ಪಾಣಕ್ಕಾಡ್ ತಂಙಳ್ ಎಂಬ ಹೆಸರಲ್ಲಿ ಓರ್ವರು ಪಾಣಕ್ಕಾಡ್ ಸಯ್ಯಿದರಲ್ಲಿ ಗುರುತಿಸಲ್ಪಡುತ್ತಾರೆ. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಸಯ್ಯಿದ್ ಮುಹಮ್ಮದ್ ಅಲೀ ಶಿಹಾಬ್ ತಂಙಳ್, ಅದಕ್ಕೆ ಮುಂಚೆ ಸಯ್ಯಿದ್ ಪೂಕೋಯ ತಂಙಳ್, ಅವರ ದೊಡ್ಡ ತಂದೆಯವರಾಗಿದ್ದ ಸಯ್ಯಿದ್ ಅಲೀ ಪೂಕೋಯ ತಂಙಳ್, ಸಯ್ಯಿದ್ ಕೋಯಕುಂಞಕೋಯ ತಂಙಳ್, ಹುಸೈನ್ ಶಿಹಾಬ್ ಆಟ್ಟಕ್ಕೋಯ ತಂಙಳ್.
ಪ್ರಥಮವಾಗಿ ಪಾಣಕ್ಕಾಡ್ ತಂಙಳ್ ಎಂದು ಪ್ರಖ್ಯಾತಿಯಾಗಿದ್ದು #ಸಯ್ಯಿದ್_ಹುಸೈನ್_ಶಿಹಾಬ್_ಆಟ್ಟಕ್ಕೋಯ_ತಂಙಳ್ ಆಗಿದ್ದಾರೆ. ಮಹಾತ್ಮರು ಸೂಕ್ಷಶಾಲಿಯಾದ ಘನವಿದ್ವಾಂಸರೂ, ಖ್ಯಾತ ಮುದರ್ರಿಸರೂ ಆಗಿದ್ದರು. ಆನಂತರ ಆ ಕುಟುಂಬದಿಂದ ಓರ್ವರು ಪಾಣಕ್ಕಾಡ್ ತಂಙಳ್ ಎಂದು ಹೆಸರುವಾಸಿಯಾದರು. ಆ ಪದವಿಯನ್ನು ಯಾವುದೇ ಸಮಿತಿಯು ಸಭೆ ಸೇರಿ ಆಯ್ಕೆಗೊಳಿಸಿರುವುದಲ್ಲ. ಅದು ಅಲ್ಲಾಹನು ಆಯ್ಕೆಗೊಳಿಸಿದ ಮಹತ್ತರವಾದ ಪದವಿಯಾಗಿದೆ.
ಪಾಣಕ್ಕಾಡ್ ಸಯ್ಯಿದರು ಪ್ರಖ್ಯಾತಿಯಾಗಿರುವ ಹಿನ್ನೆಲೆಯನ್ನು ಅವಲೋಕಿಸಿದರೆ ಆಶ್ಚರ್ಯಕರವಾದ ಘಟನೆಯೊಂದು ನಡೆದಿರುವುದನ್ನು ಚರಿತ್ರೆಯಿಂದ ತಿಳಿಯಬಹುದು. ಅಲ್ಲಾಹನು ಅದಕ್ಕಾಗಿ ಒಂದು ಸಂದರ್ಭವನ್ನು ಉಂಟುಮಾಡಿದನು. ಪಾಣಕ್ಕಾಡ್ ಗ್ರಾಮದ ಪುರಾತನ ಕಾಲದಲ್ಲಿ ಓಲಕ್ಕರ ತರವಾಡ್ ಎಂಬ ಹೆಸರಲ್ಲಿ ಕುಟುಂಬವೊಂದು ವಾಸವಾಗಿತ್ತು. ಒಂದು ದಿನ ಬೆಳಗ್ಗಿನ ಜಾವ ಎಚ್ಚರಗೊಂಡಾಗ ಆ ಮನೆಯಲ್ಲೊಂದು ಭೀಕರ ದೃಶ್ಯ. ಮನೆಯಲ್ಲಿನ ಎಲ್ಲಾ ಸದಸ್ಯರೂ, ಮನೆಯ ವಿವಿಧ ಕಡೆಗಳಲ್ಲಿ, ಮೃತಶರೀರದಂತೆ ಬಿದ್ದುಕೊಂಡಿದ್ದಾರೆ. ಯಾರಿಗೂ ಎಚ್ಚರವಿಲ್ಲ. ಚಾವಡಿ, ಅಡುಗೆಕೋಣೆ, ಎಲ್ಲಿ ನೋಡಿದರೂ, ಮನುಷ್ಯರೆಲ್ಲರೂ ನೆಲಕ್ಕೊರಗಿದ್ದಾರೆ. ಕಾಲ್ಗಿಚ್ಚಿನಂತೆ ತಿಳಿದ ಈ ವಾರ್ತೆಯು, ಊರಿನ ಜನರೆಲ್ಲರನ್ನೂ ಅಲ್ಲಿ ಒಗ್ಗೂಡಿಸಿತು. ಯಾರಿಗೆ ಕೂಡಾ ಏನಾಯಿತೆಂದು ತಿಳಿಯುವುದಿಲ್ಲ. ಏನು ಮಾಡಬೇಕೆಂದು ತೋಚದ ಸಂದಿಗ್ದ ಘಟ್ಟ.
ಅಂದು ಮಲೆಪ್ಪುರದಲ್ಲಿ ವಾಸವಾಗಿದ್ದ #ವಲಿಯ_ತಂಙಳ್ ಎಂದು ಕರೆಯುತ್ತಿದ್ದ, ಅದ್ಯಾತ್ಮಿಕತೆಯಲ್ಲಿ ಉನ್ನತ ಶ್ರೇಣೆಗೇರಿದ ಮಹಾತ್ಮರಾದ ಸಯ್ಯಿದ್ ಮುಹ್ಲಾರ್ ಶಿಹಾಬುದ್ದೀನ್ ತಂಙಳ್. ಮಲೆಪ್ಪುರದ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದ ಮಹಾತ್ಮರು ಅನೇಕ ಅದ್ಬುತ ಸಿದ್ಧಿಗಳ ಮೂಲಕ ಖ್ಯಾತರಾಗಿದ್ದರು. ನಾಡಿನ ನಾನಾ ಕಡೆಗಳಿಂದ ಜನರು ಸಮಸ್ಯೆಗಳ ಪರಿಹಾರಕ್ಕಾಗಿ ಅವರ ಬಳಿ ಆಗಮಿಸುತ್ತಿದ್ದರು. ಪಾಣಕ್ಕಾಡ್ ಊರಿನ ನೇತಾರರು ಮಲೆಪ್ಪುರದಲ್ಲಿ ವಾಸವಿರುವ ತಂಙಳ್ರ ಬಳಿ ಧಾವಿಸಿ, ನಡೆದ ಘಟನೆಯನ್ನು ವಿವರಿಸಿದರು.
ಕೂಡಲೇ ತಂಙಳ್ ತನ್ನ ಸಮೀಪದಲ್ಲಿದ್ದ ಪ್ರಿಯ ಪುತ್ರರಾದ ಸಯ್ಯಿದ್ ಹುಸೈನ್ ಆಟ್ಟಕ್ಕೋಯ ತಂಙಳ್ರನ್ನು ಪಾಣಕ್ಕಾಡ್ಗೆ ತೆರಳಲು ಹೇಳಿ, ಅವರ ಕೈಯ್ಯಲ್ಲಿ ಒಂದು ಬೆತ್ತವನ್ನು ನೀಡಿದರು. ಅಂದು ದರ್ಸ್ ವಿದ್ಯಾರ್ಥಿಯಾಗಿದ್ದರು ಆಟ್ಟಕ್ಕೋಯ ತಂಙಳ್. ಪಾಣಕ್ಕಾಡ್ಗೆ ತೆರಳಿದ ಅವರು ಆ ಮನೆಯ ವಿವಿಧ ಸ್ಥಳಗಳಲ್ಲಿ ಮೃತಶರೀರದಂತೆ ನೆಲಕ್ಕೊರಗಿದ, ಆ ಶರೀರಗಳ ಬಳಿ ತೆರಳಿ ಪ್ರಿಯ ಪಿತರು ನೀಡಿದ ಬೆತ್ತದ ಮೂಲಕ ಚಿಕ್ಕದಾದ ಒಂದು ಏಟನ್ನು ಕೊಟ್ಟರು. ಆಶ್ಚರ್ಯವೆಂಬಂತೆ ಅವರೆಲ್ಲರೂ ಎದ್ದು ನಿಂತರು. ಇದನ್ನು ಪ್ರತ್ಯಕ್ಷವಾಗಿ ಬೆರಗುಕಣ್ಣಿನಿಂದ ನೋಡಿದ ಊರಿನ ಜನರು ಸಂತೋಷಭರಿತರಾದರು. ಅದಕ್ಕೆ ಕೃತಜ್ಞತೆ ಎಂಬಂತೆ ಮನೆಯ ಯಜಮಾನರು ತನ್ನ ಮನೆಯನ್ನೇ ತಂಙಳ್ರಿಗೆ ಉಡುಗೊರೆಯಾಗಿ ನೀಡಿದರು. ಅವರು ಮತ್ತೊಂದು ಮನೆಯನ್ನು ಕಟ್ಟಿ ಸಮೀಪದಲ್ಲಿ ವಾಸಿಸಿದರು. ಈ ಮನೆಯಲ್ಲಿ ಹುಸೈನ್ ಆಟ್ಟಕ್ಕೋಯ ತಂಙಳ್ ವಾಸಮಾಡಿದರು. ಅಂದಿನಿಂದ ಪಾಣಕ್ಕಾಡ್ ತಂಙಳ್ ಎಂಬ ನಾಮವು ಉದಯವಾಯಿತು.
📝 ಕಲ್ಲಡ್ಕ ಫೈಝಿ
Skssf_Shanthiangady_Unit
Masha Allah.
ReplyDelete