ಪಾಣಕ್ಕಾಡ್ ವಂಶದ ಬೇರುಗಳು ಸರಿಸುಮಾರು ಇನ್ನೂರು ವರುಷಗಳ ಹಿಂದೆ ಯಾಮನಿನ ಹಳರ್ಮೌತ್ನ ತರೀಂ ಎಂಬ ಪ್ರದೇಶದಿಂದ ಸಯ್ಯಿದ್ ಅಲೀ ಶಿಹಾಬುದ್ದೀನ್ ಎಂಬ ಮಹಾತ್ಮರು ಉತ್ತರ ಮಲೆಬಾರಿನ ವಳಪಟ್ಟಣಂ ಎಂಬ ಸ್ಥಳಕ್ಕೆ ಆಗಮಿಸಿ, ವಾಸಿಸಿದರು. ಇದರೊಂದಿಗೆ ಕೇರಳದಲ್ಲಿ ಶಿಹಾಬುದ್ದೀನ್ ಖಬೀಲ ಪ್ರಾರಂಭವಾಯಿತು. ಅವರು ಶಿಹಾಬ್ ತಂಙಳ್ರ ಆರನೇ ಮುತ್ತಾತರಾಗಿದ್ದಾರೆ. ಅವರ ಪುತ್ರರಾದ ಸಯ್ಯಿದ್ ಹುಸೈನ್ ಶಿಹಾಬುದ್ದೀನ್ ತಂಙಳ್ ಕಣ್ಣೂರಿನ ಪ್ರಸಿದ್ಧವಾದ ಅರಕ್ಕಲ್ ರಾಜವಂಶದಿಂದ ವಿವಾಹವಾಗುವುದರೊಂದಿಗೆ ಕೇರಳದೊಂದಿಗೆ ಅವರ ಬಂಧವು ಸುದೃಢವಾಯಿತು. ಈ ಕುಟುಂಬದಲ್ಲಿ ಆತ್ಮೀಯತೆ ಹಾಗೂ ರಾಜಕೀಯ ಪಾರಂಪರ್ಯವು ವಿಲೀನವಾಗಿ, ಕೇರಳ ಸಮೂಹದಲ್ಲಿ ಅತೀ ವಿಶಿಷ್ಟ ಶ್ರೇಣಿಯಲ್ಲಿ ಶಿಹಾಬ್ ಖಬೀಲ ಪ್ರಖ್ಯಾತಿಯಾಯಿತು. ಆದಂ ನೆಬಿ(ಅ)ರಿಂದ ಪವಿತ್ರವೂ, ಪರಿಪಾವನವೂ ಆ ಪರಂಪರೆಯಲ್ಲಿ ಅಂತ್ಯಪ್ರವಾದಿ ಮುಹಮ್ಮದ್(ಸ) ರವರ ಕುಟುಂಬವನ್ನು ಅಲ್ಲಾಹನು ಕಾಪಾಡಿದ್ದಾನೆ. ಮನುಷ್ಯವರ್ಗಕ್ಕಾಗಿ ಸೃಷ್ಟಿಸಿದ ಕುಟುಂಬ ವ್ಯವಸ್ಥೆಯಲ್ಲಿ ಅತೀ ಉನ್ನತ ಕುಟುಂಬದಲ್ಲಾದೆ ನೆಬಿ(ಸ)ರವರ ಜನನವಾಗಿದ್ದು. ಇದು ಸ್ವಹೀಹುಲ್ ಬುಖಾರಿ ಹಾಗೂ ಇತರ ಹದೀಸ್ ಗ್ರಂಥಗಳಲ್ಲಿ ಉದ್ಧರಿಸಲಾಗಿದೆ. ಆ ಪವಿತ್ರ ಕುಟುಂಬದ ಉನ್ನತ ಸ್ವಭಾವ ಗುಣಗಳು ಮೇಲೈಸಿದ್ದಾಗಿದೆ ಪೌತ್ರ ಪರಂಪರೆ. ನನ್ನ ಎರಡು ಪುತ್ರರು ಎಂದು ವಿಶೇಷತೆ ಪಡೆದ ಹಸನ್(ರ) ಹುಸೈನ್(ರ)ರಿಂದ ಜೀನ್ ಗುಣಗಳ ಆತ್ಮೀಯ ರಹಸ್ಯಗಳನ್ನು ವಾರೀಸು ಪಡೆದ ಸಂತಾನ ಪರಂಪರೆ ಇಂದೂ ಕೂಡಾ ನೆಲೆನಿಂತಿದೆ. ನೆಬಿ(ಸ)ರವರು ಪ್ರಭೋಧನೆ ನಡೆಸಿದ ಕಿತಾಬ್-ಸುನ್ನತ್ಗಳ ವಾರಿಸುದಾರರಾಗಿ, ವಿದ್ವಾಂಸರು ಅಂತ್ಯದಿನತನಕ ನೆಲೆನಿಲ್ಲುವಂತೆ, ನೆಬಿಕುಟುಂಬವೂ ಅಂತ್ಯದಿನತನಕ ಸಮೂಹಕ್ಕೆ ದಾರಿದೀಪಗಳಾಗಿ ನೆಲೆನಿಲ್ಲುತ್ತವೆ.
ಸಮೂಹದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಯ್ಯಿದರೂ, ಆಶಯಪರವಾಗಿ ದಾರಿತೋರಲು ವಿದ್ವಾಂಸರೂ, ಇರುತ್ತಾರೆ. ಇದರ ಬಗ್ಗೆ ನೆಬಿ(ಸ) ಒಂದು ಪ್ರಭಾಷಣದಲ್ಲಿ ಹೀಗೆ ಹೇಳಿದ್ದಾರೆ. ನಾನು ಓರ್ವ ಮನುಷ್ಯನಾಗಿದ್ದೇನೆ. ನನಗೆ ನನ್ನ ರಬ್ಬ್ನ ದೂತರು (ಮಲಕುಲ್ ಮೌತ್) ಬರುತ್ತಾರೆ. ನಿಮಗೆ ನಾನು ಅಮೂಲ್ಯವಾದ ಎರಡು ನಿಧಿಗಳನ್ನು ಇಡುತ್ತೇನೆ. ಒಂದು, ಅಲ್ಲಾಹನ ಕಿತಾಬ್, ನಿಮಗೆ ದಾರಿ ತೋರಲು ಅದರಲ್ಲಿ ಪ್ರಕಾಶವಿದೆ. ಆದ ಕಾರಣ ಅಲ್ಲಾಹನ ಕಿತಾಬನ್ನು ನೀವು ಬಿಗಿಯಾಗಿ ಹಿಡಿಯಿರಿ. ಮತ್ತೊಂದು, ಅಹ್ಲ್ಬೈತ್, ನನ್ನ ಕುಟುಂಬ, ಅವರ ವಿಷಯದಲ್ಲಿ ನಾನು ನಿಮಗೆ ಅಲ್ಲಾಹನನ್ನು ನೆನಪಿಸುತ್ತೇನೆ. (ಸ್ವಹೀಹ್ ಮುಸ್ಲಿಂ)
ಇದು ಎರಡೂ ಅಲ್ಲಾಹನ ಕಿತಾಬ್ ಮತ್ತು ಅಹ್ಲ್ಬೈತ್ ಪರಸ್ಪರ ಬೇರ್ಪಡದೆ ನೆಲೆನಿಂತು, ಪರಲೋಕದಲ್ಲಿ ಹೌಳ್ ಹತ್ತಿರ ನನ್ನ ಬಳಿ ಬರುವುದು. (ಅಹ್ಮದ್, ತುರ್ಮುದೀ)
ಹಾಗಾಗಿ ಖುರ್ಆನಿನ ಪ್ರಕಾಶದಂತೆ ನೆಬಿಕುಟುಂಬವೂ ಸಮೂಹಕ್ಕೆ ಅಲ್ಲಾಹನು ಅರ್ಪಿಸಿದ ಒಂದು ಸಂವಿಧಾನವಾಗಿದೆ. ಇದಾಗಿದೆ, ಪಾಣಕ್ಕಾಡ್ ತಂಙಳ್ ಮೊದಲಾದ ಆತ್ಮೀಯ ನೇತಾರರಿಂದ ಸಮೂಹವು ಅನುಭವಿಸುವುದು, ಇದು ಮುಂದೆಯೂ ಇರುವುದು(ಇ:ಅ)
Kalladka_Faizi
No comments:
Post a Comment