Sunday, 2 May 2021

ಪಾಣಕ್ಕಾಡ್ ಸಯ್ಯಿದರ ಉದಯ : ಭಾಗ- 03

ಪಾಣಕ್ಕಾಡ್ ಸಯ್ಯಿದ್ ಅಲೀ ಪೂಕೋಯ ತಂಙಳ್ ತಂಙಳ್ ಹಾಗೂ ಪಾಣಕ್ಕಾಡ್ನ ಮಹತ್ವ
ಹುಸೈನ್ ಶಿಹಾಬ್ ಆಟ್ಟಕ್ಕೋಯ ತಂಙಳ್ರನ್ನು ಬ್ರಿಟಷರು ವೆಲ್ಲೂರಿಗೆ ಗಡೀಪಾರು ಮಾಡಿದ ನಂತರವೂ ಪಾಣಕ್ಕಾಡ್ ತಂಙಳ್ ಪದವಿ ಕೊನೆಗೊಳ್ಳಲಿಲ್ಲ. ಆ ಪದವಿಗೆ ಸಯ್ಯಿದ್ ಮುಹಮ್ಮದ್ ಕುಂಞಕ್ಕೋಯ ತಂಙಳ್ ಪಾದಾರ್ಪಣೆಯಾದರು. ಸಯ್ಯಿದ್ ಹುಸೈನ್ ಆಟ್ಟಕ್ಕೋಯ ತಂಙಳ್ ಕಪ್ಪಾಡ್ ವಯಲ್ ಎಂಬ ಸ್ಥಳದಿಂದ ವಿವಾಹವಾಗಿದ್ದರು, ಅದರಲ್ಲಿ ಜನಿಸಿದ ಪುತ್ರರಾಗಿದ್ದಾರೆ, ಸಯ್ಯಿದ್ ಕೋಯಕುಂಞಕೋಯ ತಂಙಳ್ ಹಾಗೂ ಸಯ್ಯಿದ್ ಹುಸೈನ್ ಶಿಹಾಬ್ ಆಟ್ಟಕೋಯ ತಂಙಳ್. ಕೋಯಕುಂಞಕೋಯ ತಂಙಳ್ ಪಾಣಕ್ಕಾಡ್ನಲ್ಲಿ ವಾಸವಾಗಿದ್ದಾಗ ಜನರ ಅಭಯ ಕೇಂದ್ರವಾಗಿದ್ದರು. ನ್ಯಾಯಯುತವಾದ ತೀರ್ಪ್ ಗಳಿಂದ ಜನರು ಸಂತೃಪ್ತರಾಗಿದ್ದರು. ದಾರಿದ್ರ್ಯತೆಯ ಕಾಲದಲ್ಲಿ ತಂಙಳ್ರ ಮನೆಯವರು ಊಟಕ್ಕೆ ಅಕ್ಕಿ ಇಲ್ಲವೆಂದು ತಂಙಳರನ್ನು ನೆನಪಿಸಿದಾಗ, ನೀರನ್ನು ಒಲೆ ಮೇಲಿಡಲು ತಂಙಳ್ ನಿರ್ದೇಶಿಸುತ್ತಿದ್ದರು. ನೀರು ಬಿಸಿಯಾಗುವ ಹೊತ್ತಲ್ಲಿ, ಯಾರಾದರೂ ಅಕ್ಕಿಯೊಂದಿಗೆ ಅಲ್ಲಿಗೆ ಆಗಮಿಸುತ್ತಿದ್ದರು. ಊಟ ತಯಾರಿಯಾದಾಗ ಅಲ್ಲಿದ್ದವರೆಲ್ಲನ್ನೂ ಸೇರಿಸಿ, ಆಹಾರ ಸೇವಿಸುವುದು ಅಲ್ಲಿನ ವಾಡಿಕೆಯಾಗಿತ್ತು. ಅನೇಕ ಅದ್ಬುತ ಕರಾಮತ್ಗಳು ತಂಙಳ್ರಿಂದ ಪ್ರಕಟವಾಗಿದ್ದನ್ನು ಉದ್ದರಿಸಲಾಗಿದೆ. 
ಒಂದು ಸಲ ಓರ್ವ ನಾಪತ್ತೆಯಾಗಿ, ಆರಕ್ಷಕರು ಎಲ್ಲಿ ಹುಡುಕಾಡಿದರೂ, ವಿವರ ಸಿಗದಿದ್ದಾಗ, ಅವರ ಕುಟುಂಬಿಕರು ಪಾಣಕ್ಕಾಡ್ಗೆ ಬಂದು ಅಹವಾಲು ಹೇಳಿದರು. ಬೇರೆ ಯಾವುದೋ ವಿಶೇಷ ವಿಷಯವನ್ನು ಚರ್ಚೆ ಮಾಡುವ ಹೊತ್ತಲ್ಲಾಗಿತ್ತು ಅವರು ಅಲ್ಲಿ ತಲುಪಿದ್ದು. ವಿಷಯ ತಿಳಿದ ತಂಙಳ್ ತಕ್ಷಣ ಹೇಳಿದರು. ಪನಂಬುಝ ಕಾಡಿನಲ್ಲಿ ಮೃತದೇಹವೊಂದು ನೇತಾಡುತ್ತಿದೆ ಜನರು ಹೋಗಿ ನೋಡಿದಾಗ ವಿವರ ಪತ್ತೆಯಾಯಿತು. ಪಾಣಕ್ಕಾಡ್ ಪುತ್ತನ್ಪುರ ಎಂಬ ಮನೆಯಲ್ಲಿ ತಂಙಳ್ ವಫಾತ್ ಆದರು. ಆ ಮನೆಯಲ್ಲಿ ಈಗ ಬಶೀರಲೀ ಶಿಹಾಬ್ ತಂಙಳ್ ವಾಸವಾಗಿದ್ದಾರೆ. ಮನೆಯ ಅಂಗಣದ ಬದಿಯಲ್ಲಿ ಮಹಾತ್ಮರ ಮಖ್ಬರ ಕಾಣಬಹುದು. 
ಸಯ್ಯಿದ್ ಕೋಯಕುಂಞಕೋಯ ತಂಙಳ್ರ ವಿಯೋಗ ನಂತರ ಅವರ ಸಹೋದರರಾದ ಸಯ್ಯಿದ್ ಅಲೀ ಪೂಕೋಯ ತಂಙಳ್ ಪಾಣಕ್ಕಾಡ್ ತಂಙಳ್ ಎಂದು ಪ್ರಸಿದ್ಧಿಯಾದರು. ಅವರು ವಾಸಿಸಿದ್ದು ಕೊಡಪ್ಪನಕ್ಕಲ್ ಮನೆಯಲ್ಲಾಗಿತ್ತು. ದೃಷ್ಟಿರಹಿತರಾಗಿದ್ದ ಮಹಾತ್ಮರಿಗೆ, ಸಂತಾನವಿರಲಿಲ್ಲ. ದೊಡ್ಡ ಸಹೋದರ ಕೋಯಕುಂಞಕೋಯ ತಂಙಳ್ರ ಅಪೇಕ್ಷೆಯಂತೆ, ಅವರ ಪುತ್ರರಾದ ಸಯ್ಯಿದ್ ಪೂಕೋಯ ತಂಙಳ್ರನ್ನು ದತ್ತುಪುತ್ರರಾಗಿ ಸ್ವೀಕರಿಸಿದ್ದರು. ಇವರಾಗಿದ್ದಾರೆ ಜಗತ್ಪ್ರಸಿದ್ಧರಾದ ಪಿ.ಯಂ.ಎಸ್.ಎ. ಪೂಕೋಯ ತಂಙಳ್. ಅಂದಿನಿಂದ ಕೊಡಪ್ಪನಕ್ಕಲ್ ಭವನವು ಖ್ಯಾತಿಯ ಉತ್ತುಂಗಕ್ಕೇರಿತು. ಸಹೋದರರಂತೆ ಅವರು ದರಿದ್ರರಾಗಿರಲಿಲ್ಲ. ದೊಡ್ಡ ಸಂಪತ್ತಿನ ಒಡೆಯರಾಗಿದ್ದರು. ಅವರು ತನ್ನ ಹಾಗೂ ಪತ್ನಿಯ ಎಲ್ಲಾ ಸಂಪತ್ತುಗಳನ್ನು ಸಾಕು ಪುತ್ರರಾದ ಪೂಕೋಯ ತಂಙಳ್ರ ಹೆಸರಲ್ಲಿ ಬರೆದುಕೊಟ್ಟರು. ಕಣ್ಣು ಕಾಣದಿದ್ದರೂ ಅಲೀ ಪೂಕೋಯ ತಂಙಳ್, ಕೊನೆತನಕ ಜನರಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟರು. ಕೊಡಪ್ಪನಕ್ಕಲ್ ಮನೆಯಲ್ಲಿ ಮಹಾತ್ಮರು ವಫಾತ್ ಆದರು. ಪಾಣಕ್ಕಾಡ್ ಜುಮಾಮಸೀದಿ ಸಮೀಪ ಅಂತ್ಯವಿಶ್ರಮಿಸುತ್ತಿದ್ದಾರೆ.

📝 Kalladka_Faizi

No comments:

Post a Comment