Sunday, 2 May 2021

ಪಾಣಕ್ಕಾಡ್ ಸಯ್ಯಿದರ ಉದಯ : ಭಾಗ- 04

      ಸಯ್ಯಿದ್ ಅಲೀ ಪೂಕೋಯ ತಂಙಳ್ರ ವಫಾತ್ ನಂತರ ಕೆಲವು ಕಾಲದವರೆಗೆ ಪಾಣಕ್ಕಾಡ್ ಸಜೀವವಾಗಿರಲಿಲ್ಲ. ಅದರೆಡೆಯಲ್ಲಿ ಒಂದು ಘಟನೆ ನಡೆಯಿತು. ಓರ್ವ ವ್ಯಕ್ತಿಯು ಮತ್ತೊಬ್ಬರೊಂದಿಗೆ ನೂರು ರುಪಾಯಿ ಸಾಲ ಪಡೆದು ಒಂದು ಚಿನ್ನದ ಸರವನ್ನು ಅಡವಿಟ್ಟರು. ಹಣ ಪಾವತಿಸಿ ಸರವನ್ನು ಹಿಂದೆ ಪಡೆದಾಗ ಅದರಲ್ಲಿನ ಎರಡು ಚಿನ್ನದ ಎಸಲುಗಳು ನಾಪತ್ತೆಯಾಗಿದ್ದವು. ಪರಸ್ಪರ ತರ್ಕಗಳು ಉದ್ಬವಿಸಿ, ಸರದ ಒಡೆಯನು ಪಾಣಕ್ಕಾಡ್ನಲ್ಲಿ ಪೂಕೋಯ ತಂಙಳ್ ಬಳಿ ಸಮಸ್ಯೆಯ ಪರಿಹಾರಕ್ಕಾಗಿ ಸಮೀಪಿಸಿದರು. ತಂಙಳ್ರವರು ಸರವನ್ನು ಎರವಲು ಪಡೆದವನನ್ನು ಬರಲು ಹೇಳಿ, ಒಂದು ಪತ್ರವನ್ನು ನೀಡಿದರು. ಆದರೆ ಆ ಮನುಷ್ಯ ವರ್ತನೆಯು ದಿಕ್ಕಾರಪರವಾಗಿತ್ತು. ಅವನು ಹೇಳಿದನು. ಈ ಸಮಸ್ಯೆಗೆ ಪರಿಹಾರ ನೀಡಲು ಪೂಕೋಯ ಕುಟ್ಟಿಗೆ ಸಾಧ್ಯವಿಲ್ಲ. ಆದಕಾರಣ ನಾನಲ್ಲಿಗೆ ಬರುವುದಿಲ್ಲ ವಿವರ ತಿಳಿದ ಪಾಣಕ್ಕಾಡ್ ತಂಙಳ್ ಈ ರೀತಿ ಹೇಳಿದರು, ಅವರು ಬರುವುದಿಲ್ಲವೆಂದಾಗಿದೆ ಹೇಳಿದ್ದು, ಆದ್ದರಿಂದ ನೀವು ನ್ಯಾಯಾಲಯವನ್ನು ಸಮೀಪಿಸಿರಿ
ಪೆರಿಂದಲ್ಮಣ್ಣ ಮುನ್ಸಿಫ್ ಕೋರ್ಟ್ನಲ್ಲಿ ದಾವೆ ಹೂಡಲಾಯಿತು. ಎರಡೂ ವಿಭಾಗಗಳ ವಾದಗಳನ್ನು ಆಲಿಸಿದ ನ್ಯಾಯಾಲಯ ಕೊನೆಗೆ ಹೇಳಿತು. ಈ ಸಮಸ್ಯೆಯನ್ನು ಎರಡೂ ವಿಭಾಗದವರು ಗೌರವಿಸುವ ವ್ಯಕ್ತಿಯ ಮೂಲಕವಾಗಿ ಪರಿಹರಿಸಿಕೊಳ್ಳಬೇಕು, ಇಲ್ಲವಾದರೆ ಪ್ರತೀ ವಿಭಾಗವು ತಮಗೆ ಸ್ವೀಕಾರವಿರುವ ವ್ಯಕ್ತಿಯ ಹೆಸರನ್ನು ಸೂಚಿಸಬೇಕು ಆಗ ಸರ ಕೊಟ್ಟವರು ಪಾಣಕ್ಕಾಡ್ ಪಿ.ಯಂ.ಎಸ್.ಎ. ಪೂಕೋಯ ತಂಙಳ್ರ ಹೆಸರನ್ನೂ, ಎರವಲು ಪಡೆದವರು ಖಾನ್ಬಹದೂರ್ ಒ.ಪಿ.ಯಂ. ಮುತ್ತುಕೋಯ ತಂಙಳ್ರ ಹೆಸರನ್ನೂ ಸೂಚಿಸಿದರು. ನ್ಯಾಯಾಲಯವು ಇಬ್ಬರನ್ನೂ ಮದ್ಯಸ್ಥರನ್ನಾಗಿ ಮಾಡಿ ಕೇಸ್ಗೆ ಪರಿಹಾರ ಸೂಚಿಸಲು ನಿರ್ದೇಶಿಸಿತು. ಅದರ ಎಲ್ಲಾ ಫಯಲುಗಳನ್ನು ಪೂಕೋಯ ತಂಙಳ್ರಿಗೆ ಕಳುಹಿಸಿಕೊಡಲಾಯಿತು. ಇಬ್ಬರ ವಾದಗಳನ್ನೂ ಕೇಳಿದ ನಂತರ, ತೀರ್ಪ್ ನೀಡಲು ಮುತ್ತುಕೋಯ ತಂಙಳ್, ಪೂಕೋಯ ತಂಙಳ್ರೊಂದಿಗೆ ಕೇಳಿಕೊಂಡರು. ಕಳೆದು ಹೋದ ಚಿನ್ನದ ಸರದ ಎಸಲುಗಳ ಹಣವನ್ನು ಅದರ ಒಡೆಯರಿಗೆ ನೀಡಬೇಕೆಂದಾಗಿತ್ತು ತೀರ್ಪ್. ಇದರೊಂದಿಗೆ ಪಾಣಕ್ಕಾಡ್ ಮತ್ತೆ ಜನನಿಬಿಡವಾಯಿತು. ಸರ್ವ ಸಮಸ್ಯೆಗಳ ಪರಿಹಾರ ಕೇಂದ್ರವಾಗಿ ಪಾಣಕ್ಕಾಡ್ ಪರಿವರ್ತನೆಯಾಯಿತು. 1975-ರಲ್ಲಿ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯ ದಾರುಲ್ ಉಲೂಂ ಅರೆಬಿಕ್ ಕಾಲೇಜಿನ ಒಂದು ಸಭೆಯಲ್ಲಿ ಓರ್ವ ವ್ಯಕ್ತಿಯು ರಾಜಕೀಯ ಕಾರಣಗಳಿಂದ ಮಾನ್ಯ ತಂಙಳ್ರನ್ನು ಅಗೌರವಿಸುವ ರೀತಿಯಲ್ಲಿ ವರ್ತಿಸಿದರು. ಕೊನೆಗೆ ಆ ವ್ಯಕ್ತಿಯು ಮಾನಸಿಕ ಸ್ಥಿಮಿತ ಕಳೆದು ಯಾಚಕರಾಗಿ ಹೋದರು. ಇದು ಪೂಕೋಯ ತಂಙಳ್ರನ್ನು ಅಪಮಾನಿಸಿದ ಕಾರಣವಾಗಿರಬಹುದೆಂದು ಹೇಳಲಾಗಿದೆ. 
ಮಸೀದಿ, ಮದರಸಗಳಿಗೆ, ಶಿಲಾನ್ಯಾಸ ಮಾಡುವುದು, ಸಂಬಾವನೆ ಸ್ವೀಕರಿಸುವುದು, ಮನೆ ಹಾಗೂ ಸಂಸ್ಥೆಗಳ ಉದ್ಘಾಟನೆಗಳು, ರೋಗಿಗಳನ್ನು ಸಾಂತ್ವನಗೊಳಿಸುವುದು, ಎಲ್ಲಿಯೂ ಕ್ಲಿಷ್ಟಕರ ಸಮಸ್ಯೆಗಳಿಗೆ ಪರಿಹಾರ ನಿರ್ದೇಶಿಸುವುದು, ಎಲ್ಲಕ್ಕೂ ಜನರು ಪಾಣಕ್ಕಾಡ್ ತಂಙಳ್ರನ್ನು ಆಶ್ರಯಿಸುತ್ತಿದ್ದರು. ಅನೇಕಾನೇಕ ಅದ್ಬುತ ಘಟನೆಗಳು ತಂಙಳ್ರ ಬಗ್ಗೆ ಉದ್ದರಿಸಲಾಗಿದೆ. 
ಒಂದು ಸಲ ಓರ್ವ ಮಹಳೆಯ ಶರೀರದಲ್ಲಿ ಸರ್ಪವೊಂದು ಸುತ್ತಿಕೊಂಡ ಅವಸ್ಥೆಯಲ್ಲಿ ಸಂಬಂಧಿಕರು ಪಾಣಕ್ಕಾಡ್ಗೆ ಆಗಮಿಸಿದರು. ಸರ್ವರೂ ಪರಿಭ್ರಾಂತಿ ಹೊಂದಿದ ಕ್ಷಣಗಳು, ತಂಙಳ್ರವರು ತನ್ನ ಕೋಣೆಗೆ ತೆರಳಿ ಬಾಗಿಲು ಹಾಕಿ ಪ್ರಾರ್ಥಿಸಿದರು. ಕೆಲಹೊತ್ತು ಕಲೆದ ನಂತರ ಹೊರಗೆ ಬಂದರು. ಆಗ ಮುಂಗುಸಿಯೊಂದು ಎಲ್ಲಿಂದಲೋ ಬಂದು ಆ ಮಹಿಳೆಯ ಶರೀರದಲ್ಲಿದ್ದ ಘಟಸರ್ಪವನ್ನು ಕೊಂದು ಹಾಕಿ, ತುಂಡುಮಾಡಿ ಅಲ್ಲಿಂದ ಮೆರೆಯಾಯಿತು. ಬಂದವರೆಲ್ಲರೂ ನಿಟ್ಟುಸಿರು ಬಿಟ್ಟರು. ಸಂತೋಷದಿಂದ ಮನೆಗೆ ಹಿಂದಿರುಗಿದರು. ಸೌಮ್ಯಶಾಲಿಯಾಲಿಯಾದ ತಂಙಳ್, ಬಹಳ ಮೆತ್ತಗೆ ಸ್ವರದಲ್ಲಿ ಒಂದೆರಡು ಮಾತುಗಳನ್ನು ಮಾತ್ರ ಹೇಳುತ್ತಿದ್ದರು. ಯಾರಿಗೂ ಸಾಧ್ಯವಾಗದ ಕ್ಲಿಷ್ಟಕರ ಸಮಸ್ಯೆಗಳು ಆ ಎರಡು ಮಾತಿನಿಂದ ಪರಿಹಾರವಾಗುತ್ತಿದ್ದವು. ಯಾವ ಹಟಮಾರಿ ಸ್ವಭಾವದವರೂ, ತಂಙಳ್ರವರ ಮುಂದೆ ಬಂದು ನಿಂತರೆ, ನೀರಿಗೆ ಹಾಕಿದ ಉಪ್ಪಿನಂತೆ ಕರಗುತ್ತಿದ್ದರು. ಜಾತಿಮತ ಭೇದವಿಲ್ಲದೆ ತಂಙಳ್ ಸರ್ವಧರನೀಯರಾಗಿದ್ದರು. ಕೇರಳ ರಾಜ್ಯದ ಮುಸ್ಲಿಂ ಲೀಗ್ ಅಧ್ಯಕ್ಷರಾಗಿದ್ದ ಸಯ್ಯಿದ್ ಅಬ್ದುರ್ರಹ್ಮಾನ್ ಬಾಫಖಿ ತಂಙಳ್ರ ವಫಾತ್ ನಂತರ ಸಯ್ಯಿದ್ ಪೂಕೋಯ ತಂಙಳ್ರನ್ನು ಸರ್ವಸಮ್ಮತದಿಂದ, ಆ ಸ್ಥಾನಕ್ಕೆ ಆಯ್ಕೆಗೊಳಿಸಲಾಯಿತು. ಆನಂತರ ಪಾಣಕ್ಕಾಡ್ನ ಕೊಡಪ್ಪನಕ್ಕಲ್ ತರವಾಡ್, ಆತ್ಮೀಯ ಕೇಂದ್ರದಂತೆ, ರಾಜಕೀಯ ಕೇಂದ್ರವಾಗಿಯೂ ಮಾರ್ಪಡುಗೊಂಡಿತು. ಪಾಣಕ್ಕಾಡ್ ತಂಙಳ್ ಸನ್ನಿಧಿಯಲ್ಲಿ ಯಾವುದೇ ವಿವೇಚನೆ ಇರಲಿಲ್ಲ. ಮುಸ್ಲಿಮುರು, ಮುಸ್ಲಿಮೇತರರು, ಸುನ್ನಿಗಳು, ಅಸುನ್ನಿಗಳು, ಎಲ್ಲಾ ಪಕ್ಷಗಳ ರಾಜಕೀಯ ಕಾರ್ಯಕರ್ತರು, ಅಲ್ಲಿನ ನಿತ್ಯ ಸಂದರ್ಶಕರಾಗಿದ್ದರು. ಕೇರಳ ಮುಸಲ್ಮಾನರ ಕಣ್ಣಿನ ಮುತ್ತು ಎಂಬ ಪ್ರಯೋಗವು ಪೂಕೋಯ ತಂಙಳ್ರಲ್ಲಿ ನಿಜವಾಗಿತ್ತು. ಅನೇಕ ಮೊಹಲ್ಲಾಗಳ ಖಾಝಿ, ಹಾಗೂ ಸಮಸ್ತದ ಮುಶಾವರ ಸದಸ್ಯರಾದ ತಂಙಳ್, ಸರ್ವಜನರೆಡೆಯಲ್ಲಿ ಅಂಗೀಕಾರ ಪಡೆದ ಮಹಾವ್ಯಕ್ತಿಯಾಗಿದ್ದರು. ಸರ್ವರಿಗೂ ಅಲ್ಲಿ ನ್ಯಾಯಯುತವಾದ ತೀರ್ಮಾನ ಸಿಗುತ್ತಿತ್ತು. ಸುನ್ನೀ ಯುವಜನ ಸಂಘದ ರಾಜ್ಯಾಧ್ಯಕ್ಷ, ಜಾಮಿಅ: ನೂರಿಯ್ಯಾ, ಅರೆಬಿಕ್ ಕಾಲೇಜು, ಫೈಝಾಬಾದ್, ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ತನ್ನ ಸಾಕುತಂದೆ ಹಾಗೂ ದೊಡ್ಡತಂದೆಯಾದ ಅಲೀ ಪೂಕೋಯ ತಂಙಳ್ರ ಸ್ಮರಣೆಗಾಗಿ ತನ್ನ ಎಲ್ಲಾ ಪುತ್ರರಿಗೆ ಅಲಿ ಸೇರಿಸಿ ನಾಮಕರಣ ಮಾಡಿದರು. 
1975-ಜುಲ್ಯಾ ಆರರಂದು ಪೂಕೋಯ ತಂಙಳ್ ವಫಾತ್ ಆದರು. ಆನಂತರ ಆ ಪದವಿಗೆ ಸಯ್ಯಿದ್ ಮುಹಮ್ಮದ್ ಅಲೀ ಶಿಹಾಬ್ ತಂಙಳ್ ಪಾದಾರ್ಪಣೆಯಾದರು. ತಂದೆ ಆತ್ಮೀಯ ಪದವಿಯೊಂದಿಗೆ ರಾಜಕೀಯ ವಾಗಿಯೂ, ಕೇರಳ ರಾಜ್ಯದ ಮುಸ್ಲಿಂ ಲೀಗ್ನ ಸಾರಥ್ಯ ವಹಿಸಲು ತಂಙಳ್ ನಿಭಂಧಿತರಾದರು. ಮೂರುವರೆ ದಶಕಗಳ ಕಾಲ ತಂಙಳ್ ಆ ಪದವಿಯಲ್ಲಿ ವಿರಾಜಿಸಿದರು. ಪೂಕೋಯ ತಂಙಳ್ರ ಹಳೆಯ ಕಾಲದ ಆಗುಹೋಗುಗಳಿಗೆ ವ್ಯತ್ಯಸ್ಥವಾಗಿ, ಗ್ಲೋಬಲ್ ವಿಲೇಜ್ ಆಗಿ ಜಗತ್ತು ಒಂದು ಚಿಕ್ಕ ಗ್ರಾಮದಂತಾಗಿ, ಬದಲಾದ ಕಾಲದಲ್ಲಿ, ಶಿಹಾಬ್ ತಂಙಳ್ ಎಲ್ಲವನ್ನೂ ಬಹಳ ಸೂಕ್ಷತೆಯಿಂದ, ನಯನಾಜೂಕಿನಿಂದ ಕಾರ್ಯಗಳ ಬಗ್ಗೆ ತಿಳಿದು, ಸಮಸ್ಯೆಗಳಿಗೆ ಪರಿಹಾರವನ್ನು ನಿರ್ದೇಶಿಸಿ, ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದರು. 
ಇದು ಪಾರಂಪರ್ಯವಾಗಿ ಬಂದಂತಹ ನೇತೃತ್ವ ಮಹಿಮೆಯೆಂದು ಹೇಳಬಹುದು. ಸಯ್ಯಿದ್ ಉಮರಲೀ ಶಿಹಾಬ್ ತಂಙಳ್, ಸಯ್ಯಿದ್ ಹೈದರಲೀ ಶಿಹಾಬ್ ತಂಙಳ್, ಸಯ್ಯಿದ್ ಸ್ವಾದಿಖಲೀ ಶಿಹಾಬ್ ತಂಙಳ್, ಸಯ್ಯಿದ್ ಅಬ್ಬಾಸ್ ಅಲೀ ಶಿಹಾಬ್ ತಂಙಳ್, ದೊಡ್ಡ ತಂಙಳ್ರ ಸಹಾಯಿಯಾಗಿ ನೆಲೆನಿಂತರು. ಮಂಗಳವಾರವನ್ನು ಜನರಿಗಾಗಿ ಮೀಸಲಿಟ್ಟರು. ಅನೇಕ ಮೊಹಲ್ಲಾಗಳ ಖಾಝಿ, ಸಂಘ ಸಂಸ್ಥೆಗಳ ಅಧ್ಯಕ್ಷರು, ಉಪದೇಶಕರಾಗಿ ಪಾಣಕ್ಕಾಡ್ ಸಯ್ಯಿದರು ಆಯ್ಕೆಯಾದರು. ಎಲ್ಲಕ್ಕಿಂತಲೂ ಉನ್ನತ ಪದವಿ ಸಯ್ಯಿದ್ ವಂಶದ ಆತ್ಮೀಯತೆಯಾಗಿದೆ. ಸಯ್ಯಿದ್ ಹುಸೈನ್ ಶಿಹಾಬ್ ಆಟ್ಟಕ್ಕೋಯ ತಂಙಳ್ರ ಐದನೇ ಹಿಂಗಾಮಿಯಾಗಿ ಮೂರುವರೆ ದಶಕಗಳ ಕಾಲ ವಿರಾಜಿಸಿದ ಶಿಹಾಬ್ ತಂಙಳ್, ಸಮೂಹಕ್ಕಾಗಿ ತನ್ನ ಜೀವನವನ್ನು ವ್ಯಯಿಸಿ, ತನ್ನದಾದ ಆತ್ಮೀಯ ಲೋಕಕ್ಕೆ ಯಾತ್ರೆ ಹೊರಟಾಗ ತನ್ನ ಪ್ರತಿನಿಧಿಯಾಗಿ ಸಯ್ಯಿದ್ ಹೈದರಲೀ ಶಿಹಾಬ್ ತಂಙಳ್ ಆ ಪದವಿಯಲ್ಲಿ ವಿರಾಜಮಾನರಾದರು.
#ಮುಂದುವರಿಯುವವುದು.......

📝 Kalladka Faizi

No comments:

Post a Comment