾದಿ (ಸಅ) ಹೇಳಿದರು "ನಿಮ್ಮ ವ್ಯಾಪಾರ ಎಷ್ಟೊಂದು ಮಹತ್ವವಾದದ್ದು ಶುಐಬ್ (ರಅ) ನಿಮ್ಮ ಈ ತ್ಯಾಗಕ್ಕೆ ಎಷ್ಟೊಂದು ಪ್ರತಿಫಲ ಲಭಿಸಲಿರುವುದು . ವಿಶ್ವಾಸಕ್ಕೆ ಬದಲಾಗಿ ಇಹಲೋಕವನ್ನು ನೀಡಿದ ಈ ಮಹತ್ ಕಾರ್ಯವು ಒಂದು ಅತ್ಯುತ್ತಮ ವ್ಯಾಪಾರವೆಂದು ಪ್ರವಾದಿಯವರು ಕಂಡರು . ನಮಗೆ ಸೃಷ್ಟಿಕರ್ತನಾದ ಅಲ್ಲಾಹನು ನೀಡಿದ ಸಂಪತ್ತಿನ ಕಾವಲುಗಾರ ಮಾತ್ರವಾಗಿದ್ದಾನೆ ನಾನೆಂಬ ಪ್ರತಿಯೊಬ್ಬರೂ.... ಇರುವುದನ್ನು ಯಾರಿಗೂ ನೀಡದೆ ಕೂಡಿಟ್ಟು ಏನುಮಾಡಲು ಸಾಧ್ಯ...? ಇತರರೊಂದಿಗೆ ಹಂಚಿಕೊಳ್ಳಿ,  ಅಲ್ಲಾಹನ ಮಾರ್ಗದಲ್ಲಿ ದಾನ ಮಾಡಿ ... ಪ್ರತಿಫಲ ಇನ್ಷಾಅಲ್ಲಾಹ್ ನಾಳೆ ಮಹ್ಷರದಲ್ಲಿ ಕಾಣಬಹುದಾಗಿದೆ.

ಅಲ್ಲಾಹನು ತೌಫೀಖ್ ನೀಡಲಿ...ಆಮೀನ್ 🤲

صلّوا على النبي ﷺ 
اللهم صل على سيدنا محمد وعلى اله وصحبه وسلم

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰
   

No comments:

Post a Comment