Saturday, 17 April 2021

ಪಾಣಕ್ಕಾಡ್ ಸಯ್ಯಿದರ ಉದಯ: ಭಾಗ- 02

ಅಭಯಕೇಂದ್ರ ಪಣಕ್ಕಾಡ್ ಸಯ್ಯಿದ್ ಹುಸೈನ್ ಆಟ್ಟಕ್ಕೋಯ ತಂಙಳ್ ಪಾಣಕ್ಕಾಡ್ ಪ್ರದೇಶದಲ್ಲಿ ವಾಸ ಮಾಡಿದ ನಂತರ, ವಿವಿಧ ಪ್ರದೇಶಗಳ ಜನರು ಪಾಣಕ್ಕಾಡ್ಗೆ ಪ್ರವಹಿಸಿದರು. ದಿನನಿತ್ಯ ಅವರ ಖ್ಯಾತಿಯು ಹೆಚ್ಚುತ್ತಾ ಹೋಯಿತು. 
ಅವರ ತಂದೆಯವರಾದ #ಸಯ್ಯಿದ್_ಮುಹ್ಲಾರ್_ತಂಙಳ್ ಮಲೆಪ್ಪುರದಲ್ಲಿ ವಫಾತ್ ಆಗಿ ಅವರನ್ನು ವಲಿಯಪಳ್ಳಿ ಅಂಗಣದಲ್ಲಿ ದಫನ ಮಾಡಲಾಯಿತು. ಖುತುಬುಝ್ಝಮಾನ್ ಮಂಬುರಂ ತಂಙಳ್ರ ನಂತರ ಮಲೆಬಾರಿನ ಲಕ್ಷಾಂತರ ಜನರಿಗೆ ಪಾಣಕ್ಕಾಡ್ ತಂಙಳ್ ಎಂಬ ಅನುಗ್ರಹವನ್ನು ಅಲ್ಲಾಹನು ನೀಡಿದ್ದಾಗಿದೆ.
ಜನರ ಸಾಮಾನ್ಯ ಸಮಸ್ಯೆಯಿಂದ ಹಿಡಿದು, ಧಾರ್ಮಿಕ, ರಾಜಕೀಯ, ಸಾಮಾಜಿಕ, ವಲಯದಲ್ಲಿನ ಕೊನೆಯ ಮಾತು ಪಾಣಕ್ಕಾಡ್ ತಂಙಳ್ರದ್ದಾಗಿತ್ತು. ಹಾಗಾಗಿ ಅಂದಿನ #ಬ್ರಿಟಿಷ್ ನಾಯಕರು ಒಂದು ಘಟನೆಯಲ್ಲಿ, ತಂಙಳ್ರನ್ನು ಗಡೀಪಾರಿಗೆ ಆಜ್ಞೆ ನೀಡಿ, ವೆಲ್ಲೂರಿಗೆ ಕಳುಹಿಸಿದರು.  
1882 ತ್ರಿಕ್ಕಲ್ಲೂರ್ ಎಂಬಲ್ಲಿ ಬ್ರಿಟಿಷ್ ಸೇನೆ ಹಾಗೂ ಮುಸ್ಲಿಂ ಮಾಪಿಳ್ಳೆಗಳು ಪರಸ್ಪರ ಹೋರಾಡಿದರು. ಅಧಿಕ ಮುಸ್ಲಿಮರನ್ನೂ ಫರಂಗಿಗಳು ವಧಿಸಿದರು. ಆದರೆ ಓರ್ವರಿಗೆ, ಎಷ್ಟು ಗುಂಡೇಟು ನೀಡಿದರೂ ಅವರಿಗೆ ಅದು ತಾಗುವುದೇ ಇಲ್ಲ. ಇದರಲ್ಲಿ ಏನೋ ರಹಸ್ಯವಿದೆಯೆಂದು ಅರಿತ ಬ್ರಿಟಿಷ್ ಮೇಧಾವಿಗಳು, ಅವರನ್ನು ಬಂಧಿಸಿ, ವಿಚಾರಣೆಗೈದರು. ಕೊನೆಗೆ ಅವರು ಆ ರಹಸ್ಯವನ್ನು ಅವರಿಗೆ ತಿಳಿಸಿಕೊಟ್ಟರು. ತನ್ನ ಶರೀರದಲ್ಲಿ ಕಟ್ಟಿದ ಒಂದು ತಾಯಿತವಾಗಿದೆ ಗುಂಡೇಟು ತಾಗದಿರಲು ಕಾರಣವೆಂದು ಹೇಳಿದರು. ಇದು ಪಾಣಕ್ಕಾಡ್ ತಂಙಳ್ ನೀಡಿದ್ದಾಗಿದೆ ಎಂದು ತಿಳಿದ ಬ್ರಿಟಷ್ ಮೇಧಾವಿ ತಂಙಳ್ರನ್ನು ಬಂಧಿಸಲು ವಾರಂಟ್ ಹೊರಡಿಸಿದನು. ಆದರೆ ಯಾರು ಆ ಕಾರ್ಯಕ್ಕೆ ಮುಂದಾಗುವುದು! ತಂಙಳ್ ಬಗ್ಗೆ ತಿಳಿದಿರುವ ಕೆಲವು ಬ್ರಿಟಷರು ಹಿಂಜರಿದರು. ಕೆಲವು ಅಧಿಕಾರಿಗಳು ತಂಙಳ್ರ ಬಳಿ ಹೋಗಿ ಆ ತಾಯಿತವನ್ನು ನಾನು ನೀಡಲಿಲ್ಲ, ಎಂದು ಹೇಳಲು ನಿರ್ಭಂಧಿಸಿದರಂತೆ, ಆದರೆ ತಂಙಳ್ರ ಉತ್ತರ ಹೀಗಿತ್ತು. ಸುಳ್ಳು ಹೇಳುವುದು ನೀಚ ಕೃತ್ಯವಾಗಿದೆ, ಶಿಕ್ಷೆಗೆ ಹೆದರಿ ಸುಳ್ಳು ಹೇಳಲು ನಾನು ತಯಾರಿಲ್ಲ. ಬರುವುದು ಬರಲಿ, ಆ ತಾಯಿತವನ್ನು ನೀಡಿದ್ದು ನಾನಾಗಿದ್ದೇನೆ. ಇದರೊಂದಿಗೆ ತಂಙಳ್ರ ಬಂಧನ ನಿಶ್ಚಯವಾಯಿತು. ಇದನ್ನು ತಿಳಿದ ಹಲವು ಬ್ರಿಟಿಷ್ ಉದ್ಯೋಗಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ಸಮಸ್ತ ಕೇರಳ ಜಂ:ಇಯ್ಯತುಲ್ ಉಲೆಮಾ ಅಧ್ಯಕ್ಷರು ಹಾಗೂ ಘನವಿದ್ವಾಂಸರಾಗಿದ್ದ, ಬಹುಮಾನ್ಯ ಕೆ.ಕೆ. ಸ್ವದಖತುಲ್ಲಾ ಮುಸ್ಲಿಯಾರವರ ಮಾವರಾಗಿದ್ದ ಕೋಡೂರು ಅಧಿಕಾರಿ ಮಂಗತ್ತೊಡಿ ಮಮ್ಮು ಅಧಿಕಾರಿ ರಾಜಿನಾಮೆ ನೀಡಿದವರಲ್ಲಿ ಒಳಗೊಂಡಿದ್ದರು. 
ಕೊನೆಗೆ ತಂಙಳ್ರ ಬಂಧನವಾಗಿ ವೆಲ್ಲೂರಿಗೆ ಕಳುಹಿಸಲಾಯಿತು. ಬಂಧನಕ್ಕೆ ನೇತೃತ್ವ ವಹಿಸಿದ, ಓರ್ವ ಮುಸ್ಲಿಂ ಅಧಿಕಾರಿಯ, ಶರೀರದಲ್ಲಿ ಕ್ಷುದ್ರಕೀಟದ ಹುಣ್ಣು ಪ್ರತ್ಯಕ್ಷಗೊಂಡು ಮರಣ ಹೊಂದಿದ್ದಾರೆಂದು ಹೇಳಲಾಗಿದೆ. ವೆಲ್ಲೂರಿಗೆ ರೈಲುಗಾಡಿಯಲ್ಲಿ ಹೊರಟ ತಂಙಳ್ ದಾರಿಮಧ್ಯೆ ನಮಾಜ್ಗೆ ಹೊತ್ತಾದಾಗ, ತಂಙಳ್ ಗಾಡಿಯೊಂದಿಗೆ ನಿಲ್ಲಲು ಆಜ್ಞೆ ನೀಡಿದಾಗ, ರೈಲು ತಕ್ಷಣ ನಿಂತು, ತಂಙಳ್ ಇಳಿದು, ಅಂಗಶುದ್ಧಿ ಮಾಡಿ ನಮಾಜ್ ನಿರ್ವಹಿಸಿದ ನಂತರ ರೈಲಿಗೆ ಹತ್ತಿದರು. ನಂತರವಾಗಿತ್ತು ರೈಲು ಚಲಿಸಿದ್ದು. ಇದು ಅದ್ಬುತ ಘಟನೆಯಾಗಿ ನೆಲೆನಿಂತಿದೆ. ಇಂದು ವಾಲಯಾರ್ ನಿಲ್ದಾನವಾಗಿ ಆ ಸ್ಥಳವು ಗುರುತಿಸುತ್ತದೆ. ವೆಲ್ಲೂರಿನಲ್ಲಿ ಮಹಾನರು ವಫಾತ್ ಆದರು. ಅಲ್ಲಿನ ಪೇಟೆಮಸೀದಿಯಲ್ಲಾಗಿದೆ ಮಖ್ಬರ. ಪಾಣಕ್ಕಾಡ್ ಪೂಕೋಯ ತಂಙಳ್ರ ಎಲ್ಲಾ ಪುತ್ರರೂ ಮನೆಯಲ್ಲಿ ಪ್ರೀತಿಯ ಹೆಸರಲ್ಲಿ ಗುರುತಿಸುತ್ತಾರೆ. 
ಶಿಹಾಬ್ ತಂಙಳ್ ಕೋಯಮೋನ್, ಉಮರ್ ಅಲೀ ಶಿಹಾಬ್ ತಂಙಳ್ ಮುತ್ತುಮೋನ್, ಸ್ವಾದಿಖ್ ಅಲೀ ಶಿಹಾಬ್ ತಂಙಳ್ ಸ್ವಾದಿಖ್ ಮೋನ್, ಅಬ್ಬಾಸ್ ಅಲೀ ಶಿಹಾಬ್ ತಂಙಳ್ ಅಬ್ಬಾಸ್ ಮೋನ್, ಆದರೆ ಹೈದರ್ ಅಲೀ ಶಿಹಾಬ್ ತಂಙಳ್ರನ್ನು ಹುಸೈನ್ ಶಿಹಾಬ್ ಆಟ್ಟಕ್ಕೋಯ ತಂಙಳ್ರಿಗೆ ಸೇರಿಸಿ ಆಟ್ಟಪೂ.. ತಂಙಳ್ ಎಂದು ಕರೆಯಲಾಗುತ್ತದೆ.

🖋️ ಕಲ್ಲಡ್ಕ ಫೈಝಿ
Skssf_Shanthiangady_Unit 

No comments:

Post a Comment