Saturday, 17 June 2023

ಮಿತ್ತಬೈಲ್ ಹಾಜಾರ್(ನ.ಮ)

ಮಿತ್ತಬೈಲ್ ಹಾಜಾರ್ ಎಂದು ಸುಪರಿಚಿತರಾಗಿದ್ದ *ಶೈಖುನಾ ಹಾಜಿ ಕೆ ಅಬ್ದುಲ್ಲಾಹ್ ಮುಸ್ಲಿಯಾರ್ (ನ. ಮ)*  ರವರು ನಮ್ಮನ್ನಗಲಿ 19 ವರ್ಷಗಳಾದವು.  ರಬೀಉಲ್ ಆಖಿರ್ 15, 1423(2003, ಜೂನ್ 16) ರಲ್ಲಾಗಿತ್ತು ಮರಣ ಹೊಂದಿರುವುದು.

ಹಲವಾರು ಮಹಾನುಭಾವರನ್ನು ಅನುಸ್ಮರಿಸುವ ಈ ತಿಂಗಳಲ್ಲಿ ಶೈಖುನಾ ಅಬ್ದುಲ್ಲಾಹ್ ಹಾಜಿ(ನ. ಮ) ರವರ ಅನುಸ್ಮರಣೆ ಕೂಡ ಒಂದು. 

ಮಿತ್ತಬೈಲ್ ಜುಮಾ ಮಸೀದಿಯಲ್ಲಿ ಸುಮಾರು 40 ವರ್ಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸಿದ ಶೈಖುನಾರವರು ತನ್ನ ಹುಟ್ಟೂರಾದ ಕಟ್ಟತ್ತಿಲ ಎಂಬ ಗ್ರಾಮದಿಂದ ಮಿತ್ತಬೈಲ್ ಗೆ ಆಗಮಿಸುವಾಗ, ಅಲ್ಲಿನ ಜನರಿಗೆ ಇಸ್ಲಾಮೀ ಪರವಾದ  ವಿಜ್ಞಾನದ ಕೊರತೆಯಿತ್ತು. ಮಸೀದಿಯು ಹಲವಾರು ಕೊರತೆಗಳಿಂದ ಕೂಡಿದ್ದು ಸುಸಜ್ಜಿತವಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಅವರು ಮಸೀದಿಯ ಜೀರ್ಣೋದ್ದಾರ ಕಾರ್ಯದಲ್ಲಿ ತಮ್ಮಿಂದಾದ ಸೇವೆಯನ್ನು ಮಾಡಿ ಅದರಲ್ಲಿ ಯಶಸ್ಸು ಕಂಡರು.

ಸಾವಿರಾರು ಜನರನ್ನು ಆಧ್ಯಾತ್ಮಿಕ ಪ್ರಕಾಶದೆಡೆಗೆ ಮುನ್ನಡೆಸಲು ಸಕಲ ಕಷ್ಟ ಕಾರ್ಪಣ್ಯಗಳನ್ನು ಸಹಿಸಿ ಜನರ ಆರೋಪಗಳಿಗೆ ಕಿವಿಗೊಡದೆ  ಮರಣದವರೆಗೂ ತನ್ನ ಸೇವೆಯನ್ನು ಸಲ್ಲಿಸಿದರು. 

ಸಾಮೂಹಿಕ, ಸಾಮಾಜಿಕ ಹಾಗೂ  ಮತ ಸೌಹಾರ್ದ  ಶಾಂತಿಯ  ರಂಗದಲ್ಲಿಯೂ ತನ್ನನ್ನು ಭೇಟಿಯಾದವರಿಗೆ ತನ್ನ ಸದ್ಗುಣ ಸ್ವಭಾವದಿಂದ ಜನರ ಸಮಸ್ಯೆಗಳಿಗೆ ತಕ್ಕ ಪರಿಹಾರ ನೀಡಿ ಮನ ತೃಪ್ತಿಯೊಂದಿಗೆ ಹಿಂತಿರುಗುವಂತೆ ಮಾಡುತ್ತಿದ್ದರು. ತನ್ನ *ಅಸ್ಮಾಹ್* ಚಿಕಿತ್ಸೆಯಿಂದ ಮಾರಕವ್ಯಾದಿ  ರೋಗಗಳ ನಿವಾರಣೆಯಾಗುವಂತೆ ಮಾಡುತ್ತಿದ್ದ ಶೈಖುನಾ, ಯಾವುದೇ ಸಂಘಟನೆ ಹಾಗೂ ಸಂಪತ್ತಿಗೆ ತಲೆಬಾಗದೆ ಜನಹೃದಯದಲ್ಲಿ ಮೆಚ್ಚುಗೆಯನ್ನು  ಪಡೆದಿದ್ದರು. 

ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಿ ಜನರನ್ನು ದೀನಿನ ನಿಯಮಗಳನ್ನು ಅನುಸರಿಸಿ ಜೀವಿಸುವಂತೆ ಮಾಡಲು ಹಲವಾರು ಪ್ರಭಾಷಣಗಳನ್ನು,  ಕ್ಲಾಸ್ಗಳನ್ನೂ,  ನಡೆಸಿದರಲ್ಲದೆ, ಹಲವಾರು ಗ್ರಂಥಗಳ  ದರ್ಸ್ ನಡೆಸಿಯೂ ಸರಿಯಾದ ದಾರಿಯನ್ನು ತೋರಿಸಿಕೊಟ್ಟರು. 

*ಶೈಖುನಾ ಮಿತ್ತಬೈಲ್ ಅಬ್ದುಲ್ ಜಬ್ಬಾರ್  ಉಸ್ತಾದರನ್ನು* ಮುದರ್ರಿಸರಾಗಿ ನೇಮಕಮಾಡುವ ಮೂಲಕ ಸುಪ್ರಸಿದ್ದ ದರ್ಸ್ ನ್ನು ಮಿತ್ತಬೈಲ್ ನಲ್ಲಿ  ಆರಂಭಿಸುವಲ್ಲಿ ಶೈಖುನಾ ರವರ  ಪಾತ್ರವು ಅಪಾರವಾಗಿತ್ತು.  

ಮಿತ್ತಬೈಲ್ ದರ್ಸ್ ನ್ನು,  ಶೈಖುನಾರವರು ಅಪಾರವಾಗಿ ಗೌರವಿಸುತ್ತಿದ್ದ ತನ್ನ ಮಾವನವರು ಕೂಡ ಆಗಿರುವ , ಅಲ್ಲಾಹನ ಆರಿಫ್ ಗಳಲ್ಲೊಬ್ಬರಾದ *ಅಲ್ ಹಾಜ್ ಶೈಖುನಾ ವಿ.ಕೆ. ಅಡ್ಯಾರ್ ಕಣ್ಣೂರ್ ಮುಹಮ್ಮದ್ ಮುಸ್ಲಿಯಾರ್(ಖ. ಸಿ)* ರವರು ಸುಪ್ರಸಿದ್ದ ಫತ್ಹುಲ್ ಮುಈನ್ ಎಂಬ ಗ್ರಂಥವನ್ನು ಹೇಳಿ ಕೊಡುವ ಮೂಲಕ ಆರಂಭಿಸಿದ್ದರು.  ಅಂದಿನಿಂದ ಮಿತ್ತಬೈಲ್ ಎಂಬ ಊರು  ಮತ್ತಷ್ಟು ಪ್ರಸಿದ್ಧವಾಗತೊಡಗಿತು.

ಶೈಖುನಾ ಅಬ್ದುಲ್ಲಾಹ್ ಹಾಜಿ ಯವರು ಮಿತ್ತಬೈಲ್ ಜುಮಾ ಮಸೀದಿಯ ವಠಾರದಲ್ಲಿ ಅಂತ್ಯ ವಿಶ್ರಮ ಗೊಳ್ಳುತ್ತಿರುವ *ವಲಿಯುಲ್ಲಾಹಿ ಶೈಖ್(ಖ.ಸಿ)* ರವರ ಉರೂಸಿನ ಸಂದರ್ಭದಲ್ಲಿ ಅವರ  ಕರಾಮತ್ತೊಂದನ್ನು ವಿವರಿಸುತ್ತಾ  "ಅಲ್ಲಾಹನ ಔಲಿಯಾಗಳು ಮರಣ ಹೊಂದಿದ್ದರೂ ಅವರ ಕರಾಮತುಗಳು ಕೊನೆಕೊಳ್ಳುವುದಿಲ್ಲ ಎಂಬುದಕ್ಕೆ ತನ್ನ ಸ್ವಂತ ಅನುಭವವೊಂದನ್ನು ವಿವರಿಸಿದ್ದರು.  ಶೈಖುನಾರವರು ಮಿತ್ತಬೈಲ್ ನಲ್ಲಿ ಖತೀಬ್ ಸೇವೆ ಆರಂಭಿಸಿದ ಕಾಲದಲ್ಲಿ, ದರ್ಗಾ ಝಿಯಾರತ್ ಗೆ ಬರುವವರ ಅನುಕೂಲಕ್ಕಾಗಿ ಬ್ಲಾಕ್ ಬೋರ್ಡ್ ನಲ್ಲಿ ಯಾಸೀನ್ ಬರೆದಿಟ್ಟಿದ್ದರು.  ಕೈಬರಹದಲ್ಲಿ ಉಂಟಾದ ಲೋಪವೊಂದು ಶೈಖುನಾರವರ ಗಮನಕ್ಕೆ ಬಂದಿರಲಿಲ್ಲ.  ಅಂದು ರಾತ್ರಿ ಒಂದು ಅಪರಿಚಿತ ವ್ಯಕ್ತಿಯು ಸ್ವಪ್ನದಲ್ಲಿ ಬಂದು ಆ ಲೋಪವಿರುವ ಆಯತನ್ನು ಸೂಚಿಸಿ ಸರಿಪಡಿಸಲು ಹೇಳಿದರು. ತಾವು ಯಾರು ಎಂದು  ಶೈಖುನಾ ವಿಚಾರಿಸಿದಾಗ  'ತಾನು ಇಲ್ಲಿಯೇ ಮಕ್ಬರದಲ್ಲಿರುವ ವ್ಯಕ್ತಿ' ಎಂದಾಗ ಎಚ್ಚರಗೊಂಡ ಶೈಖುನಾ ತಕ್ಷಣವೇ  ತಾನು ಬರೆದಿರುವ ಆಯತನ್ನು ಕೂಲಂಕುಷವಾಗಿ ಗಮನಿಸಿದಾಗ  ಸ್ವಪ್ನದಲ್ಲಿ  ಸೂಚಿಸಿರುವ ಅದೇ ಅಯತ್ತಿನಲ್ಲಿ ಕೈ ಬರಹ ಲೋಪ ಸಂಭವಿಸಿರುವುದು ಖಚಿತವಾಯಿತು. ತಕ್ಷಣ ಅದನ್ನು ಸರಿಪಡಿಸಿ ಬರೆದರು.
ಹಲವಾರು ಉಲಮಾಗಳಲ್ಲಿ  ಸಂಪರ್ಕವಿದ್ದ ಶೈಖುನಾ ಅಬ್ದುಲ್ಲಾಹ್ ಹಾಜಿ ಯವರು *ತಾಜುಲ್ ಉಲಮಾ ಸಯ್ಯದ್ ಅಬ್ದುಲ್ ರಹ್ಮಾನ್  ಉಳ್ಳಾಲ ತಂಗಳ್(ಖ.ಸಿ) ರವರ ಪ್ರಧಾನ ಶಿಷ್ಯರಾಗಿದ್ದರು.* ಕೇರಳದಲ್ಲಿ ಕ್ರಿಶ್ಚಿಯನ್ ಮಿಶಿನರಿಗಳ ವಂಚನೆಗೊಳಗಾಗಿ ಹಲವಾರು ಮುಸ್ಲಿಮರು ಮತಾಂತರಗೊಂಡ ಸಂದರ್ಭದಲ್ಲಿ *ಶೈಖುನಾ ಶಂಸುಲ್ ಉಲಮಾ ಇ.ಕೆ.ಅಬೂಬಕ್ಕರ್  ಮುಸ್ಲಿಯಾರ್  (ಖ.ಸಿ)* ರವರು ಪಾದ್ರಿಗಳ ವಿರುದ್ಧ ನಡೆಸಿದ ಸುಪ್ರಸಿದ್ದ ಪ್ರಭಾಷಣವನ್ನು ಸಭೆಯಲ್ಲಿ  ಕುಳಿತು ಆಲಿಸಿದ ಶೈಖುನಾ,  ತನ್ನ ಶಿಷ್ಯರಿಗೆ ಆ ಅದ್ಬುತ  ಸಂವಾದದ  ಬಗ್ಗೆ ಹಾಗೂ  ಅದರ  ಅನಿವಾರ್ಯತೆಯು  ಆ ಸಂದರ್ಭದಲ್ಲಿ  ಎಷ್ಟು ಅಗತ್ಯವಾಗಿತ್ತು ಎಂಬುದರ ಕುರಿತು ಹಲವರಿಗೆ ವಿವರಿಸಿದ್ದರು. 

1944 ರಲ್ಲಿ,  ಕೆಲವು ಖಾದಿಯನಿಗಳು ಹಾಗು ಇನ್ನಿತರ  ನೂತನವಾದಿಗಳು ಕರ್ನಾಟಕದಲ್ಲಿ ಉಲಮಾಗಳ ಅಭಾವವನ್ನು ಕಂಡು ತಮ್ಮ ಆಧಿಪತ್ಯ ಸ್ಥಾಪಿಸಲು ಶ್ರಮಿಸಿದಾಗ, ಅವರ ಕುಫ್ರಿಯತ್ತಿನ ವಾದವನ್ನು  ಪರಾಜಯಗೊಳಿಸಲು  ಪಾಣೆಮಂಗಳೂರಿನ ಗುಡ್ಡೆಯಂಗಡಿಯಲ್ಲಿ ಅಂತ್ಯವಿಶ್ರಮಗೊಳ್ಳುತ್ತಿರುವ  *ಮರ್ಹೂಂ ಹಝರತ್ ಶೈಖ್ ಅಬ್ಬಾಸ್ ಮೌಲವಿ(ಖ.ಸಿ)* ರವರೊಡನೆ ಚರ್ಚೆ ನಡೆಸುವಂತೆ ಮನವಿ ಮಾಡಿದ್ದರು. ರಾತ್ರಿಯಿಂದ  ಸುಬ್ಹ್ ಬಾಂಗ್ ನ ವರೆಗೂ  ಚರ್ಚೆ ನಡೆಸಿ ಪರಾಜಿತರಾದ ಖಾದಿಯನಿಗಳು, ಮಂಜೇಶ್ವರದ  ಉದ್ಯಾವರಕ್ಕೆ  ತೆರಳಿ ಫಿತ್ನ ನಡೆಸಿದಾಗ, ಅಲ್ಲಿನ ಪ್ರಮುಖ ವ್ಯಕ್ತಿಯಾದ  ಉದ್ಯಾವರ ಕಜಯಿಲ್ ಮುಹಮ್ಮದ್ ಎಂಬವರಿಗೆ ಈ ಮೊದಲು ಪಾಣೆಮಂಗಳೂರಿನಲ್ಲಿ ಚರ್ಚಿಸಿದ ವಿಷಯವನ್ನು  ಸಾಬೀತುಪಡಿಸುವ  ಮೂಲಕ ಖಾದಿಯಾನಿ ಆಶಯ ಸ್ವೀಕರಿಸಿದ ಕೆಲವರನ್ನು ಜಮಾಅತಿನಿಂದ ಹೊರಹಾಕುವಂತೆ ಮಾಡಿ  ಖಾದಿಯನಿಗಳು ಇಲ್ಲಿ  ನುಸುಳದಂತೆ ಸಮುದಾಯವನ್ನು ಕಾಪಾಡಿದ ಅಪೂರ್ವ ಘಟನೆಗಳನ್ನು ಶೈಖುನಾರವರು  ನಮ್ಮಲ್ಲಿ ಹಲವರಿಗೆ ವಿವರಿಸಿದ್ದಾರೆ.  

ಮರಣ ಹೊಂದುವ ಒಂದು ವಾರ  ಮುಂಚೆ ಶುಕ್ರವಾರದಂದು  ಜುಮಾ ನಮಾಜ್ ಬಳಿಕ ಜನರನ್ನು ಉದ್ದೇಶಿಸಿ ಮಾತನಾಡುತ್ತಾ *ನಮ್ಮೂರಲ್ಲಿ ಮಳೆ ಇಲ್ಲದೆ ಎಲ್ಲರೂ ಕಷ್ಟ ಅನುಭವಿಸುತ್ತಿದ್ದಾರೆ,*  ಆದುದರಿಂದ ಮಳೆ ಬರಲು ಪ್ರಾರ್ಥನೆ ನಡೆಸುವ ಮೊದಲು ಜನರಿಗೆ ತೌಬಾ ಹೇಳಿಕೊಟ್ಟು, ಮಳೆಗಾಗಿ ಭಕ್ತಿ ನಿರ್ಭರವಾಗಿ ದುಆ ಮಾಡಿದ್ದರು. ಶೈಖುನಾರವರ  ದುಆ ದ ಫಲವಾಗಿ ಅಂದು ರಾತ್ರಿ ಭಾರೀ ಮಳೆಯಾಗಿತ್ತು. 

ಮರಣ ಹೊಂದುದಕ್ಕೆ ಮೂರು  ದಿವಸಗಳ ಮೊದಲು ಮಿತ್ತಬೈಲಿನಲ್ಲಿ ಪ್ರತಿ ವರ್ಷ ನಡೆಯುವ ರಾತೀಬ್ ಹಾಗೂ ವಾರ್ಷಿಕ ಮಹಾ ಸಭೆಯಲ್ಲಿ  ಮಾಡಿದಂತಹ ಭಾಷಣದಲ್ಲಿ ಜಮಾಅತ್ತಿನ ಜನರೆಲ್ಲರನ್ನು ಸಾಕ್ಷಿ ನಿಲ್ಲಿಸಿ ಕೇಳಿದರು *"ನಾನು ಈ ಮಸೀದಿಯಲ್ಲಿ 40 ವರ್ಷ ಗಳ ಕಾಲ ಖತೀಬಾಗಿ ಸೇವೆ ಸಲ್ಲಿಸಿದ್ದೇನೆ, ಇದರೆಡೆಯಲ್ಲಿ ಯಾರಿಗಾದರೂ ಉಪಕಾರ ಮಾಡದಿದ್ದರೂ ಉಪದ್ರವನ್ನು ಮಾಡಿದ್ದೆಯಾ "?* ಇದಕ್ಕೆ ಉತ್ತರವಾಗಿ ಅಲ್ಲಿ ನೆರೆದಿರುವ ಎಲ್ಲರೂ ಒಂದೇ ಸ್ವರದಲ್ಲಿ "ಇಲ್ಲ" ಎಂದುತ್ತರಿಸಿದರು.  ಅದಕ್ಕೆ ಶೈಖುನಾ ಹೇಳಿದರು "ಹಾಗಾದರೆ ನೀವೆಲ್ಲರೂ ತಕ್ಬೀರ್ ಹೇಳಬೇಕು". ಸಭಿಕರು ಗೌರವದಿಂದ ತಕ್ಬೀರ್ ಹೇಳಿದರು ಆಗ ಶೈಖುನಾರವರು ಎಲ್ಲರಿಗೂ ದುಆ ಮಾಡಿ ಸಲಾಂ ಹೇಳಿ ಮನೆಗೆ ತೆರಳಿದರು. ಮನೆಗೆ ತೆರಳಿದ ಶೈಖುನಾರಿಗೆ ಎದೆ ನೋವು ಕಾಣಲಾರಂಭಿಸಿತು. ತಕ್ಷಣವೇ ಮಂಗಳೂರು ಹೈಲಾಂಡ್ ಆಸ್ಪತ್ರೆಗೆ ದಾಖಲಿಸಿದರು. ಮೂರು ದಿನ ಕಳೆದು ನಾಲ್ಕನೇ ದಿನ ಸೋಮವಾರ ರಾತ್ರಿ ಶೈಖುನಾರವರು ಈ ಲೋಕದಿಂದ ಕಣ್ಮರೆಯಾದರು.  

ಮಯ್ಯಿತ್ ನಮಾಜ್ ಗೆ  ಆತ್ರಾಡಿ ಖಾಝಿ ಶೈಖುನಾ ಅಲ್ ಹಾಜ್ ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವ ವಹಿಸಿದರು.  ಮಿತ್ತಬೈಲ್ ಜುಮಾ ಮಸೀದಿಯ ವಠಾರದಲ್ಲೇ  ದಫನ ಮಾಡಲಾಯಿತು. 

ಸೌಕರ್ಯ ಸೌಲಭ್ಯಗಳ  ಕೊರತೆ ಇದ್ದ ಆ ಕಾಲದ ಉಸ್ತಾದರು ದೀನಿಗಾಗಿ, ಮಸೀದಿ ಮತ್ತು ಮದರಸಗಳಿಗಾಗಿ ಸಹಿಸಿರುವ ಕಷ್ಟಗಳು ಅಪಾರವಾಗಿದೆ.ಆದ್ದರಿಂದ ಶೈಖುನಾರವರು ಮರಣ ಹೊಂದಿದ ಈ ತಿಂಗಳಲ್ಲಿ ಸಾಧ್ಯವಿದ್ದವರು ಯಾಸೀನ್ ಸೂರತ್ತನ್ನು ಅಥವಾ ಕನಿಷ್ಠ ಫಾತಿಹಾ ಸೂರತ್ತನ್ನಾದರೂ ಓದಿ ಮಹಾನರ ಸನ್ನಿಧಿಗೆ ಹದಿಯಾ ಮಾಡುವುದು ನಮ್ಮ ಕರ್ತವ್ಯವಾಗಿದೆ.

ಈಗ ಮಿತ್ತಬೈಲ್  ದರ್ಗಾದ  ಸಮೀಪ ಮೂರು ಮಹಾಪುರುಷರ ಮಕ್ಬರಗಳೂ ಕಾಣಲು ಸಾಧ್ಯ.  ಮಿತ್ತಬೈಲ್ ದರ್ಸಿನ್ ಸ್ಥಾಪಕರಾದ  *ಶೈಖುನಾ ಅಡ್ಯಾರ್ ಕಣ್ಣೂರ್ ಮುಹಮ್ಮದ್ ಹಾಜಿ(ಖ.ಸಿ), ಮಿತ್ತಬೈಲ್ ಖತೀಬ್ ಶೈಖುನಾ ಅಬ್ದುಲ್ಲಾಹ್ ಹಾಜಿ(ನ.ಮ) ಮತ್ತು ಮಿತ್ತಬೈಲ್ ಮುದರ್ರಿಸ್ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್(ನ.ಮ)*
 
ಅಲ್ಲಾಹು ನಮ್ಮೆಲ್ಲರನ್ನು ಆ ಮಹಾಪುರುಷರ ಜತೆ ಜನ್ನಾತುಲ್ ಫಿರ್ದೌಸ್ನಲ್ಲಿ  ಒಂದು ಗೂಡಿಸಲಿ.  ಆಮೀನ್.. 

✍️ *ಅಬೂ ತ್ವಲಾಲ್*

Sunday, 28 August 2022

ಶೈಖುನಾ ಚೇಲಕ್ಕಾಡ್ ಉಸ್ತಾದ್

ಇನ್ನಾಲಿಲ್ಲಾಹಿ ವ ಇನ್ನಾ ಇಲೈಹೀ ರಾಜಿಹೂನ್.
ಶೈಖುನಾ ಚೇಲಕ್ಕಾಡ್ ಉಸ್ತಾದ್ ವಫಾತಾದರು.

ಮಹಾನರಾದ ಶೈಖುನಾ ಚೇಲಕ್ಕಾಡ್ ಉಸ್ತಾದ್ 2004ರಿಂದ ಬಹು! ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಮುಶಾವರ ಅಂಗವಾಗಿದ್ದರು,ವಯೋಸಹಜ ಅನಾರೋಗ್ಯ ಕಾರಣದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತಿದ್ದ ಶೈಖುನಾರು ತನ್ನ 91ನೇ ವಯಸ್ಸಿನಲ್ಲಿ ಇಂದು ಅಲ್ಲಾಹನೆಡೆಗೆ ಯಾತ್ರೆಗೈದರು.
ಸಂಜೆ ನಾಲ್ಕು ಘಂಟೆಗೆ ಚೇಲಕ್ಕಾಡ್ ಜಮಾತ್ ಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ.

 ಸಮಸ್ತ ಕೋಝಿಕ್ಕೋಡು ಜಿಲ್ಲಾ ಅಧ್ಯಕ್ಷರಾಗಿದ್ದ ಶೈಖುನ ಉಸ್ತಾದರು,ಚೇಲಕ್ಕಾಡ್ ಕುಳಮ್ಮುಳ್ಳದಲ್ಲಿ ಅಬ್ದುಲ್ಲಾ ಮುಸ್ಲಿಯಾರ್ ಮತ್ತು ಕುಂಞಾಮಿ ದಂಪತಿಗಳಿಗೆ ಜನಿಸಿದ ಶೈಖುನಾ ಚೇಲಕ್ಕಾಡ್ ಉಸ್ತಾದ್ ಸಾವಿರಾರು ಶಿಷ್ಯರ ಗುರುವಾಗಿದ್ದಾರೆ.
ವಯನಾಡಿನ ವಾಲಾಟ್ಟ್ ಮಸೀದಿಯಲ್ಲಿ 45ವರ್ಷ ಸೇವೆಸಲ್ಲಿಸಿದ್ದರು,ತಂದೆಯಾಗಿದ್ದಾರೆ ಶೈಖುನಾರ ಮೊದಲ ಗುರುವಾಗಿದ್ದರು.
ನಾದಾಪುರಂ,ಚೆಮ್ಮಂಕಡವ್,ಪೋಡಿಯಾಡ್,ಮೇಲ್ಮುರಿ,
ವಾಝಕ್ಕಾಡ್,ಪಾರಕ್ಕಡವ್,ನಲ್ಲಿ ಕಲಿತ ನಂತರ 1962ರಲ್ಲಿ ವೆಲ್ಲೂರಿನ ಭಾಖಿಯಾತ್ ನಲ್ಲಿ ಮೌಲವಿ ಫಾಳಿಲ್ ಭಾಖವಿ ಬಿರುದು ಪಡೆದರು.

ಶೈಖುನಾ ಶಂಸುಲ್ ಉಲಮಾ ನ.ಮ.,ಕಣ್ಣಿಯತ್ ಉಸ್ತಾದರು,ಕುಟ್ಟಿ ಮುಸ್ಲಿಯಾರ್ ಫಳ್ಪರಿ,ಕೀಝಾನ ಕುಂಞಿ ಅಬ್ದುಲ್ಲಾ ಮುಸ್ಲಿಯಾರ್,ಕಾನ್ನಾತ್ ಅಬ್ದುಲ್ಲಾ ಮುಸ್ಲಿಯಾರ್,ಶೈಖ್ ಹಸನ್ ಹಝರತ್,ಶೈಖ್ ಅಬೂಬಕ್ಕರ್ ಹಝರತ್,ಮುಹಮ್ಮದ್ ಶಿರಸಿ ,ಮುಂತಾದ ಮಹಾನರು ಶೈಖುನಾ ಪ್ರಧಾನ ಗುರುಗಳಾಗಿದ್ದರು.

ವೆಲ್ಲೂರು ಬಾಖಿಯಾತ್ ನಲ್ಲಿ ಪದವಿ ಪಡೆದ ನಂತರ ಇವರು ಆಂದೋನಾ,ಕೂವಲ್ಲೂರು,ಇರ್ಗೂರು,ಕಂಡಿಪರಂ,ಚೀಯೂರ್,ಚೇಲಕ್ಕಾಡ್ ಮುಂತಾದ ಕಡೆ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದರು.
ಪಟ್ಟಿಕ್ಕಾಡ್ ಜಾಮಿಃಯ ನೂರಿಯ್ಯ ದಲ್ಲಿ ಸುಮಾರು 11 ವರ್ಷ,ದಾರುಸ್ಸಲಾಂ ಅರಬಿಕ್ ಕಾಲೇಜಿನಲ್ಲಿ 7ವರ್ಷ,ಸಿ.ಎಮ್. ಮಕಾಮ್ ನಲ್ಲಿ ಆರು ವರ್ಷ,ಅಸ್ಹರಿ ಕಾಲೇಜ್ ಮಡವೂರ್ ನಲ್ಲಿ ತನ್ನ ಸೇವೆ ಸಲ್ಲಿಸಿದ್ದರು.
 
ತನ್ನ ಸುಧೀರ್ಘ ಸೇವೆಯ ಜೀವಿತಾವಧಿಯಲ್ಲಿ ಸಮುದಾಯಕ್ಕಾಗಿ,ಸಮಸ್ತಕ್ಕಾಗಿ ದುಡಿದ ಶೈಖುನಾರು ಇಂದು ಅಲ್ಲಾಹನ ಕರೆಗೆ ಓಗೊಟ್ಟಿದ್ದಾರೆ,ಅಲ್ಲಾಹನು ಅವರ ಪರಲೋಕ ಜೀವನ ವಿಶಾಲಗೊಳಿಸಲಿ,ಆಮೀನ್!
ನಾಳೆ ಶೈಖುನಾರೊಂದಿಗೆ ಸ್ವರ್ಗದಲ್ಲಿ ನಮ್ಮೆಲ್ಲರನ್ನು ಒಂದುಗೂಡಿಸಲಿ,ಆಮೀನ್.

Monday, 23 August 2021

ರಕ್ತದಾನ ಶಿಬಿರ ವಿವರ

*ಈವರೆಗೆ ಜಿಲ್ಲೆಯಲ್ಲಿ SKSSF ವಿಖಾಯ ರಕ್ತದಾನಿ ಬಳಗದ ಮೂಲಕ ನಡೆದ ರಕ್ತದಾನ ಶಿಭಿರಗಳು,*

 *ವಲಯವಾರು ನಡೆದ ಶಿಬಿರಗಳು ಮತ್ತು ಸಂಗ್ರಹವಾದ ರಕ್ತಗಳ ವಿವರ*

1) *ವಿಟ್ಲ 7*    *(486)*        
2) *ಬೆಲ್ತಂಗಡಿ 6* *(360)*
3) *ಮಂಗಳೂರು 5* *(352)*
4) *ಬಂಟ್ವಾಳ 4* *(244)*
5) *ಕೈಕಂಬ 3* *(279)*
6) *ಪುತ್ತೂರು 3* *(184)*
7) *ಸುಳ್ಯ 3* *(145)*
8) *ಉಪ್ಪಿನಂಗಡಿ 2* *(201)*
9)   *ಕಡಬ 2* *(193)*
10) *ಮೂಡಬಿದ್ರೆ 2* *(89)*
11) *ಸುರತ್ಕಲ್ 1* *(61)*
12) *ದೇರಳಕಟ್ಟೆ 1* *(30)*

*ಜಿಲ್ಲಾ ಸಮಾರಂಭದಲ್ಲಿ 1* *(98)*

*ಒಟ್ಟು 40* *(2722)*

*41ನೇ ಶಿಬಿರ  12/09/2021  ಮಿತ್ತಬೈಯಿಲ್ ಬಂಟ್ವಾಳ ವಲಯ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ನಡೆಯಲಿದೆ*

*SKSSF ವಿಖಾಯ ದಕ್ಷಿಣ ಕನ್ನಡ ಜಿಲ್ಲೆ*

Sunday, 2 May 2021

ಪಾಣಕ್ಕಾಡ್ ಸಯ್ಯಿದರ ಉದಯ : ಭಾಗ- 05

   ಪಾಣಕ್ಕಾಡ್ ವಂಶದ ಬೇರುಗಳು ಸರಿಸುಮಾರು ಇನ್ನೂರು ವರುಷಗಳ ಹಿಂದೆ ಯಾಮನಿನ ಹಳರ್ಮೌತ್ನ ತರೀಂ ಎಂಬ ಪ್ರದೇಶದಿಂದ ಸಯ್ಯಿದ್ ಅಲೀ ಶಿಹಾಬುದ್ದೀನ್ ಎಂಬ ಮಹಾತ್ಮರು ಉತ್ತರ ಮಲೆಬಾರಿನ ವಳಪಟ್ಟಣಂ ಎಂಬ ಸ್ಥಳಕ್ಕೆ ಆಗಮಿಸಿ, ವಾಸಿಸಿದರು. ಇದರೊಂದಿಗೆ ಕೇರಳದಲ್ಲಿ ಶಿಹಾಬುದ್ದೀನ್ ಖಬೀಲ ಪ್ರಾರಂಭವಾಯಿತು. ಅವರು ಶಿಹಾಬ್ ತಂಙಳ್ರ ಆರನೇ ಮುತ್ತಾತರಾಗಿದ್ದಾರೆ. ಅವರ ಪುತ್ರರಾದ ಸಯ್ಯಿದ್ ಹುಸೈನ್ ಶಿಹಾಬುದ್ದೀನ್ ತಂಙಳ್ ಕಣ್ಣೂರಿನ ಪ್ರಸಿದ್ಧವಾದ ಅರಕ್ಕಲ್ ರಾಜವಂಶದಿಂದ ವಿವಾಹವಾಗುವುದರೊಂದಿಗೆ ಕೇರಳದೊಂದಿಗೆ ಅವರ ಬಂಧವು ಸುದೃಢವಾಯಿತು. ಈ ಕುಟುಂಬದಲ್ಲಿ ಆತ್ಮೀಯತೆ ಹಾಗೂ ರಾಜಕೀಯ ಪಾರಂಪರ್ಯವು ವಿಲೀನವಾಗಿ, ಕೇರಳ ಸಮೂಹದಲ್ಲಿ ಅತೀ ವಿಶಿಷ್ಟ ಶ್ರೇಣಿಯಲ್ಲಿ ಶಿಹಾಬ್ ಖಬೀಲ ಪ್ರಖ್ಯಾತಿಯಾಯಿತು. ಆದಂ ನೆಬಿ(ಅ)ರಿಂದ ಪವಿತ್ರವೂ, ಪರಿಪಾವನವೂ ಆ ಪರಂಪರೆಯಲ್ಲಿ ಅಂತ್ಯಪ್ರವಾದಿ ಮುಹಮ್ಮದ್(ಸ) ರವರ ಕುಟುಂಬವನ್ನು ಅಲ್ಲಾಹನು ಕಾಪಾಡಿದ್ದಾನೆ. ಮನುಷ್ಯವರ್ಗಕ್ಕಾಗಿ ಸೃಷ್ಟಿಸಿದ ಕುಟುಂಬ ವ್ಯವಸ್ಥೆಯಲ್ಲಿ ಅತೀ ಉನ್ನತ ಕುಟುಂಬದಲ್ಲಾದೆ ನೆಬಿ(ಸ)ರವರ ಜನನವಾಗಿದ್ದು. ಇದು ಸ್ವಹೀಹುಲ್ ಬುಖಾರಿ ಹಾಗೂ ಇತರ ಹದೀಸ್ ಗ್ರಂಥಗಳಲ್ಲಿ ಉದ್ಧರಿಸಲಾಗಿದೆ. ಆ ಪವಿತ್ರ ಕುಟುಂಬದ ಉನ್ನತ ಸ್ವಭಾವ ಗುಣಗಳು ಮೇಲೈಸಿದ್ದಾಗಿದೆ ಪೌತ್ರ ಪರಂಪರೆ. ನನ್ನ ಎರಡು ಪುತ್ರರು ಎಂದು ವಿಶೇಷತೆ ಪಡೆದ ಹಸನ್(ರ) ಹುಸೈನ್(ರ)ರಿಂದ ಜೀನ್ ಗುಣಗಳ ಆತ್ಮೀಯ ರಹಸ್ಯಗಳನ್ನು ವಾರೀಸು ಪಡೆದ ಸಂತಾನ ಪರಂಪರೆ ಇಂದೂ ಕೂಡಾ ನೆಲೆನಿಂತಿದೆ. ನೆಬಿ(ಸ)ರವರು ಪ್ರಭೋಧನೆ ನಡೆಸಿದ ಕಿತಾಬ್-ಸುನ್ನತ್ಗಳ ವಾರಿಸುದಾರರಾಗಿ, ವಿದ್ವಾಂಸರು ಅಂತ್ಯದಿನತನಕ ನೆಲೆನಿಲ್ಲುವಂತೆ, ನೆಬಿಕುಟುಂಬವೂ ಅಂತ್ಯದಿನತನಕ ಸಮೂಹಕ್ಕೆ ದಾರಿದೀಪಗಳಾಗಿ ನೆಲೆನಿಲ್ಲುತ್ತವೆ. 
ಸಮೂಹದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಯ್ಯಿದರೂ, ಆಶಯಪರವಾಗಿ ದಾರಿತೋರಲು ವಿದ್ವಾಂಸರೂ, ಇರುತ್ತಾರೆ. ಇದರ ಬಗ್ಗೆ ನೆಬಿ(ಸ) ಒಂದು ಪ್ರಭಾಷಣದಲ್ಲಿ ಹೀಗೆ ಹೇಳಿದ್ದಾರೆ. ನಾನು ಓರ್ವ ಮನುಷ್ಯನಾಗಿದ್ದೇನೆ. ನನಗೆ ನನ್ನ ರಬ್ಬ್ನ ದೂತರು (ಮಲಕುಲ್ ಮೌತ್) ಬರುತ್ತಾರೆ. ನಿಮಗೆ ನಾನು ಅಮೂಲ್ಯವಾದ ಎರಡು ನಿಧಿಗಳನ್ನು ಇಡುತ್ತೇನೆ. ಒಂದು, ಅಲ್ಲಾಹನ ಕಿತಾಬ್, ನಿಮಗೆ ದಾರಿ ತೋರಲು ಅದರಲ್ಲಿ ಪ್ರಕಾಶವಿದೆ. ಆದ ಕಾರಣ ಅಲ್ಲಾಹನ ಕಿತಾಬನ್ನು ನೀವು ಬಿಗಿಯಾಗಿ ಹಿಡಿಯಿರಿ. ಮತ್ತೊಂದು, ಅಹ್ಲ್ಬೈತ್, ನನ್ನ ಕುಟುಂಬ, ಅವರ ವಿಷಯದಲ್ಲಿ ನಾನು ನಿಮಗೆ ಅಲ್ಲಾಹನನ್ನು ನೆನಪಿಸುತ್ತೇನೆ. (ಸ್ವಹೀಹ್ ಮುಸ್ಲಿಂ)
ಇದು ಎರಡೂ ಅಲ್ಲಾಹನ ಕಿತಾಬ್ ಮತ್ತು ಅಹ್ಲ್ಬೈತ್ ಪರಸ್ಪರ ಬೇರ್ಪಡದೆ ನೆಲೆನಿಂತು, ಪರಲೋಕದಲ್ಲಿ ಹೌಳ್ ಹತ್ತಿರ ನನ್ನ ಬಳಿ ಬರುವುದು. (ಅಹ್ಮದ್, ತುರ್ಮುದೀ)
ಹಾಗಾಗಿ ಖುರ್ಆನಿನ ಪ್ರಕಾಶದಂತೆ ನೆಬಿಕುಟುಂಬವೂ ಸಮೂಹಕ್ಕೆ ಅಲ್ಲಾಹನು ಅರ್ಪಿಸಿದ ಒಂದು ಸಂವಿಧಾನವಾಗಿದೆ. ಇದಾಗಿದೆ, ಪಾಣಕ್ಕಾಡ್ ತಂಙಳ್ ಮೊದಲಾದ ಆತ್ಮೀಯ ನೇತಾರರಿಂದ ಸಮೂಹವು ಅನುಭವಿಸುವುದು, ಇದು ಮುಂದೆಯೂ ಇರುವುದು(ಇ:ಅ)

Kalladka_Faizi

ಪಾಣಕ್ಕಾಡ್ ಸಯ್ಯಿದರ ಉದಯ : ಭಾಗ- 04

      ಸಯ್ಯಿದ್ ಅಲೀ ಪೂಕೋಯ ತಂಙಳ್ರ ವಫಾತ್ ನಂತರ ಕೆಲವು ಕಾಲದವರೆಗೆ ಪಾಣಕ್ಕಾಡ್ ಸಜೀವವಾಗಿರಲಿಲ್ಲ. ಅದರೆಡೆಯಲ್ಲಿ ಒಂದು ಘಟನೆ ನಡೆಯಿತು. ಓರ್ವ ವ್ಯಕ್ತಿಯು ಮತ್ತೊಬ್ಬರೊಂದಿಗೆ ನೂರು ರುಪಾಯಿ ಸಾಲ ಪಡೆದು ಒಂದು ಚಿನ್ನದ ಸರವನ್ನು ಅಡವಿಟ್ಟರು. ಹಣ ಪಾವತಿಸಿ ಸರವನ್ನು ಹಿಂದೆ ಪಡೆದಾಗ ಅದರಲ್ಲಿನ ಎರಡು ಚಿನ್ನದ ಎಸಲುಗಳು ನಾಪತ್ತೆಯಾಗಿದ್ದವು. ಪರಸ್ಪರ ತರ್ಕಗಳು ಉದ್ಬವಿಸಿ, ಸರದ ಒಡೆಯನು ಪಾಣಕ್ಕಾಡ್ನಲ್ಲಿ ಪೂಕೋಯ ತಂಙಳ್ ಬಳಿ ಸಮಸ್ಯೆಯ ಪರಿಹಾರಕ್ಕಾಗಿ ಸಮೀಪಿಸಿದರು. ತಂಙಳ್ರವರು ಸರವನ್ನು ಎರವಲು ಪಡೆದವನನ್ನು ಬರಲು ಹೇಳಿ, ಒಂದು ಪತ್ರವನ್ನು ನೀಡಿದರು. ಆದರೆ ಆ ಮನುಷ್ಯ ವರ್ತನೆಯು ದಿಕ್ಕಾರಪರವಾಗಿತ್ತು. ಅವನು ಹೇಳಿದನು. ಈ ಸಮಸ್ಯೆಗೆ ಪರಿಹಾರ ನೀಡಲು ಪೂಕೋಯ ಕುಟ್ಟಿಗೆ ಸಾಧ್ಯವಿಲ್ಲ. ಆದಕಾರಣ ನಾನಲ್ಲಿಗೆ ಬರುವುದಿಲ್ಲ ವಿವರ ತಿಳಿದ ಪಾಣಕ್ಕಾಡ್ ತಂಙಳ್ ಈ ರೀತಿ ಹೇಳಿದರು, ಅವರು ಬರುವುದಿಲ್ಲವೆಂದಾಗಿದೆ ಹೇಳಿದ್ದು, ಆದ್ದರಿಂದ ನೀವು ನ್ಯಾಯಾಲಯವನ್ನು ಸಮೀಪಿಸಿರಿ
ಪೆರಿಂದಲ್ಮಣ್ಣ ಮುನ್ಸಿಫ್ ಕೋರ್ಟ್ನಲ್ಲಿ ದಾವೆ ಹೂಡಲಾಯಿತು. ಎರಡೂ ವಿಭಾಗಗಳ ವಾದಗಳನ್ನು ಆಲಿಸಿದ ನ್ಯಾಯಾಲಯ ಕೊನೆಗೆ ಹೇಳಿತು. ಈ ಸಮಸ್ಯೆಯನ್ನು ಎರಡೂ ವಿಭಾಗದವರು ಗೌರವಿಸುವ ವ್ಯಕ್ತಿಯ ಮೂಲಕವಾಗಿ ಪರಿಹರಿಸಿಕೊಳ್ಳಬೇಕು, ಇಲ್ಲವಾದರೆ ಪ್ರತೀ ವಿಭಾಗವು ತಮಗೆ ಸ್ವೀಕಾರವಿರುವ ವ್ಯಕ್ತಿಯ ಹೆಸರನ್ನು ಸೂಚಿಸಬೇಕು ಆಗ ಸರ ಕೊಟ್ಟವರು ಪಾಣಕ್ಕಾಡ್ ಪಿ.ಯಂ.ಎಸ್.ಎ. ಪೂಕೋಯ ತಂಙಳ್ರ ಹೆಸರನ್ನೂ, ಎರವಲು ಪಡೆದವರು ಖಾನ್ಬಹದೂರ್ ಒ.ಪಿ.ಯಂ. ಮುತ್ತುಕೋಯ ತಂಙಳ್ರ ಹೆಸರನ್ನೂ ಸೂಚಿಸಿದರು. ನ್ಯಾಯಾಲಯವು ಇಬ್ಬರನ್ನೂ ಮದ್ಯಸ್ಥರನ್ನಾಗಿ ಮಾಡಿ ಕೇಸ್ಗೆ ಪರಿಹಾರ ಸೂಚಿಸಲು ನಿರ್ದೇಶಿಸಿತು. ಅದರ ಎಲ್ಲಾ ಫಯಲುಗಳನ್ನು ಪೂಕೋಯ ತಂಙಳ್ರಿಗೆ ಕಳುಹಿಸಿಕೊಡಲಾಯಿತು. ಇಬ್ಬರ ವಾದಗಳನ್ನೂ ಕೇಳಿದ ನಂತರ, ತೀರ್ಪ್ ನೀಡಲು ಮುತ್ತುಕೋಯ ತಂಙಳ್, ಪೂಕೋಯ ತಂಙಳ್ರೊಂದಿಗೆ ಕೇಳಿಕೊಂಡರು. ಕಳೆದು ಹೋದ ಚಿನ್ನದ ಸರದ ಎಸಲುಗಳ ಹಣವನ್ನು ಅದರ ಒಡೆಯರಿಗೆ ನೀಡಬೇಕೆಂದಾಗಿತ್ತು ತೀರ್ಪ್. ಇದರೊಂದಿಗೆ ಪಾಣಕ್ಕಾಡ್ ಮತ್ತೆ ಜನನಿಬಿಡವಾಯಿತು. ಸರ್ವ ಸಮಸ್ಯೆಗಳ ಪರಿಹಾರ ಕೇಂದ್ರವಾಗಿ ಪಾಣಕ್ಕಾಡ್ ಪರಿವರ್ತನೆಯಾಯಿತು. 1975-ರಲ್ಲಿ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯ ದಾರುಲ್ ಉಲೂಂ ಅರೆಬಿಕ್ ಕಾಲೇಜಿನ ಒಂದು ಸಭೆಯಲ್ಲಿ ಓರ್ವ ವ್ಯಕ್ತಿಯು ರಾಜಕೀಯ ಕಾರಣಗಳಿಂದ ಮಾನ್ಯ ತಂಙಳ್ರನ್ನು ಅಗೌರವಿಸುವ ರೀತಿಯಲ್ಲಿ ವರ್ತಿಸಿದರು. ಕೊನೆಗೆ ಆ ವ್ಯಕ್ತಿಯು ಮಾನಸಿಕ ಸ್ಥಿಮಿತ ಕಳೆದು ಯಾಚಕರಾಗಿ ಹೋದರು. ಇದು ಪೂಕೋಯ ತಂಙಳ್ರನ್ನು ಅಪಮಾನಿಸಿದ ಕಾರಣವಾಗಿರಬಹುದೆಂದು ಹೇಳಲಾಗಿದೆ. 
ಮಸೀದಿ, ಮದರಸಗಳಿಗೆ, ಶಿಲಾನ್ಯಾಸ ಮಾಡುವುದು, ಸಂಬಾವನೆ ಸ್ವೀಕರಿಸುವುದು, ಮನೆ ಹಾಗೂ ಸಂಸ್ಥೆಗಳ ಉದ್ಘಾಟನೆಗಳು, ರೋಗಿಗಳನ್ನು ಸಾಂತ್ವನಗೊಳಿಸುವುದು, ಎಲ್ಲಿಯೂ ಕ್ಲಿಷ್ಟಕರ ಸಮಸ್ಯೆಗಳಿಗೆ ಪರಿಹಾರ ನಿರ್ದೇಶಿಸುವುದು, ಎಲ್ಲಕ್ಕೂ ಜನರು ಪಾಣಕ್ಕಾಡ್ ತಂಙಳ್ರನ್ನು ಆಶ್ರಯಿಸುತ್ತಿದ್ದರು. ಅನೇಕಾನೇಕ ಅದ್ಬುತ ಘಟನೆಗಳು ತಂಙಳ್ರ ಬಗ್ಗೆ ಉದ್ದರಿಸಲಾಗಿದೆ. 
ಒಂದು ಸಲ ಓರ್ವ ಮಹಳೆಯ ಶರೀರದಲ್ಲಿ ಸರ್ಪವೊಂದು ಸುತ್ತಿಕೊಂಡ ಅವಸ್ಥೆಯಲ್ಲಿ ಸಂಬಂಧಿಕರು ಪಾಣಕ್ಕಾಡ್ಗೆ ಆಗಮಿಸಿದರು. ಸರ್ವರೂ ಪರಿಭ್ರಾಂತಿ ಹೊಂದಿದ ಕ್ಷಣಗಳು, ತಂಙಳ್ರವರು ತನ್ನ ಕೋಣೆಗೆ ತೆರಳಿ ಬಾಗಿಲು ಹಾಕಿ ಪ್ರಾರ್ಥಿಸಿದರು. ಕೆಲಹೊತ್ತು ಕಲೆದ ನಂತರ ಹೊರಗೆ ಬಂದರು. ಆಗ ಮುಂಗುಸಿಯೊಂದು ಎಲ್ಲಿಂದಲೋ ಬಂದು ಆ ಮಹಿಳೆಯ ಶರೀರದಲ್ಲಿದ್ದ ಘಟಸರ್ಪವನ್ನು ಕೊಂದು ಹಾಕಿ, ತುಂಡುಮಾಡಿ ಅಲ್ಲಿಂದ ಮೆರೆಯಾಯಿತು. ಬಂದವರೆಲ್ಲರೂ ನಿಟ್ಟುಸಿರು ಬಿಟ್ಟರು. ಸಂತೋಷದಿಂದ ಮನೆಗೆ ಹಿಂದಿರುಗಿದರು. ಸೌಮ್ಯಶಾಲಿಯಾಲಿಯಾದ ತಂಙಳ್, ಬಹಳ ಮೆತ್ತಗೆ ಸ್ವರದಲ್ಲಿ ಒಂದೆರಡು ಮಾತುಗಳನ್ನು ಮಾತ್ರ ಹೇಳುತ್ತಿದ್ದರು. ಯಾರಿಗೂ ಸಾಧ್ಯವಾಗದ ಕ್ಲಿಷ್ಟಕರ ಸಮಸ್ಯೆಗಳು ಆ ಎರಡು ಮಾತಿನಿಂದ ಪರಿಹಾರವಾಗುತ್ತಿದ್ದವು. ಯಾವ ಹಟಮಾರಿ ಸ್ವಭಾವದವರೂ, ತಂಙಳ್ರವರ ಮುಂದೆ ಬಂದು ನಿಂತರೆ, ನೀರಿಗೆ ಹಾಕಿದ ಉಪ್ಪಿನಂತೆ ಕರಗುತ್ತಿದ್ದರು. ಜಾತಿಮತ ಭೇದವಿಲ್ಲದೆ ತಂಙಳ್ ಸರ್ವಧರನೀಯರಾಗಿದ್ದರು. ಕೇರಳ ರಾಜ್ಯದ ಮುಸ್ಲಿಂ ಲೀಗ್ ಅಧ್ಯಕ್ಷರಾಗಿದ್ದ ಸಯ್ಯಿದ್ ಅಬ್ದುರ್ರಹ್ಮಾನ್ ಬಾಫಖಿ ತಂಙಳ್ರ ವಫಾತ್ ನಂತರ ಸಯ್ಯಿದ್ ಪೂಕೋಯ ತಂಙಳ್ರನ್ನು ಸರ್ವಸಮ್ಮತದಿಂದ, ಆ ಸ್ಥಾನಕ್ಕೆ ಆಯ್ಕೆಗೊಳಿಸಲಾಯಿತು. ಆನಂತರ ಪಾಣಕ್ಕಾಡ್ನ ಕೊಡಪ್ಪನಕ್ಕಲ್ ತರವಾಡ್, ಆತ್ಮೀಯ ಕೇಂದ್ರದಂತೆ, ರಾಜಕೀಯ ಕೇಂದ್ರವಾಗಿಯೂ ಮಾರ್ಪಡುಗೊಂಡಿತು. ಪಾಣಕ್ಕಾಡ್ ತಂಙಳ್ ಸನ್ನಿಧಿಯಲ್ಲಿ ಯಾವುದೇ ವಿವೇಚನೆ ಇರಲಿಲ್ಲ. ಮುಸ್ಲಿಮುರು, ಮುಸ್ಲಿಮೇತರರು, ಸುನ್ನಿಗಳು, ಅಸುನ್ನಿಗಳು, ಎಲ್ಲಾ ಪಕ್ಷಗಳ ರಾಜಕೀಯ ಕಾರ್ಯಕರ್ತರು, ಅಲ್ಲಿನ ನಿತ್ಯ ಸಂದರ್ಶಕರಾಗಿದ್ದರು. ಕೇರಳ ಮುಸಲ್ಮಾನರ ಕಣ್ಣಿನ ಮುತ್ತು ಎಂಬ ಪ್ರಯೋಗವು ಪೂಕೋಯ ತಂಙಳ್ರಲ್ಲಿ ನಿಜವಾಗಿತ್ತು. ಅನೇಕ ಮೊಹಲ್ಲಾಗಳ ಖಾಝಿ, ಹಾಗೂ ಸಮಸ್ತದ ಮುಶಾವರ ಸದಸ್ಯರಾದ ತಂಙಳ್, ಸರ್ವಜನರೆಡೆಯಲ್ಲಿ ಅಂಗೀಕಾರ ಪಡೆದ ಮಹಾವ್ಯಕ್ತಿಯಾಗಿದ್ದರು. ಸರ್ವರಿಗೂ ಅಲ್ಲಿ ನ್ಯಾಯಯುತವಾದ ತೀರ್ಮಾನ ಸಿಗುತ್ತಿತ್ತು. ಸುನ್ನೀ ಯುವಜನ ಸಂಘದ ರಾಜ್ಯಾಧ್ಯಕ್ಷ, ಜಾಮಿಅ: ನೂರಿಯ್ಯಾ, ಅರೆಬಿಕ್ ಕಾಲೇಜು, ಫೈಝಾಬಾದ್, ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ತನ್ನ ಸಾಕುತಂದೆ ಹಾಗೂ ದೊಡ್ಡತಂದೆಯಾದ ಅಲೀ ಪೂಕೋಯ ತಂಙಳ್ರ ಸ್ಮರಣೆಗಾಗಿ ತನ್ನ ಎಲ್ಲಾ ಪುತ್ರರಿಗೆ ಅಲಿ ಸೇರಿಸಿ ನಾಮಕರಣ ಮಾಡಿದರು. 
1975-ಜುಲ್ಯಾ ಆರರಂದು ಪೂಕೋಯ ತಂಙಳ್ ವಫಾತ್ ಆದರು. ಆನಂತರ ಆ ಪದವಿಗೆ ಸಯ್ಯಿದ್ ಮುಹಮ್ಮದ್ ಅಲೀ ಶಿಹಾಬ್ ತಂಙಳ್ ಪಾದಾರ್ಪಣೆಯಾದರು. ತಂದೆ ಆತ್ಮೀಯ ಪದವಿಯೊಂದಿಗೆ ರಾಜಕೀಯ ವಾಗಿಯೂ, ಕೇರಳ ರಾಜ್ಯದ ಮುಸ್ಲಿಂ ಲೀಗ್ನ ಸಾರಥ್ಯ ವಹಿಸಲು ತಂಙಳ್ ನಿಭಂಧಿತರಾದರು. ಮೂರುವರೆ ದಶಕಗಳ ಕಾಲ ತಂಙಳ್ ಆ ಪದವಿಯಲ್ಲಿ ವಿರಾಜಿಸಿದರು. ಪೂಕೋಯ ತಂಙಳ್ರ ಹಳೆಯ ಕಾಲದ ಆಗುಹೋಗುಗಳಿಗೆ ವ್ಯತ್ಯಸ್ಥವಾಗಿ, ಗ್ಲೋಬಲ್ ವಿಲೇಜ್ ಆಗಿ ಜಗತ್ತು ಒಂದು ಚಿಕ್ಕ ಗ್ರಾಮದಂತಾಗಿ, ಬದಲಾದ ಕಾಲದಲ್ಲಿ, ಶಿಹಾಬ್ ತಂಙಳ್ ಎಲ್ಲವನ್ನೂ ಬಹಳ ಸೂಕ್ಷತೆಯಿಂದ, ನಯನಾಜೂಕಿನಿಂದ ಕಾರ್ಯಗಳ ಬಗ್ಗೆ ತಿಳಿದು, ಸಮಸ್ಯೆಗಳಿಗೆ ಪರಿಹಾರವನ್ನು ನಿರ್ದೇಶಿಸಿ, ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದರು. 
ಇದು ಪಾರಂಪರ್ಯವಾಗಿ ಬಂದಂತಹ ನೇತೃತ್ವ ಮಹಿಮೆಯೆಂದು ಹೇಳಬಹುದು. ಸಯ್ಯಿದ್ ಉಮರಲೀ ಶಿಹಾಬ್ ತಂಙಳ್, ಸಯ್ಯಿದ್ ಹೈದರಲೀ ಶಿಹಾಬ್ ತಂಙಳ್, ಸಯ್ಯಿದ್ ಸ್ವಾದಿಖಲೀ ಶಿಹಾಬ್ ತಂಙಳ್, ಸಯ್ಯಿದ್ ಅಬ್ಬಾಸ್ ಅಲೀ ಶಿಹಾಬ್ ತಂಙಳ್, ದೊಡ್ಡ ತಂಙಳ್ರ ಸಹಾಯಿಯಾಗಿ ನೆಲೆನಿಂತರು. ಮಂಗಳವಾರವನ್ನು ಜನರಿಗಾಗಿ ಮೀಸಲಿಟ್ಟರು. ಅನೇಕ ಮೊಹಲ್ಲಾಗಳ ಖಾಝಿ, ಸಂಘ ಸಂಸ್ಥೆಗಳ ಅಧ್ಯಕ್ಷರು, ಉಪದೇಶಕರಾಗಿ ಪಾಣಕ್ಕಾಡ್ ಸಯ್ಯಿದರು ಆಯ್ಕೆಯಾದರು. ಎಲ್ಲಕ್ಕಿಂತಲೂ ಉನ್ನತ ಪದವಿ ಸಯ್ಯಿದ್ ವಂಶದ ಆತ್ಮೀಯತೆಯಾಗಿದೆ. ಸಯ್ಯಿದ್ ಹುಸೈನ್ ಶಿಹಾಬ್ ಆಟ್ಟಕ್ಕೋಯ ತಂಙಳ್ರ ಐದನೇ ಹಿಂಗಾಮಿಯಾಗಿ ಮೂರುವರೆ ದಶಕಗಳ ಕಾಲ ವಿರಾಜಿಸಿದ ಶಿಹಾಬ್ ತಂಙಳ್, ಸಮೂಹಕ್ಕಾಗಿ ತನ್ನ ಜೀವನವನ್ನು ವ್ಯಯಿಸಿ, ತನ್ನದಾದ ಆತ್ಮೀಯ ಲೋಕಕ್ಕೆ ಯಾತ್ರೆ ಹೊರಟಾಗ ತನ್ನ ಪ್ರತಿನಿಧಿಯಾಗಿ ಸಯ್ಯಿದ್ ಹೈದರಲೀ ಶಿಹಾಬ್ ತಂಙಳ್ ಆ ಪದವಿಯಲ್ಲಿ ವಿರಾಜಮಾನರಾದರು.
#ಮುಂದುವರಿಯುವವುದು.......

📝 Kalladka Faizi

ಪಾಣಕ್ಕಾಡ್ ಸಯ್ಯಿದರ ಉದಯ : ಭಾಗ- 03

ಪಾಣಕ್ಕಾಡ್ ಸಯ್ಯಿದ್ ಅಲೀ ಪೂಕೋಯ ತಂಙಳ್ ತಂಙಳ್ ಹಾಗೂ ಪಾಣಕ್ಕಾಡ್ನ ಮಹತ್ವ
ಹುಸೈನ್ ಶಿಹಾಬ್ ಆಟ್ಟಕ್ಕೋಯ ತಂಙಳ್ರನ್ನು ಬ್ರಿಟಷರು ವೆಲ್ಲೂರಿಗೆ ಗಡೀಪಾರು ಮಾಡಿದ ನಂತರವೂ ಪಾಣಕ್ಕಾಡ್ ತಂಙಳ್ ಪದವಿ ಕೊನೆಗೊಳ್ಳಲಿಲ್ಲ. ಆ ಪದವಿಗೆ ಸಯ್ಯಿದ್ ಮುಹಮ್ಮದ್ ಕುಂಞಕ್ಕೋಯ ತಂಙಳ್ ಪಾದಾರ್ಪಣೆಯಾದರು. ಸಯ್ಯಿದ್ ಹುಸೈನ್ ಆಟ್ಟಕ್ಕೋಯ ತಂಙಳ್ ಕಪ್ಪಾಡ್ ವಯಲ್ ಎಂಬ ಸ್ಥಳದಿಂದ ವಿವಾಹವಾಗಿದ್ದರು, ಅದರಲ್ಲಿ ಜನಿಸಿದ ಪುತ್ರರಾಗಿದ್ದಾರೆ, ಸಯ್ಯಿದ್ ಕೋಯಕುಂಞಕೋಯ ತಂಙಳ್ ಹಾಗೂ ಸಯ್ಯಿದ್ ಹುಸೈನ್ ಶಿಹಾಬ್ ಆಟ್ಟಕೋಯ ತಂಙಳ್. ಕೋಯಕುಂಞಕೋಯ ತಂಙಳ್ ಪಾಣಕ್ಕಾಡ್ನಲ್ಲಿ ವಾಸವಾಗಿದ್ದಾಗ ಜನರ ಅಭಯ ಕೇಂದ್ರವಾಗಿದ್ದರು. ನ್ಯಾಯಯುತವಾದ ತೀರ್ಪ್ ಗಳಿಂದ ಜನರು ಸಂತೃಪ್ತರಾಗಿದ್ದರು. ದಾರಿದ್ರ್ಯತೆಯ ಕಾಲದಲ್ಲಿ ತಂಙಳ್ರ ಮನೆಯವರು ಊಟಕ್ಕೆ ಅಕ್ಕಿ ಇಲ್ಲವೆಂದು ತಂಙಳರನ್ನು ನೆನಪಿಸಿದಾಗ, ನೀರನ್ನು ಒಲೆ ಮೇಲಿಡಲು ತಂಙಳ್ ನಿರ್ದೇಶಿಸುತ್ತಿದ್ದರು. ನೀರು ಬಿಸಿಯಾಗುವ ಹೊತ್ತಲ್ಲಿ, ಯಾರಾದರೂ ಅಕ್ಕಿಯೊಂದಿಗೆ ಅಲ್ಲಿಗೆ ಆಗಮಿಸುತ್ತಿದ್ದರು. ಊಟ ತಯಾರಿಯಾದಾಗ ಅಲ್ಲಿದ್ದವರೆಲ್ಲನ್ನೂ ಸೇರಿಸಿ, ಆಹಾರ ಸೇವಿಸುವುದು ಅಲ್ಲಿನ ವಾಡಿಕೆಯಾಗಿತ್ತು. ಅನೇಕ ಅದ್ಬುತ ಕರಾಮತ್ಗಳು ತಂಙಳ್ರಿಂದ ಪ್ರಕಟವಾಗಿದ್ದನ್ನು ಉದ್ದರಿಸಲಾಗಿದೆ. 
ಒಂದು ಸಲ ಓರ್ವ ನಾಪತ್ತೆಯಾಗಿ, ಆರಕ್ಷಕರು ಎಲ್ಲಿ ಹುಡುಕಾಡಿದರೂ, ವಿವರ ಸಿಗದಿದ್ದಾಗ, ಅವರ ಕುಟುಂಬಿಕರು ಪಾಣಕ್ಕಾಡ್ಗೆ ಬಂದು ಅಹವಾಲು ಹೇಳಿದರು. ಬೇರೆ ಯಾವುದೋ ವಿಶೇಷ ವಿಷಯವನ್ನು ಚರ್ಚೆ ಮಾಡುವ ಹೊತ್ತಲ್ಲಾಗಿತ್ತು ಅವರು ಅಲ್ಲಿ ತಲುಪಿದ್ದು. ವಿಷಯ ತಿಳಿದ ತಂಙಳ್ ತಕ್ಷಣ ಹೇಳಿದರು. ಪನಂಬುಝ ಕಾಡಿನಲ್ಲಿ ಮೃತದೇಹವೊಂದು ನೇತಾಡುತ್ತಿದೆ ಜನರು ಹೋಗಿ ನೋಡಿದಾಗ ವಿವರ ಪತ್ತೆಯಾಯಿತು. ಪಾಣಕ್ಕಾಡ್ ಪುತ್ತನ್ಪುರ ಎಂಬ ಮನೆಯಲ್ಲಿ ತಂಙಳ್ ವಫಾತ್ ಆದರು. ಆ ಮನೆಯಲ್ಲಿ ಈಗ ಬಶೀರಲೀ ಶಿಹಾಬ್ ತಂಙಳ್ ವಾಸವಾಗಿದ್ದಾರೆ. ಮನೆಯ ಅಂಗಣದ ಬದಿಯಲ್ಲಿ ಮಹಾತ್ಮರ ಮಖ್ಬರ ಕಾಣಬಹುದು. 
ಸಯ್ಯಿದ್ ಕೋಯಕುಂಞಕೋಯ ತಂಙಳ್ರ ವಿಯೋಗ ನಂತರ ಅವರ ಸಹೋದರರಾದ ಸಯ್ಯಿದ್ ಅಲೀ ಪೂಕೋಯ ತಂಙಳ್ ಪಾಣಕ್ಕಾಡ್ ತಂಙಳ್ ಎಂದು ಪ್ರಸಿದ್ಧಿಯಾದರು. ಅವರು ವಾಸಿಸಿದ್ದು ಕೊಡಪ್ಪನಕ್ಕಲ್ ಮನೆಯಲ್ಲಾಗಿತ್ತು. ದೃಷ್ಟಿರಹಿತರಾಗಿದ್ದ ಮಹಾತ್ಮರಿಗೆ, ಸಂತಾನವಿರಲಿಲ್ಲ. ದೊಡ್ಡ ಸಹೋದರ ಕೋಯಕುಂಞಕೋಯ ತಂಙಳ್ರ ಅಪೇಕ್ಷೆಯಂತೆ, ಅವರ ಪುತ್ರರಾದ ಸಯ್ಯಿದ್ ಪೂಕೋಯ ತಂಙಳ್ರನ್ನು ದತ್ತುಪುತ್ರರಾಗಿ ಸ್ವೀಕರಿಸಿದ್ದರು. ಇವರಾಗಿದ್ದಾರೆ ಜಗತ್ಪ್ರಸಿದ್ಧರಾದ ಪಿ.ಯಂ.ಎಸ್.ಎ. ಪೂಕೋಯ ತಂಙಳ್. ಅಂದಿನಿಂದ ಕೊಡಪ್ಪನಕ್ಕಲ್ ಭವನವು ಖ್ಯಾತಿಯ ಉತ್ತುಂಗಕ್ಕೇರಿತು. ಸಹೋದರರಂತೆ ಅವರು ದರಿದ್ರರಾಗಿರಲಿಲ್ಲ. ದೊಡ್ಡ ಸಂಪತ್ತಿನ ಒಡೆಯರಾಗಿದ್ದರು. ಅವರು ತನ್ನ ಹಾಗೂ ಪತ್ನಿಯ ಎಲ್ಲಾ ಸಂಪತ್ತುಗಳನ್ನು ಸಾಕು ಪುತ್ರರಾದ ಪೂಕೋಯ ತಂಙಳ್ರ ಹೆಸರಲ್ಲಿ ಬರೆದುಕೊಟ್ಟರು. ಕಣ್ಣು ಕಾಣದಿದ್ದರೂ ಅಲೀ ಪೂಕೋಯ ತಂಙಳ್, ಕೊನೆತನಕ ಜನರಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟರು. ಕೊಡಪ್ಪನಕ್ಕಲ್ ಮನೆಯಲ್ಲಿ ಮಹಾತ್ಮರು ವಫಾತ್ ಆದರು. ಪಾಣಕ್ಕಾಡ್ ಜುಮಾಮಸೀದಿ ಸಮೀಪ ಅಂತ್ಯವಿಶ್ರಮಿಸುತ್ತಿದ್ದಾರೆ.

📝 Kalladka_Faizi

Saturday, 17 April 2021

ಪಾಣಕ್ಕಾಡ್ ಸಯ್ಯಿದರ ಉದಯ: ಭಾಗ- 02

ಅಭಯಕೇಂದ್ರ ಪಣಕ್ಕಾಡ್ ಸಯ್ಯಿದ್ ಹುಸೈನ್ ಆಟ್ಟಕ್ಕೋಯ ತಂಙಳ್ ಪಾಣಕ್ಕಾಡ್ ಪ್ರದೇಶದಲ್ಲಿ ವಾಸ ಮಾಡಿದ ನಂತರ, ವಿವಿಧ ಪ್ರದೇಶಗಳ ಜನರು ಪಾಣಕ್ಕಾಡ್ಗೆ ಪ್ರವಹಿಸಿದರು. ದಿನನಿತ್ಯ ಅವರ ಖ್ಯಾತಿಯು ಹೆಚ್ಚುತ್ತಾ ಹೋಯಿತು. 
ಅವರ ತಂದೆಯವರಾದ #ಸಯ್ಯಿದ್_ಮುಹ್ಲಾರ್_ತಂಙಳ್ ಮಲೆಪ್ಪುರದಲ್ಲಿ ವಫಾತ್ ಆಗಿ ಅವರನ್ನು ವಲಿಯಪಳ್ಳಿ ಅಂಗಣದಲ್ಲಿ ದಫನ ಮಾಡಲಾಯಿತು. ಖುತುಬುಝ್ಝಮಾನ್ ಮಂಬುರಂ ತಂಙಳ್ರ ನಂತರ ಮಲೆಬಾರಿನ ಲಕ್ಷಾಂತರ ಜನರಿಗೆ ಪಾಣಕ್ಕಾಡ್ ತಂಙಳ್ ಎಂಬ ಅನುಗ್ರಹವನ್ನು ಅಲ್ಲಾಹನು ನೀಡಿದ್ದಾಗಿದೆ.
ಜನರ ಸಾಮಾನ್ಯ ಸಮಸ್ಯೆಯಿಂದ ಹಿಡಿದು, ಧಾರ್ಮಿಕ, ರಾಜಕೀಯ, ಸಾಮಾಜಿಕ, ವಲಯದಲ್ಲಿನ ಕೊನೆಯ ಮಾತು ಪಾಣಕ್ಕಾಡ್ ತಂಙಳ್ರದ್ದಾಗಿತ್ತು. ಹಾಗಾಗಿ ಅಂದಿನ #ಬ್ರಿಟಿಷ್ ನಾಯಕರು ಒಂದು ಘಟನೆಯಲ್ಲಿ, ತಂಙಳ್ರನ್ನು ಗಡೀಪಾರಿಗೆ ಆಜ್ಞೆ ನೀಡಿ, ವೆಲ್ಲೂರಿಗೆ ಕಳುಹಿಸಿದರು.  
1882 ತ್ರಿಕ್ಕಲ್ಲೂರ್ ಎಂಬಲ್ಲಿ ಬ್ರಿಟಿಷ್ ಸೇನೆ ಹಾಗೂ ಮುಸ್ಲಿಂ ಮಾಪಿಳ್ಳೆಗಳು ಪರಸ್ಪರ ಹೋರಾಡಿದರು. ಅಧಿಕ ಮುಸ್ಲಿಮರನ್ನೂ ಫರಂಗಿಗಳು ವಧಿಸಿದರು. ಆದರೆ ಓರ್ವರಿಗೆ, ಎಷ್ಟು ಗುಂಡೇಟು ನೀಡಿದರೂ ಅವರಿಗೆ ಅದು ತಾಗುವುದೇ ಇಲ್ಲ. ಇದರಲ್ಲಿ ಏನೋ ರಹಸ್ಯವಿದೆಯೆಂದು ಅರಿತ ಬ್ರಿಟಿಷ್ ಮೇಧಾವಿಗಳು, ಅವರನ್ನು ಬಂಧಿಸಿ, ವಿಚಾರಣೆಗೈದರು. ಕೊನೆಗೆ ಅವರು ಆ ರಹಸ್ಯವನ್ನು ಅವರಿಗೆ ತಿಳಿಸಿಕೊಟ್ಟರು. ತನ್ನ ಶರೀರದಲ್ಲಿ ಕಟ್ಟಿದ ಒಂದು ತಾಯಿತವಾಗಿದೆ ಗುಂಡೇಟು ತಾಗದಿರಲು ಕಾರಣವೆಂದು ಹೇಳಿದರು. ಇದು ಪಾಣಕ್ಕಾಡ್ ತಂಙಳ್ ನೀಡಿದ್ದಾಗಿದೆ ಎಂದು ತಿಳಿದ ಬ್ರಿಟಷ್ ಮೇಧಾವಿ ತಂಙಳ್ರನ್ನು ಬಂಧಿಸಲು ವಾರಂಟ್ ಹೊರಡಿಸಿದನು. ಆದರೆ ಯಾರು ಆ ಕಾರ್ಯಕ್ಕೆ ಮುಂದಾಗುವುದು! ತಂಙಳ್ ಬಗ್ಗೆ ತಿಳಿದಿರುವ ಕೆಲವು ಬ್ರಿಟಷರು ಹಿಂಜರಿದರು. ಕೆಲವು ಅಧಿಕಾರಿಗಳು ತಂಙಳ್ರ ಬಳಿ ಹೋಗಿ ಆ ತಾಯಿತವನ್ನು ನಾನು ನೀಡಲಿಲ್ಲ, ಎಂದು ಹೇಳಲು ನಿರ್ಭಂಧಿಸಿದರಂತೆ, ಆದರೆ ತಂಙಳ್ರ ಉತ್ತರ ಹೀಗಿತ್ತು. ಸುಳ್ಳು ಹೇಳುವುದು ನೀಚ ಕೃತ್ಯವಾಗಿದೆ, ಶಿಕ್ಷೆಗೆ ಹೆದರಿ ಸುಳ್ಳು ಹೇಳಲು ನಾನು ತಯಾರಿಲ್ಲ. ಬರುವುದು ಬರಲಿ, ಆ ತಾಯಿತವನ್ನು ನೀಡಿದ್ದು ನಾನಾಗಿದ್ದೇನೆ. ಇದರೊಂದಿಗೆ ತಂಙಳ್ರ ಬಂಧನ ನಿಶ್ಚಯವಾಯಿತು. ಇದನ್ನು ತಿಳಿದ ಹಲವು ಬ್ರಿಟಿಷ್ ಉದ್ಯೋಗಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ಸಮಸ್ತ ಕೇರಳ ಜಂ:ಇಯ್ಯತುಲ್ ಉಲೆಮಾ ಅಧ್ಯಕ್ಷರು ಹಾಗೂ ಘನವಿದ್ವಾಂಸರಾಗಿದ್ದ, ಬಹುಮಾನ್ಯ ಕೆ.ಕೆ. ಸ್ವದಖತುಲ್ಲಾ ಮುಸ್ಲಿಯಾರವರ ಮಾವರಾಗಿದ್ದ ಕೋಡೂರು ಅಧಿಕಾರಿ ಮಂಗತ್ತೊಡಿ ಮಮ್ಮು ಅಧಿಕಾರಿ ರಾಜಿನಾಮೆ ನೀಡಿದವರಲ್ಲಿ ಒಳಗೊಂಡಿದ್ದರು. 
ಕೊನೆಗೆ ತಂಙಳ್ರ ಬಂಧನವಾಗಿ ವೆಲ್ಲೂರಿಗೆ ಕಳುಹಿಸಲಾಯಿತು. ಬಂಧನಕ್ಕೆ ನೇತೃತ್ವ ವಹಿಸಿದ, ಓರ್ವ ಮುಸ್ಲಿಂ ಅಧಿಕಾರಿಯ, ಶರೀರದಲ್ಲಿ ಕ್ಷುದ್ರಕೀಟದ ಹುಣ್ಣು ಪ್ರತ್ಯಕ್ಷಗೊಂಡು ಮರಣ ಹೊಂದಿದ್ದಾರೆಂದು ಹೇಳಲಾಗಿದೆ. ವೆಲ್ಲೂರಿಗೆ ರೈಲುಗಾಡಿಯಲ್ಲಿ ಹೊರಟ ತಂಙಳ್ ದಾರಿಮಧ್ಯೆ ನಮಾಜ್ಗೆ ಹೊತ್ತಾದಾಗ, ತಂಙಳ್ ಗಾಡಿಯೊಂದಿಗೆ ನಿಲ್ಲಲು ಆಜ್ಞೆ ನೀಡಿದಾಗ, ರೈಲು ತಕ್ಷಣ ನಿಂತು, ತಂಙಳ್ ಇಳಿದು, ಅಂಗಶುದ್ಧಿ ಮಾಡಿ ನಮಾಜ್ ನಿರ್ವಹಿಸಿದ ನಂತರ ರೈಲಿಗೆ ಹತ್ತಿದರು. ನಂತರವಾಗಿತ್ತು ರೈಲು ಚಲಿಸಿದ್ದು. ಇದು ಅದ್ಬುತ ಘಟನೆಯಾಗಿ ನೆಲೆನಿಂತಿದೆ. ಇಂದು ವಾಲಯಾರ್ ನಿಲ್ದಾನವಾಗಿ ಆ ಸ್ಥಳವು ಗುರುತಿಸುತ್ತದೆ. ವೆಲ್ಲೂರಿನಲ್ಲಿ ಮಹಾನರು ವಫಾತ್ ಆದರು. ಅಲ್ಲಿನ ಪೇಟೆಮಸೀದಿಯಲ್ಲಾಗಿದೆ ಮಖ್ಬರ. ಪಾಣಕ್ಕಾಡ್ ಪೂಕೋಯ ತಂಙಳ್ರ ಎಲ್ಲಾ ಪುತ್ರರೂ ಮನೆಯಲ್ಲಿ ಪ್ರೀತಿಯ ಹೆಸರಲ್ಲಿ ಗುರುತಿಸುತ್ತಾರೆ. 
ಶಿಹಾಬ್ ತಂಙಳ್ ಕೋಯಮೋನ್, ಉಮರ್ ಅಲೀ ಶಿಹಾಬ್ ತಂಙಳ್ ಮುತ್ತುಮೋನ್, ಸ್ವಾದಿಖ್ ಅಲೀ ಶಿಹಾಬ್ ತಂಙಳ್ ಸ್ವಾದಿಖ್ ಮೋನ್, ಅಬ್ಬಾಸ್ ಅಲೀ ಶಿಹಾಬ್ ತಂಙಳ್ ಅಬ್ಬಾಸ್ ಮೋನ್, ಆದರೆ ಹೈದರ್ ಅಲೀ ಶಿಹಾಬ್ ತಂಙಳ್ರನ್ನು ಹುಸೈನ್ ಶಿಹಾಬ್ ಆಟ್ಟಕ್ಕೋಯ ತಂಙಳ್ರಿಗೆ ಸೇರಿಸಿ ಆಟ್ಟಪೂ.. ತಂಙಳ್ ಎಂದು ಕರೆಯಲಾಗುತ್ತದೆ.

🖋️ ಕಲ್ಲಡ್ಕ ಫೈಝಿ
Skssf_Shanthiangady_Unit 

Monday, 5 April 2021

ಪಾಣಕ್ಕಾಡ್ ಸಯ್ಯಿದರ ಉದಯ : ಭಾಗ- 01

     ಪಾಣಕ್ಕಾಡ್ ತಂಙಳ್ ಎಂಬ ಹೆಸರಲ್ಲಿ ಓರ್ವರು ಪಾಣಕ್ಕಾಡ್ ಸಯ್ಯಿದರಲ್ಲಿ ಗುರುತಿಸಲ್ಪಡುತ್ತಾರೆ. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಸಯ್ಯಿದ್ ಮುಹಮ್ಮದ್ ಅಲೀ ಶಿಹಾಬ್ ತಂಙಳ್, ಅದಕ್ಕೆ ಮುಂಚೆ ಸಯ್ಯಿದ್ ಪೂಕೋಯ ತಂಙಳ್, ಅವರ ದೊಡ್ಡ ತಂದೆಯವರಾಗಿದ್ದ ಸಯ್ಯಿದ್ ಅಲೀ ಪೂಕೋಯ ತಂಙಳ್, ಸಯ್ಯಿದ್ ಕೋಯಕುಂಞಕೋಯ ತಂಙಳ್, ಹುಸೈನ್ ಶಿಹಾಬ್ ಆಟ್ಟಕ್ಕೋಯ ತಂಙಳ್. 
ಪ್ರಥಮವಾಗಿ ಪಾಣಕ್ಕಾಡ್ ತಂಙಳ್ ಎಂದು ಪ್ರಖ್ಯಾತಿಯಾಗಿದ್ದು #ಸಯ್ಯಿದ್_ಹುಸೈನ್_ಶಿಹಾಬ್_ಆಟ್ಟಕ್ಕೋಯ_ತಂಙಳ್ ಆಗಿದ್ದಾರೆ. ಮಹಾತ್ಮರು ಸೂಕ್ಷಶಾಲಿಯಾದ ಘನವಿದ್ವಾಂಸರೂ, ಖ್ಯಾತ ಮುದರ್ರಿಸರೂ ಆಗಿದ್ದರು. ಆನಂತರ ಆ ಕುಟುಂಬದಿಂದ ಓರ್ವರು ಪಾಣಕ್ಕಾಡ್ ತಂಙಳ್ ಎಂದು ಹೆಸರುವಾಸಿಯಾದರು. ಆ ಪದವಿಯನ್ನು ಯಾವುದೇ ಸಮಿತಿಯು ಸಭೆ ಸೇರಿ ಆಯ್ಕೆಗೊಳಿಸಿರುವುದಲ್ಲ. ಅದು ಅಲ್ಲಾಹನು ಆಯ್ಕೆಗೊಳಿಸಿದ ಮಹತ್ತರವಾದ ಪದವಿಯಾಗಿದೆ. 
ಪಾಣಕ್ಕಾಡ್ ಸಯ್ಯಿದರು ಪ್ರಖ್ಯಾತಿಯಾಗಿರುವ ಹಿನ್ನೆಲೆಯನ್ನು ಅವಲೋಕಿಸಿದರೆ ಆಶ್ಚರ್ಯಕರವಾದ ಘಟನೆಯೊಂದು ನಡೆದಿರುವುದನ್ನು ಚರಿತ್ರೆಯಿಂದ ತಿಳಿಯಬಹುದು. ಅಲ್ಲಾಹನು ಅದಕ್ಕಾಗಿ ಒಂದು ಸಂದರ್ಭವನ್ನು ಉಂಟುಮಾಡಿದನು. ಪಾಣಕ್ಕಾಡ್ ಗ್ರಾಮದ ಪುರಾತನ ಕಾಲದಲ್ಲಿ ಓಲಕ್ಕರ ತರವಾಡ್ ಎಂಬ ಹೆಸರಲ್ಲಿ ಕುಟುಂಬವೊಂದು ವಾಸವಾಗಿತ್ತು. ಒಂದು ದಿನ ಬೆಳಗ್ಗಿನ ಜಾವ ಎಚ್ಚರಗೊಂಡಾಗ ಆ ಮನೆಯಲ್ಲೊಂದು ಭೀಕರ ದೃಶ್ಯ. ಮನೆಯಲ್ಲಿನ ಎಲ್ಲಾ ಸದಸ್ಯರೂ, ಮನೆಯ ವಿವಿಧ ಕಡೆಗಳಲ್ಲಿ, ಮೃತಶರೀರದಂತೆ ಬಿದ್ದುಕೊಂಡಿದ್ದಾರೆ. ಯಾರಿಗೂ ಎಚ್ಚರವಿಲ್ಲ. ಚಾವಡಿ, ಅಡುಗೆಕೋಣೆ, ಎಲ್ಲಿ ನೋಡಿದರೂ, ಮನುಷ್ಯರೆಲ್ಲರೂ ನೆಲಕ್ಕೊರಗಿದ್ದಾರೆ. ಕಾಲ್ಗಿಚ್ಚಿನಂತೆ ತಿಳಿದ ಈ ವಾರ್ತೆಯು, ಊರಿನ ಜನರೆಲ್ಲರನ್ನೂ ಅಲ್ಲಿ ಒಗ್ಗೂಡಿಸಿತು. ಯಾರಿಗೆ ಕೂಡಾ ಏನಾಯಿತೆಂದು ತಿಳಿಯುವುದಿಲ್ಲ. ಏನು ಮಾಡಬೇಕೆಂದು ತೋಚದ ಸಂದಿಗ್ದ ಘಟ್ಟ. 
ಅಂದು ಮಲೆಪ್ಪುರದಲ್ಲಿ ವಾಸವಾಗಿದ್ದ #ವಲಿಯ_ತಂಙಳ್ ಎಂದು ಕರೆಯುತ್ತಿದ್ದ, ಅದ್ಯಾತ್ಮಿಕತೆಯಲ್ಲಿ ಉನ್ನತ ಶ್ರೇಣೆಗೇರಿದ ಮಹಾತ್ಮರಾದ ಸಯ್ಯಿದ್ ಮುಹ್ಲಾರ್ ಶಿಹಾಬುದ್ದೀನ್ ತಂಙಳ್. ಮಲೆಪ್ಪುರದ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದ ಮಹಾತ್ಮರು ಅನೇಕ ಅದ್ಬುತ ಸಿದ್ಧಿಗಳ ಮೂಲಕ ಖ್ಯಾತರಾಗಿದ್ದರು. ನಾಡಿನ ನಾನಾ ಕಡೆಗಳಿಂದ ಜನರು ಸಮಸ್ಯೆಗಳ ಪರಿಹಾರಕ್ಕಾಗಿ ಅವರ ಬಳಿ ಆಗಮಿಸುತ್ತಿದ್ದರು. ಪಾಣಕ್ಕಾಡ್ ಊರಿನ ನೇತಾರರು ಮಲೆಪ್ಪುರದಲ್ಲಿ ವಾಸವಿರುವ ತಂಙಳ್ರ ಬಳಿ ಧಾವಿಸಿ, ನಡೆದ ಘಟನೆಯನ್ನು ವಿವರಿಸಿದರು. 
ಕೂಡಲೇ ತಂಙಳ್ ತನ್ನ ಸಮೀಪದಲ್ಲಿದ್ದ ಪ್ರಿಯ ಪುತ್ರರಾದ ಸಯ್ಯಿದ್ ಹುಸೈನ್ ಆಟ್ಟಕ್ಕೋಯ ತಂಙಳ್ರನ್ನು ಪಾಣಕ್ಕಾಡ್ಗೆ ತೆರಳಲು ಹೇಳಿ, ಅವರ ಕೈಯ್ಯಲ್ಲಿ ಒಂದು ಬೆತ್ತವನ್ನು ನೀಡಿದರು. ಅಂದು ದರ್ಸ್ ವಿದ್ಯಾರ್ಥಿಯಾಗಿದ್ದರು ಆಟ್ಟಕ್ಕೋಯ ತಂಙಳ್. ಪಾಣಕ್ಕಾಡ್ಗೆ ತೆರಳಿದ ಅವರು ಆ ಮನೆಯ ವಿವಿಧ ಸ್ಥಳಗಳಲ್ಲಿ ಮೃತಶರೀರದಂತೆ ನೆಲಕ್ಕೊರಗಿದ, ಆ ಶರೀರಗಳ ಬಳಿ ತೆರಳಿ ಪ್ರಿಯ ಪಿತರು ನೀಡಿದ ಬೆತ್ತದ ಮೂಲಕ ಚಿಕ್ಕದಾದ ಒಂದು ಏಟನ್ನು ಕೊಟ್ಟರು. ಆಶ್ಚರ್ಯವೆಂಬಂತೆ ಅವರೆಲ್ಲರೂ ಎದ್ದು ನಿಂತರು. ಇದನ್ನು ಪ್ರತ್ಯಕ್ಷವಾಗಿ ಬೆರಗುಕಣ್ಣಿನಿಂದ ನೋಡಿದ ಊರಿನ ಜನರು ಸಂತೋಷಭರಿತರಾದರು. ಅದಕ್ಕೆ ಕೃತಜ್ಞತೆ ಎಂಬಂತೆ ಮನೆಯ ಯಜಮಾನರು ತನ್ನ ಮನೆಯನ್ನೇ ತಂಙಳ್ರಿಗೆ ಉಡುಗೊರೆಯಾಗಿ ನೀಡಿದರು. ಅವರು ಮತ್ತೊಂದು ಮನೆಯನ್ನು ಕಟ್ಟಿ ಸಮೀಪದಲ್ಲಿ ವಾಸಿಸಿದರು. ಈ ಮನೆಯಲ್ಲಿ ಹುಸೈನ್ ಆಟ್ಟಕ್ಕೋಯ ತಂಙಳ್ ವಾಸಮಾಡಿದರು. ಅಂದಿನಿಂದ ಪಾಣಕ್ಕಾಡ್ ತಂಙಳ್ ಎಂಬ ನಾಮವು ಉದಯವಾಯಿತು.

📝 ಕಲ್ಲಡ್ಕ ಫೈಝಿ

Skssf_Shanthiangady_Unit

Tuesday, 22 September 2020

ನಲ್ಲೊರೂ ನಸೀಹತ್ ಭಾಗ-01

 *══❁✿🕳.﷽ .🕳✿❁══* 


▪•••┈┈•••💧•••┈┈•••▪
*::::: ನಲ್ಲೊರು ನಸೀಹತ್ :::::*
▪•••┈┈•✿❁✿•┈┈•••▪

ಕವನ ರೀತಿ:- ಅಲ್ ಮವಾಹಿಬುಲ್ ಜಲಿಯ್ಯ
**************************

ಮುತ್ತಾಯೆ ನಬಿರೆ ಪಲ್ಕ ಈ ಒರು ಬೈತ್
ನಿಂಕಾಯಿ ತಂಡೋ ನಲ್ಲೆ ನಸೀಹತ್
ಬೇನೆಂಗ್ ಎಡ್ತೋ ನಿಕ್ಕ್ ಸಲಾಮತ್ತ್
ನಕ್ಕುನ್ಡು ಇಂಡ್ ನಲ್ಲೊರೂ ಹಾಜತ್ತ್
ನಿಂಕಿಂಡುಂ ಆಕ್ಕಾ ನಲ್ಲೊರೂ ನಿಯ್ಯತ್ತ್
ನಕ್ಕಾವೊನುಂ ಒರು ನಾಲ್ ನಲ್ಲೊರು ಮೌತ್ತ್
ನಕ್ಕಾಯಿ ತೇಡ್ ರಹ್ಮತುಲ್ಲೊರು ವಖ್ತ್
ಇದ್ ಮಾತ್ರ ನಕ್ಕಿಂಡುಲ್ಲೆ ವಸಿಯ್ಯತ್
ನಾನಾಯಿ ಪೋಯೆಂಗಿಂಡೊರೂ ಮಯ್ಯತ್ತ್
ನಕ್ಕಾಯಿ ಓದು ಸೂರ ಮುಲ್ಕುಂ ಪತ್ತ್
ನಕ್ಕಂಡ್ ನೀನುಂ ತೇಡ್ ಮಗ್-ಫೀರತ್ತ್
ತೇಡೊಂಬೊ ನೀನುಂ ಕೂಟ್ಟು ಮರ್ಹಮತ್ತ್
ನಕ್ಕುಂಡು ಆಸ ಕಿಟ್ಟೊಗುಂ ಜನ್ನತ್
ನಾನಿಕ್ಕೊನಲ್ಲೆ ಇಂಡ್ ನೆಬಿ ಮಿಲ್ಲತ್ತ್*

🛑ಪವಿತ್ರ ಖುರ್-ಆನ್👇🛑

ಖುರ್-ಆನ್ ರಬ್ಬುರೆ ಗ್ರಂಥಮೇ ಚಙ್ಙಾಯಿ
ಖೌಲುಂಡು ಮುಸ್ಹಫ್ ಚೊಲ್ಡೊರು ಪೇರಾಯಿ
ಖಲೀಫ ಸಿದ್ದೀಖ್ ಇಟ್ಟೆದೇ ಸ್ವರಫಾಯಿ
ಕಾನ್ ರಿಸಾಲ ತುಲ್ ಬುದೂರಿಲ್ ಪೋಯಿ
ಕೈಕಾಲ್ ಶುದ್ಧಿ ಆಕ್ಕೊನೂ ಕ್ಲೀನಾಯಿ
ಕೇಕ್ಕೋನು ನೀನುಂ ಗ್ರಂಥ ಕಾಮಿಲಾಯಿ

ಖುರ್-ಆಂಡೆ ಅಕ್ಷರ ಮದ್-ಲ್-ಲುಂ ಎಲ್ದಂಡ
ಅದ್ ಪಲ್ಲಿ ಆಯೆಂಗುಂ ಸಮಾ ಆಕ್ಕಂಡಾ
ಕರಾಹತ್ ಖೌಲುಂ ಶರ್ವಾನಿ ಅದ್ ಲುಂಡು
ಒನ್ನಾ ಕಿತಾಬು ಎಡ್ತ್ ನೋಕ್ಕದ್ ಕಾಂಡ್

ಅಮುಸ್ಲಿಮಾಯೊರು ವ್ಯಕ್ತಿಗುಂ ಕೊಡುಕ್ಕಂಡ
ಮರಿಕ್ಕೋಗು ಐತಾ ಕೊಡ್ಕೊಗುಂ ಮಡಿಕಂಡ
ಅದೊರು ಉರ್ಕುಲು ಕೆಟ್ಟಿ ಕೊಡ್ತೆಂಗುಂ ಸಮ
ಬಹುಮಾನ ಚೊಮ್ಮ ಯಾರ ಇನ್ನೆಂಗುಂ ಸಮ

ಖುರ್-ಆಂಡೆ ನೀನ್ ನಜಸುಲುಂ ಎಲ್ದಂಡ
ಅನರಬಿ ಬಾಸೆಲ್ ಎಲ್ದೊಗುಂ ನೋಕ್ಕಂಡ
ಫತ್ಹುಲ್ ಮುಈನಿ ಲುಂ ಹರಾಮುನ್ಟುಂಡು
ಇಬ್ನುಲ್ ಹಜಾರ್ ತಙ್ಙಲೇ ಖೌಲುಂಡು

ತುಪ್ನೇರ್ ಬೆರಲ್-ಲ್ ತೊಟ್ಟು ನೀ ತೊರಕಂಡ
ಫತಾವ ನೋಕ್ಕು ಹುಕುಮು ಚೊನ್ನುಟ್ಟುಂಡು
ನಜಸಾಯೆ ಒನ್ನುಂ ಎಡ್ಕೋಗೂ ಮರಕಂಡ
ನಷ್ಟೆಂದು ಬನ್ನೆಂಗುಂ ಪೆರಗ್ ನೀ ಜಾರಂಡ

ಮಿಸ್ವಾಕ್ ಓತುಗು ಮುನ್ನೊಲೇ ಆಕ್ಕೋನು
ಸುಗಂಧ ಉಲ್ಲೊರು ಗಂಧ ನೀ ಮೆತ್ತೊನು
ಕ್ಲೀನಾಯ ಜಾಗೆಲ್ ಚಂದ ನೀ ದೈಕೋನೂ
ಮೇಲಾಯೆ ನಲ್ಲೆ ಜಾಗೆಲುಂ ಬೈಕ್ಕೋನು

ಖಿಬ್ಲಕ್ಕ್ ನೇರ್ ದೆಕ್ಕೊಗುಂ ಸುನ್ನತ್
ಅದ್ ಪಲ್ಲಿ ಆಯೆಂಗುಂ ಸಮ ಬರ್ಕತ್ತ್
ಚಂದುಲ್ಲೆ ಚಟ್ಟ ಮುಂಡುಲುಂ ಚಂದತ್ತ್
ಚಾಯಾಂಟೆ ಓದು ನಿಕ್ಕದ್-ಲ್ ನಿಅಮತ್ತ್
 
ನೋಕಾಂಟೆ ಓದ್ಯೆಂ ಉಂಡು ಕೂಲೀ ನೂರು
ನೋಕಿಟ್ಟ್ ಓದುರೆ ಆಲ್-ಗುಂ ಇರ್ನೂರು
ಮುಂಡಾಟ್ಟ ಬುಟ್ಟು ಓದೊನೂ ಈ ನೂರು
ಮುರಿಯಾಂಟೆ ನಾಲ್ಕುಂ ಓದ್ ನೀನ್ ಜೋರು

*🛑ಮರಿಪು🛑*

ಪೆತ್ತೆಂಗ್ ಮರಿಕೋಗ್ ಉಲ್ಲೆದುಂ ನೇರಲ್ಲೆ
ಪೇರಿನ್ನೆ ಆಲುಂ ಪೋಯೆದುಂ ನೆನಪಿಲ್ಲೆ
ಪೊಡಿ ಕಾಸ್ ಇನ್ನೆ ಟೈಮುಲುಂ ಫ್ರೆಂಡ್ಸಿಲ್ಲೆ
ಪೊಡಿ ಮನ್ನ್ ಇಟ್ಟ್ ಪೋಯೆದುಂ ಕಂಡಿಲ್ಲೆ
ಕಾರ್ ರಿಕ್ಷ ಲಾರಿ ಪತ್ತಿ ಪೋಯವುನಲ್ಲೆ
ಕಾಲ್ ಆರ್ ಇನ್ನೆ ಕಟ್ಟಿಲುಂ ಪತ್ಯಲ್ಲೆ

ನಾಲಞ್ಜ್ ತಟ್ಟ್-ರೆ ಔತು ಕೆಡನ್ನವುನಲ್ಲೆ
ನಾಲೀ ಪೆಡಕ್ಕ್-ರೆ ಖಬುರುಲುಂ ಒರ್ತಲ್ಲೆ
ಮಣಿ ಮುತ್ತು ಪೋಲ್ತೊರು ಪೆನ್ನ್ ನಿಕ್ಕಿಂತಲ್ಲೆ
ಮರನ್ನ್-ಟ್ಟ್ ಪೋಯೆದ್ ನಿಂಡೆ ಬುಟ್ಟುತ್ತಲ್ಲೆ
ಕಟ್ಟಿಲ್ಲ್ ಕೆಡನ್ನ್ ಕಲಿ ಚಿರಿಚ್ಚೆದ್ ಅಲ್ಲೆ
ಕಟೀಲ್ ಇಲ್ಲಾ ತೌಡೆಗುಂ ಬನ್ನಲ್ಲೆ

ನಿಂಡೊಟ್ಟ ಇನ್ನೊರು ಆಲುಂ ಇಂಡಿಲ್ಲಲ್ಲೆ
ನಿಂಡಿಂಡ್ ಬುಟ್ಟು ಪೋಯೆದದ್ಬುತ ಅಲ್ಲೆ
ಕನ್ನಾಯೆ ಜಂಡುಂ ಮನ್ನ್ ತಿಂಡ್ ತ್ತಲ್ಲೆ
ಕಲ್ಲಾಯೆ ತಡಿಲುಂ ಪುಲು ನೊರಞ್ಞಿತ್ತಲ್ಲೆ
ಖಬುರುಲ್ಗ ಫುಲ್ಲುಂ ಪಾಂಬು ತೇಲೇ ಉಲ್ಲೆ
ಕೊತ್ತೋಗು ನಿಂಡೆ ಚುತ್ತು ನಿಂಡ್ ರಲ್ಲೆ

ಓಡಿಟ್ಟ್ ಪೋನುಗು ಒರು ತೆರುಂ ಇಲ್ಲಲ್ಲೆ
ಓಡ್ಪಾಟೊಗಂಡ್ ನಿಂಡೆ ಕೈ ಕಾವುಲ್ಲೆ
ಫ್ಯಾನ್ ಏಸಿ ರೂಮುಲು ಪಂಡ್ ಕೆಡನ್ನೌನಲ್ಲೆ
ಪಾಯ್ ಒಲ್ಲಿ ಇಲ್ಲಾಂ ಟಿಂಡ್ ಮರಕೆಟ್ಟಿಲ್ಲೆ
ಇಂಡುಲ್ಲೆ ನಿಂಡೆ ಅವಸ್ಥ ನೀ ಕಂಡಿಲ್ಲೆ
ಎಂದಾಕ್ಕೊಗುಂ ಆವಾಂಟ್ ನೀ ಕುಡುಙ್ಙಿಲ್ಲೆ

ನಿಕ್ಕಾಯಿ ಚೊನ್ನೊ ನಸೀಹತೊನ್ನುಂಡಲ್ಲೆ
ನೀ ಕೇಟ್ಟೆದೆಲ್ಲಾ ಇಂಡ್ ನೀ ಕಂಡಿಲ್ಲೆ
ಕೇಟ್ಟಪ್ಪ ಚೊನ್ನೆ ಪಲ್ಕ ನೆನಪುಂಡಲ್ಲೆ
ಮರ್ಚೆಂಗ್ ನೋಕ ಅಪ್ಪ ನೀ ಚೊನ್ನಿಲ್ಲೆ
ಪಡ್ಚಙ್ಙ ಚೊಲ್ಡೆದ್ ಕೇಕ್ಕೊಗುಂ ಮರನ್ನಲ್ಲೆ
ಕೇಟಿನ್ನ ಮಾತೂ ನೀ ಸಲಾಮತ್ತಲ್ಲೇ

ಮರಿಪುಂಡು ಚೊನ್ನೆ ಚೊಲ್ತು ನೀ ನೆನಚಿಲ್ಲೆ
ಮರ್ಚ್ಚಪ್ಪ ನಿಕ್ಕದ್ ನೇರುಲುಂ ಕಂಡಿಲ್ಲೆ
ನಾಲಾಯೆ ನಾಲುಂ ನಾಲಿ ಪರ್ಚವುನಲ್ಲೆ
ನಾಲತ್ತೆ ನಾಲುಂ ನಿಂಡೆ ಪರಿಕೋಗಿಲ್ಲೆ
ನೆಬಿ ಚೊನ್ನೆ ಪಲ್ಕ ಇಂಡದುಂ ನೇರಲ್ಲೆ
ಆಕಿನ್ನ ಮಾತೂ ನಿಕ್ಕದುಂ ಖೈರಲ್ಲೆ

ಮರಿಕೋಗು ನೀ ರೆಡಿ ಆವು ವಾಜಿಬಲ್ಲೆ
ಮೌತೂರೆ ಮುನ್ನೊಲು ತೌಬ ಚೊಲ್ಲು ನಲ್ಲೆ
ಸೀಕಿನ್ನೆ ಆಲ್-ಗ್ ಬೇಗಮೇ ಬೆಸ್ಟಲ್ಲೆ
ಸೀಕುಲ್ಲೆ ಆಲುಂ ಮೌತುಗುಂ ಮುಟ್ಟಲ್ಲೆ
ಸಕರಾತ್ ನ್ಯಾರ ಮುಸ್ಹಫ್ ಓದೂ ನಲ್ಲೆ
ಈ ಖೌಲು ದರ್ಸ್-ಲ್ ಕೇಟ್ಟೆದುಂ ನೆನಪಿಲ್ಲೆ

ಮೌತಾವೊಗಾಯೊ ರಾಲ್ಲೆ ಬಲ್ತುಂ ಕೆಡತ್ತೋನು
ಕಷ್ಟಾವುಡೆಂಗದ್ ಎಡ್ತೆ ಸೈಡ್-ಗುಂ ಆಕ್ಕೊನು
ಮೊಗ ಕಾಲ್ ಜಂಡುಂ ಖಿಬ್ಲ ನೇರೆ ಬೆಕ್ಕೊನು
ಆ ನ್ಯಾರ ಔನುಂ ನಲ್ಲೆ ಚಿಂತೆಲ್ ಇಕ್ಕೊನೂ
ನೇರಾಯೆ ರಬ್ಬುರೆ ರಹ್ಮತಂಡ್ ಕೇಕ್ಕೊನು
ನಿಕ್ಕಾವೊಗಂಡ್ ಮೌತು ನಲ್ಲೇದಾವೊನೂ

ಸಕರಾತ್ ಟೈಮುಂ ತಾಗ ಯಾರುಂಡಲ್ಲೆ
ಅದ್ಕಾಯಿ ಕುಡಿಕೋ ತನ್ನಿ ಕೊಡ್ಕೋನಲ್ಲೇ
ಇದ್ ಮುಗ್ನಿ ಫಸ್ಟ್ ಜುಝುಇಲುಂ ಉಂಡಲ್ಲೇ
ನಬಿ ತಙ್ಙ ಚೊನ್ನೇ ಪಲ್ಕ ಒನ್ನುಂಡಲ್ಲೇ
ತೇನಂಡ್ ಕುಡಿಪಾ ಟ್ಯೆಂಗ್ ನಲ್ಲೇದಲ್ಲೆ
ಇದ್ ಬರಕತಿಲ್ ಮಕ್ಕೀಯತಿಲ್ ಕಾಂಡಲ್ಲೆ

ಹೈಲುಲ್ಲೆ ಪೆನ್ನೌ ಡುಲ್ಲೆದುಂ ಕರಾಹತ್
ತೂಕಿಟ್ಟೆ ಫೋಟೋ ಉಲ್ಲೆದುಂ ಮುಸಿಬತ್
ಸುಗಂಧ ಉಲ್ಲೊರು ಸೆಂಟಿಡೋಗುಂ ಸುನ್ನತ್
ಅಂಲಾಕ್ ಬನ್ನೆಂ ಕಿಟ್ಟೊಗುಂಡು ಬರಕತ್
ಈ ಚೊನ್ನೆ ಸೊರ ನೀ ಆಕ್ಯೆ ಸಲಾಮತ್
ಇಲ್ಲೆಂಗ್ ನಿಕ್ಕಿದ್-ಲುಂಡ್ ಬೆಲ್ಯೆ ಮಲಾಮತ್

ಉಲು ಇನ್ನ್ ಮರ್ಚೆಗಂಡ್ ಜಿಬ್ರೀಲ್ ಬಂಡ್
ಇದ್ ಬಿಗ್ಯ ನಾಪ್ಪತೆಟ್ಟ್-ಲುಂ ನಿಕ್ಕಾಂಡ್
ಯಾಸೀನ್ ಓದೂ ತಾಗ ಕೊರಯೋಗಂಡ್
ಓದೊನು ರಅದುಂ ದರ್ದ್ ಕೊರಕೋಗಂಡ್
ಮರ್ಚೆಂಗ್ ಖುರ್ಆನ್ ಓದು ನಲ್ಲೇ ದಂಡ್
ರಂಲೀ ಇಮಾಮು ಚೊನ್ನೆ ಖೌಲುಂ ಕಾಂಡ್

ನೀ ಚೊನ್ನು ಕೊಡ್ಕೋನಾಯೆದುಂ ಶಹಾದತ್
ಲಾಸ್ಟ್ ಔನ್ಡೆ ಚೊಲ್ತಿಂ ಡಾಯಿಡೆಂಗಾ ಜನ್ನತ್
ಉಗುರೌಂಡೆ ಆನತ್ತೆಡ್ಕೊಗುಂ ಸುನ್ನತ್ತ್
ಜಾನೀಬ್ ಮೀಸಂ ಎಡ್ಕೊನೇ ಆ ನ್ಯಾರತ್
ಮಿಸ್ವಾಕ್ ಆಕ್ಕೋನಾಯೆದುಂ ಆ ಸಾಅತ್ತ್
ಮುತ್ತಾಯೆ ನಬಿಯುಂ ಚೊನ್ನೆದೇ ನಸೀಹತ್

ಇಬ್ನುಲ್ ಹುಳೈರ್ ಚೊಲ್ಡೊರೂ ಸ್ವಹಬತ್ತ್
ಮರಣತ್ತೆ ಕಂಡ ಐ ಲೆಸರ್ ತಪ್ಪಿ ಪೋಯ್ತ್ 
ಪಿನ್ನುಲ್ಲೆ ನಾಲುಂ ಪೈಚ್ ನಡನ್ನ್-ತ್ತ್
ಕಂಡೆಙ್ಙ ಚೊಲ್ಲು ಐಲೊರೂ ಮಯ್ಯತ್ತ್
ಈಸಾ ನಬಿಕ್ಕೀ ಚಿಂತ ಬನ್ನೆಂಗ್ ಐತ್
ತಡಿ ಎಲ್ಲ ಚ್ವಾರ ಬರ್ನುಗುಂ ಸುರುವೈತ್

ದಾವೂದ್ ನೆಬಿಕ್ಕುಂ ಇಂತೊರೂ ಹಾಲತ್ತ್
ಮರಣತ್ತೆ ವಾರ್ತ ಕೇಕ್ಕುಡೋ ನ್ಯಾರತ್ತ್
ಕೈಕಾಲ್ ತಡಿಯುಂ ಆವುಡುಂ ಫಿರ್ಖತ್ತ್
ಮುಂಡಾಟ್ಟ ಇಲ್ಲಾಂಟಾವುಡೇ ಆ ವಖ್ತ್
ಮರಣತ್ತೆ ಕನ್ನ್-ಲ್ ಕಂಡೆಂಗುಂ ಎಸರ್ತ್
ಮರಣತ್ತೆ ಚಿಂತೆ ಗಾಕ್ಕೊನೂ ಪುರ್ಸೊತ್ತ್

ನಲ್ಲಾವೊನು ನಾ ನಾಲ ಚೊನ್ನೊರು ಮುದ್ದತ್
ಪೋಯಿತ್ತ್ ಅರ್ಸ ಕೊರೊಡಿ ಇಲ್ಲದ್ ಶಿದ್ದತ್
ನಾಲತ್ತೆ ನಾಲುಂ ಪೋಯೆದುಂ ಕರಾಮತ್
ನಿಕ್ಕಾಯೆದೊನ್ನೆ ನಿಂಡೆ  ನಾಲ್ ಫಲೀಹತ್
ಇಂಡಾಕ್ಕೊಗುಲ್ಲೇ ದಿಂಡ್ ತೀರ್ಕ್ ಸಲಾಮತ್
ನಾಲತ್ತ್-ಗಾಯಿ ಬೆಚ್ಚಿರಂಡ ಮಲಾಮತ್

〰〰❁✿🌹🌹✿❁ 〰〰
*✒ದುಆ ವಸಿಯ್ಯತುಂಡು
ಮುಸಾಫಿರಾಯ ನಂಡೊ🤲*
〰〰❁✿🌹🌹✿❁ 〰〰

Friday, 10 July 2020

ಅಂಗೀಕೃತ ತ್ವರೀಖತುಗಳು

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

01. ಅನ್ನಖ್ಷಬನ್ಧೀ ======== ಖ್ವಾಜಗಾನ್ ಬಹಾಉದ್ದೀನ್ ನಕ್ಷಬಂಧೀ .
02. ಖಾದಿರಿಯ್ಯ ======== ಅಬ್ದುಲ್ ಖಾದಿರ್ ಜೀಲಾನಿ .
03. ಷಾದುಲಿಯ್ಯ ======== ಅಬುಲ್ ಹಸನ್ ಅಷ್ಷಾದುಲಿ .
04. ರಿಫಾಯಿಯ್ಯ ======== ಅಹ್ಮದ್ ಕಬೀರ್ ಅರ್ರಿಫಾಯಿ .
05. ಅಹ್ಮದಿಯ್ಯ ========= ಅಹ್ಮದ್ ಶಂಸುದ್ದೀನ್ ಬಿನ್ ಈಸ ಮರ್ಮರವಿ .
06. ದಸೂಖಿಯ್ಯ ======== ಇಬ್ರಾಹೀಂ ಅದ್ದಸೂಖಿ .
07. ಅಕ್ಬರಿಯ್ಯ ========= ಶೈಖ್ ಅಲ್ ಅಕ್ಬರ್ ಇಬ್ನು ಅರಬಿ .
08. ಮೌಲವಿಯ್ಯ ======== ಜಲಾಲುದ್ದೀನ್ ಮುಹಮ್ಮದ್ ರೂಮಿ .
09. ಖುಬ್ರವಿಯ್ಯ ========= ನಜ್ಮುದ್ದೀನ್ ಖುಬ್ರ.
10. ಸುಹ್ರವರ್ದಿಯ್ಯ ======= ಲಿಯಾಉದ್ದೀನ್ ಅಬೂ ನಜೀಬ್ ಸುಹ್ರವರ್ದಿ (ಶಹಾಬುದ್ದೀನ್ ಉಮರ್ ಸುಹ್ರವರ್ದಿ) .
11. ಖಲ್ವತಿಯ್ಯ ========= ಉಮರ್ ಅಲ್ ಖಲ್ವತಿ . (ಹಸನುಲ್ ಬಸ್ವರಿ) .
12. ಜಲ್ವತಿಯ್ಯ ========= ಅಕ್ಬಿಯಿಕ್ ಸುಲ್ತಾನ್ . (ಇಸ್ಮಾಈಲುಲ್ ಹಖ್ಖುಲ್ ಬರೂಸವಿ).
13. ಬಗ್ದಾಷಿಯ್ಯ ======== ಹಾಜಿ ಬಕ್ತಾಷ್ ವಲೀ ಬಾಲಿಂ ಸುಲ್ತಾನ್ .
14. ಗಝ್ಝಾಲಿಯ್ಯ ======== ಅಬೂ ಹಾಮಿದ್ ಮುಹಮ್ಮದುಬ್ನು ಮುಹಮ್ಮದುಲ್ ಗಝ್ಝಾಲಿ .
15. ರೂಮಿಯ್ಯ ========= ಜಲಾಲುದ್ದೀನ್ ಮುಹಮ್ಮದ್ ರೂಮಿ .
16. ಸಅದಿಯ್ಯ =========
17. ಚಿಸ್ತಿಯ್ಯ ========== ಗರೀಬ್ ನವಾಝ್ ಖಾಜಾ ಮುಈನುದ್ದೀನ್ ಚಿಸ್ತಿ .
18. ಶಅಬಾನಿಯ್ಯ ========
19. ವಲ್ಕಾಷನಿಯ್ಯ =======
20. ಹಂಝವಿಯ್ಯ ========
21. ಬೈರಾಮಿಯ್ಯ ======== ಹಾಜಿ ಬೈರಾಂ .
22. ಅಷಾಖಿಯ್ಯ =========
23. ಬಕರಿಯ್ಯ ========== ಅಹ್ಮದ್ ಬಿನ್ ಅಲ್ ಸಿದ್ದೀಖ್ ಅಲ್ ಗುಮರಿ .
24. ಉಮರಿಯ್ಯ =========
25. ಉಸ್ಮಾನಿಯ್ಯ ========
26. ಅಲವಿಯ್ಯ ========== ಇಬ್ನು ನುಸೈರ್ .
27. ಅಬ್ಬಾಸಿಯ್ಯ =========
28. ಝೈನಬಿಯ್ಯ =========
29. ಈಸವಿಯ್ಯ ========== ಶೈಖುಲ್ ಕಾಮಿಲ್ ಮುಹಮ್ಮದ್ ಅಲ್ ಹಾದಿ ಬಿನ್ ಈಸಾ .
30. ಬುಹೂರಿಯ್ಯ =========
31. ಹದ್ದಾದಿಯ್ಯ ========== ಅಬ್ದುಲ್ಲಾಹಿಬ್ನು ಅಲವಿ ಅಲ್ ಹದ್ದಾದ್ .
32. ಗೈಬಿಯ್ಯ ===========
33. ಹಳರಿಯ್ಯ =========== ದಾಊದ್ ಅಲ್ ಲಾಹಿರಿ .
34. ಷತ್ತ್ವಾರಿಯ್ಯ ========== ಸಿರಾಜುದ್ದೀನ್ ಅಬ್ದುಲ್ಲ ಷತ್ತಾರ್ .
35. ಬುಯೂಮಿಯ್ಯ ========
36. ಮಲಾಮಿಯ್ಯ ========= ಅಬೂ ಅಬ್ದುರ್ರಹ್ಮಾನ್ ಅಸ್ಸುಲ್ಲಮಿ .
37. ಐದರೂಸಿಯ್ಯ ========= ಸಯ್ಯಿದ್ ಅಬೂಬಕರ್ ಅಲ್ ಅದಾನಿಬ್ನು ಅಬ್ದುಲ್ಲಾ ಅಲ್ ಐದರೂಸ್ .
38. ಮತ್ಬೂಲಿಯ್ಯ =========
39. ಸುಂಬುಲಿಯ್ಯ ========= ಸುಂಬುಲ್ ಸಿನಾನ್ ಅಫೆಂದಿ .
40. ಉವೈಸಿಯ್ಯ ========== ಉವೈಸುಲ್ ಖರ್ನಿ
 〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ಮನ್ಸೂರ್ ಅಲ್ ಹಲ್ಲಾಜ್ (ರಅ)

*🌾ಮೊಳಕೆ🌾*
💐💐💐💐

*ಮನ್ಸೂರ್ ಅಲ್ ಹಲ್ಲಾಜ್ (ರ.ಅ)*
🍀🍀🍀🍀🍀🍀🍀🍀🍀🍀

ಸೂಫಿಗಳಲ್ಲಿ ಪ್ರಸಿಧ್ಧರೂ ತ್ಯಾಗಿಯೂ ಆಗಿದ್ದ ಮಹಾನರಾಗಿದ್ದರು *ಮನ್ಸೂರ್ ಅಲ್ ಹಲ್ಲಾಜ್* (ರಅ). ಪೂರ್ಣ ಹೆಸರು ಅಬುಲ್ ಮುಗೀಸ್ ಅಲ್ ಹುಸೈನ್ ಬಿನ್ ಮನ್ಸೂರ್ ಅಲ್ ಹಲ್ಲಾಜ್ (ರಅ). ಪೇರ್ಶ್ಯನ್ ಸೂಫೀ ಆಧ್ಯಾತ್ಮಿಕ ಲೋಕದ ಚಕ್ರವರ್ತಿಗಳಲ್ಲಿ ಅಗ್ರಗಣ್ಯರಾಗಿದ್ದರು . “ಅನಲ್ ಹಖ್” ಎಂಬ ಒಂದು ಪ್ರಖ್ಯಾಪನೆಯಿಂದ ಎಂದೆಂದೂ ಸ್ಮರಿಸಲ್ಪಡುವ ಒಬ್ಬರು ವಿವಾದ ಪುರುಷರಾಗಿ ಮಾರ್ಪಟ್ಟರು . ಪರಮ ಸತ್ಯ ನಾನಾಗಿರುವೆನು ಎಂಬ ಅರ್ಥ ಬರುವ ಪದ ಬಳಕೆಯನ್ನು ದೈವ ವಾದವಾಗಿ ಕಂಡವರು ಹಲ್ಲಾಜರನ್ನು ಬೇಟೆಯಾಡಲು ಶುರುಮಾಡಿದರು . ಅನುಚರರು ಆ ಮಾತನ್ನು ಅರ್ಥೈಸಿರುವುದು ಈ ರೀತಿಯಲ್ಲಾಗಿತ್ತು "ನಾನು ಪರಮ ಸತ್ಯದಲ್ಲಿ ಪೂರ್ಣಾವಾಗಿ ವಿಲೀನನಾಗಿರುವೆನು" . ಸೂಫೀ ಸಂತರುಗಳ ಅತ್ಯುನ್ನತಾವಸ್ಥೆಯಾದ *ಫನಾಉಲ್ ಫನಾ* ತಲುಪಿದ ಹಲ್ಲಾಜರ ಪರಾಮರ್ಶೆಗಳು ಕಾರಣವಾಗಿ ಅವರು ಕೊಲ್ಲಲ್ಪಟ್ಟರು.

*ಜೀವನ*

ಕ್ರಿ.ಶ 857 ರಲ್ಲಿ ಪೇರ್ಶ್ಯಾದ ಬೈಸ ಎಂಬಲ್ಲಿ  ಜನಿಸಿದರು . ತಂದೆ ತಾಯಿ ಪಾರ್ಸಿ ಧರ್ಮದವರಾಗಿದ್ದರು , ತನ್ನ ಬಾಲ್ಯದಲ್ಲೇ ಮುಸ್ಲಿಮರ ಪವಿತ್ರ ಗ್ರಂಥವನ್ನು ಕಂಟಪಾಠ ಮಾಡಿದರು . ಇಸ್ಲಾಮಿಕ ಕರ್ಮ ಶಾಸ್ತ್ರ ಮತ್ತು ಹದೀಸ್ ಎಂಬ ಪ್ರವಾದಿ ಚರ್ಯೆಯನ್ನು ಸುಧೀರ್ಘ ಕಾಲ ಕಲಿತರು . ತಸ್ತರಿ, ಬಸ್ರ, ಖುರಾಸಾನ್, ತುರ್ಕಿಸ್ಥಾನ್, ಚೆಚನ್ಯ, ಮಕ್ಕಾ ದಲ್ಲೂ ವಿಧ್ಯೆಗಾಗಿ ಸಂಚರಿಸುತ್ತಾ ಸುಧೀರ್ಘ ವರ್ಷಗಳ ಕಾಲ ಕಲಿಕೆಯಲ್ಲೇ ಮುಂದುವರೆದು ತಮ್ಮ ಮಾತೃ ಭಾಷೆ ಪಾರಿಸಿಗಿಂತಲೂ ಅರಬಿ ಭಾಷೆಯಲ್ಲಿ ನಿಪುಣತೆ ಹೊಂದಿದ್ದರು . ಖುರ್-ಆನ್ ಕಂಟಪಾಠ ಮಾಡಿದ ಹಲ್ಲಾಜರಿಗೆ ಧ್ಯಾನ ಮಾರ್ಗ ತಿಳಿಯಲು ಅಧಿಕ ಸಮಯವೇನೂ ಬೇಕಾಗಿ ಬರಲಿಲ್ಲ.

*ಆಧ್ಯಾತ್ಮಿಕತೆಯತ್ತ ಪಯಣ*

ಪ್ರಸಿಧ್ದ ಸೂಫೀ ಸಂತರಾಗಿದ್ದ *ದುನ್ನೂರುಲ್ ಮಿಸ್ರಿ* ಯವರ ಶಿಷ್ಯ ಪ್ರಮುಖರಾದ ತುಸ್ತರಿ ಮತ್ತು ಜುನೈದುಲ್ ಬಗ್ದಾದಿಯವರ ಶಿಷ್ಯತ್ವ ಸ್ವೀಕರಿಸಿದರು . ಅನೇಕ ಪಂಡಿತರಿಂದಲೂ, ಸೂಫಿಗಳಿಂದಲೂ, ಮಕ್ಬರಗಳಿಂದಲೂ ಸಂಪನ್ನವಾಗಿತ್ತು ಅಂದಿನ ಬಗ್ದಾದ್ . ತನ್ನ ಹದಿನಾರನೇ ವಯಸ್ಸಿನಲ್ಲಿ ಬಗ್ದಾದಿಗೆ ತೆರಳುವ ತೀರ್ಮಾನ ತೆಗೆದುಕೊಳ್ಳಲು ಇದುವೇ ಕಾರಣವಾಗಿತ್ತು . ಬಗ್ದಾದ್ ತಲುಪಿದ ಮನ್ಸೂರ್ ಅಲ್ ಹಲ್ಲಾಜರು ಸಅದ್ ಬಿನ್ ತುಸ್ತರಿಯವರಿಂದ ತ್ವರೀಖತ್ ಸ್ವೀಕರಿಸಿ ಬೈಅತ್(ಅನುಸರಣಾ ಪ್ರತಿಜ್ಞೆ) ನಡೆಸಿ ಶಿಷ್ಯರಾದರು . ಅಲ್ಲಾಹನ ದಿಕ್ರ್ ಗಳಲ್ಲಿ ತಲ್ಲೀನರಾಗುವ ಸದಸ್ಸುಗಳಲ್ಲಿ ಹಲ್ಲಾಜರು ಫನಾದ ಅವಸ್ಥೆಗೆ ನೀಗುತ್ತಿರುವುದನ್ನು ಕಂಡ ತುಸ್ತರಿಯವರು ಶಿಷ್ಯನೊಡನೆ ಯಾತ್ರೆ ಹೊರಡಲು ಆಜ್ಞೆಯಿಟ್ಟರು .
ಶರೀಅತ್ (ನಿಯಮ), ತ್ವರೀಖತ್(ಮಾರ್ಗ), ಹಖೀಖತ್(ಪರಮ ಸತ್ಯ), ಮಅರಿಫತ್(ಬ್ರಹ್ಮ ಜ್ಞಾನ) ಈ ರೀತಿಯಾಗಿದೆ ಸೂಫಿಸಂನ ಮೆಟ್ಟಿಲುಗಳು . ಶರೀಅತ್ ಹಿಡಿದು ತ್ವರೀಖತ್ ಸ್ವೀಕರಿಸುವುದರೊಂದಿಗೆ ಸೂಫಿಸಂ ಪ್ರಾರಂಭವಾಗತ್ತದೆ. ಹಖೀಖತು ದಾಟಿ ಮಅರಿಫತ್ ತಲುಪುವ ಸೂಫಿಗಳು ಆತ್ಮೀಯ ಮಾರ್ಗದಲ್ಲಿ ಉನ್ನತಿಗೇರುವುದರೊಂದಿಗೆ ಕೆಲವರು ಉನ್ಮಾದ ಸ್ಥಿತಿ ತಲುಪುತ್ತಾರೆ . ಇದು ಒಂದು ರೀತಿಯ ಪರೀಕ್ಷಣಾ ಘಟ್ಟವಾಗಿದೆ , ಈ ಅವಸ್ಥೆಯಲ್ಲಿ ಸೂಫಿಗಳು ಇಸ್ಲಾಮಿನ ನಿಯಮ ಶಾಸ್ತ್ರವಾದ ಶರೀಅತ್ ಪೂರ್ಣವಾಗಿ ಅನುಸರಿಸಬೇಕೆಂದಿಲ್ಲ. ಉನ್ಮಾದ ಸ್ಥಿತಿಯಲ್ಲಿನ ನಡತೆಗಳು ಸಾಮಾನ್ಯ ಜನರಲ್ಲಿ ಗೊಂದಲವನ್ನು ಉಂಟುಮಾಡುತ್ತದೆ . ಈ ಕಾರಣದಿಂದ ಏಕಾಂತ ವಾಸ ಅಥವಾ ಸಂಚಾರಗಳು ನಡೆಸಬೇಕಾಗುತ್ತದೆ . ಈ ಕಾರಣದಿಂದಾಗಿದೆ ಹಲ್ಲಾಜರನ್ನು ಯಾತ್ರೆ ಹೋಗಲು ನಿರ್ಧೇಶಿಸಿರುವುದು . ಅಥವಾ ಆಧ್ಯಾತ್ಮಿಕತೆಯ ಉನ್ನತ ಶಿಖರಗಳನ್ನು ಶಿಷ್ಯನಾದ ಹಲ್ಲಾಜರು ತಲುಪಿರುವರು ಎಂದು ಮನಗಂಡ ಗುರು ಯಾತ್ರೆಗೆ ಆದೇಶವಿತ್ತರು ಎಂದು ವ್ಯತ್ಯಸ್ಥ ಅಭಿಪ್ರಾಯಗಳಿವೆ .

*ಮಕ್ಕಾದಲ್ಲಿ*

ಪವಿತ್ರ ಮಕ್ಕಾ ತಲುಪಿದ ಮನ್ಸೂರ್ ಅಲ್ ಹಲ್ಲಾಜ್ ಮಕ್ಕಾದ ಮಸೀದಿಯಲ್ಲಿ ತಡೆಯಲಾರದ ಸೆಕೆ ಮತ್ತು ಕಠಿಣವಾದ ಚಳಿಯನ್ನೂ ಲೆಕ್ಕಿಸದೆ ಸುಮಾರು ವರ್ಷಗಳು ಕಳೆದರು. ಕಷ್ಟಗಳನ್ನು ಸಹಿಸುತ್ತಾ ಶರೀರದ ಇಛ್ಛೆಗಳೊಂದಿಗೆ ಹೋರಾಡುತ್ತಿದ್ದರು. ಪವಿತ್ರ ಮಕ್ಕಾ ಮಸೀದಿಯಲ್ಲಿ ಯಾವುದೇ ಮೇಲ್ಚಾವಣಿಯ ಅಡಿಯಲ್ಲೂ ಕುಳಿತುಕೊಳ್ಳುತ್ತಿರಲಿಲ್ಲ. ಒಂದು ವರ್ಷ ಪೂರ್ತಿ ಉಪವಾಸವು ಸ್ವಲ್ಪ ನೀರು ಮತ್ತು ತುಂಡು ರೊಟ್ಟಿಯಿಂದ ಮಾತ್ರ ಉಪವಾಸ ತೆರೆಯುತ್ತಿದ್ದರು. ತಡೆಯಲಾರದ ಸೆಖೆಯಲ್ಲೂ ಜಬಲ್ ಅಬೀ ಖುಬೈಸ್ ಪರ್ವತದ ಮೇಲೆ ಅಲ್ಲಾಹನ ಧ್ಯಾನದಲ್ಲಿ ಕುಳಿತುಕೊಳ್ಳುತ್ತಿದ್ದರು . ಮಕ್ಕಾದ ಸೂಫೀ ಪ್ರಮುಖರಾಗಿದ್ದ ಶೈಖ್ ಅಬ್ದುಲ್ಲಾಹಿಲ್ ಮಗ್ರಿಬಿಯವರು ತಮ್ಮ ಶಿಷ್ಯರೊಂದಿಗೆ ಹಲ್ಲಾಜರನ್ನು ಸಂದರ್ಶಿಸಲು ಹೊರಟರು . ಯಾವತ್ತೂ ಕುಳಿತುಕೊಳ್ಳುತ್ತಿದ್ದ ಹಿಜ್ರ್ ಇಸ್ಮಾಈಲ್ ಪಕ್ಕದಲ್ಲಿ ಹಲ್ಲಾಜರನ್ನು ಕಾಣದೆ ಹುಡುಕುತ್ತಾ ಅಬೀ ಖುಬೈಸ್ ಪರ್ವತವೇರಿದರು . ಆವಾಗ ಪರ್ವತ ಶಿಖರದಲ್ಲಿರುವ ಬಂಡೆಯ ಮೇಲೆ ಶಿರೋ ವಸ್ತ್ರ ಧರಿಸದೆ ನಗ್ನ ಕಾಲುಗಳೊಂದಿಗೆ ಹಲ್ಲಾಜರು ಕುಳಿತಿರುವುದನ್ನು ಕಂಡರು. ಶರೀರ ಪೂರ್ತಿ ಬೆವರ ಹನಿಗಳು ಹೊರಟು ಧರೆಯನ್ನು ಚುಂಬಿಸುತ್ತಿರುವುದನ್ನು ಕಂಡ ಮಗ್ರಿಬಿಯವರು ತಮ್ಮ ಶಿಷ್ಯರೊಂದಿಗೆ ಹೀಗೆ ಹೇಳಿದರು"ಮನಸು ತುಂಬಾ ವಿಶ್ವಾಸ ತುಳುಕುತ್ತಿದೆ ,ಇವರು ಕ್ಷಮಿಸಲಾಗದ ಪರೀಕ್ಷಣೆಗೆ ಒಳಗಾಗಲಿರುವರು" .

 *ಬಸರಾದಲ್ಲಿ*

ಬಸರಕ್ಕೆ ಯಾತ್ರೆ ಹೊರಟ ಹಲ್ಲಾಜರು ಮತ್ತೊಬ್ಬರು ಸೂಫಿ ವರ್ಯರಾದ ಅಂರ್ ಬಿನ್ ಉಸ್ಮಾನ್ ರವರ ಶಿಷ್ಯತ್ವ ಸ್ವೀಕರಿಸಿದರು. ಮುಂದುವರೆಯುತ್ತಾ ಬಸರದ ಅಬೂ ಯಅಖೂಬುಲ್ ಅಖ್ತಾಈಯವರ ಮಗಳನ್ನು ವಿವಾಹವಾದರು. ಉನ್ಮಾದ ಸ್ಥಿತಿ ಮರುಕಳಿಸಿದಾಗ, ಅವರ ಮಾತುಗಳನ್ನು ವಿಮರ್ಷಿಸುತ್ತಾ ಅಂರ್ ರವರು ಅವರನ್ನು ಹೊರಡುವಂತೆ ಕೇಳಿಕೊಂಡರು. ಅಲ್ಲಿಂದ ಬೀದಿಗಿಳಿದ ಹಲ್ಲಾಜರನ್ನು ಜನರು ಮಾನಸಿಕ ಅಸ್ವಸ್ಥರೆಂದು ಹೀಯಾಳಿಸಿದರು . ಅಲ್ಲಿಂದ ಹೊರಟ ಹಲ್ಲಾಜರು ಸೂಫೀ ಸಂತರಾದ ಜುನೈದುಲ್ ಬಗ್ದಾದಿಯ ಸನ್ನಿಧಿ ಸೇರಿದರು . ದಡ ಸೇರಲಿರುವ ಹಡಗಿನಂತೆ ಸದಾ ಸಮಯವೂ ಹಲ್ಲಾಜರು ಸೃಷ್ಟಿಕರ್ತನನ್ನು ಅರಸುತ್ತಾ ಅಲೆದಾಡಿದರು. ಅದರೊಂದಿಗೆ ಹಲ್ಲಾಜರು ಮಅರಿಫತ್ ಎಂಬ ಉನ್ನತ ಪದವಿಗೆ ತಲುಪಿದರು . ಆಧ್ಯಾತ್ಮಿಕತೆಯ ಮತ್ತಿನಲ್ಲಿ ಮುಳುಗಿದ ಹಲ್ಲಾಜರನ್ನು ಜುನೈದುಲ್ ಬಗ್ದಾದಿಯೂ ಹೊರಗಿಟ್ಟರು .
*ಭುಗಿಲೆದ್ದ ವಿವಾದ*

ಬೀದಿಗಿಳಿದ ಹಲ್ಲಾಹರು ನಾನು ನಾನು ನೀನು ಎಂಬ ಸ್ನೇಹ ಮಾದುರ್ಯದಲ್ಲಿ ಮುಳುಗಿದರು. ಹಲವು ವೇಳೆಗಳು ಇದೇ ರೀತಿಗೆ ಮರುಕಳಿಸುತ್ತಿತ್ತು , ಆವಾಗ ತಾನು ದೇವ ಸನ್ನಿಧಿಯಲ್ಲಿ ಇರುತ್ತಿದ್ದೆನೆಂದು ಹಲ್ಲಾಜರು ಹೇಳುತ್ತಿದ್ದರು . ಈ ಉನ್ಮಾದ ಸ್ಥಿತಿಯಲ್ಲಿ ಹಲ್ಲಾಜರು "ಅನಲ್ ಹಖ್" ಎಂದು ಪಠಿಸುತ್ತಲೇ ಇದ್ದರು. ಸೃಷ್ಟಿಕರ್ತನ ಅನುಪಮ ಪ್ರೀತಿಯಿಂದ ಹಲ್ಲಾಜರು "ಪರಮ ಸತ್ಯ ನಾನೇ(ಅನಲ್ ಹಖ್)" ಎಂದೂ "ಸುಬ್ಹಾನೀ (ನಾನು ನನ್ನನ್ನು ಪರಿಶುದ್ಧಗೊಳಿಸುವೆನು)" , "ಮಾಫಿಲ್ ಜೈಬಿ ಇಲ್ಲಲ್ಲಾ(ಇಲಾಹನ ಹೊರತು ಬೇರೇನೂ ಜೇಬಲ್ಲಿಲ್ಲ)", "ನಾ ಪ್ರೀತಿಸುವ ನಾನು ಅವನೇ , ನಾ ಪ್ರೀತಿಸುವ ಅವನು ನಾನೇ" "ನನ್ನ ಶಿರೋ ವಸ್ತ್ರದೊಳಗೆ ಇಲಾಹನ್ನಲ್ಲದೆ ನಾನು ಅಡಗಿಸಿಲ್ಲ", "ಪ್ರೀತಿಸುವವನು ನಾನೇ. . . ಪ್ರೀತಿಸಲ್ಪಡುವವನೂ ನಾನೇ. . ." ಈ ರೀತಿಯ ಪದಗಳು , ಕವಿತೆಗಳು ಹಲ್ಲಾಜರ ಮತ್ತುಭರಿತ ಪದಪ್ರಯೋಗಗಳು ಜನರ ವಿಶ್ವಾಸವನ್ನು ನಾಶಗೊಳಿಸುವುದೇ. . ? ಎಂದು ಉಲಮಾಗಳು ಬಯಪಟ್ಟರು . ಅವರಲ್ಲಿ ಅಲಿಯ್ಯಿಬಿನು ಈಸಾ ಹಲ್ಲಾಜರೊಂದಿಗೆ ವಾದಕ್ಕಿಳಿದರು . ಪರಸ್ಪರ ಮಾತಿನೆಡೆಯಲ್ಲಿ ಹಲ್ಲಾಹರು ಈಸರವರೊಂದಿಗೆ "ನೀವು ನಿಂತಲ್ಲೇ ನಿಲ್ಲಿ ಅಧಿಕವೇನು ಮುಂದುವರೆಯಬೇಡ, ಹಾಗೇನಾದರೂ ಮಾಡಲು ಶ್ರಮಿಸಿದರೆ ತಮ್ಮನ್ನು ಭೂಮಿಯೊಂದಿಗೆ ಬುಡಮೇಲು ಮಾಡುವೆ" ಈ ಮಾತು ಕೇಳಿದಂತೆ ಈಸರವರು ಸಂವಾದವನ್ನು ನಿಲ್ಲಿಸಿದರು .

*ಆರೋಪಗಳ ಸುರಿಮಳೆ*

ಹಲ್ಲಾಜರ ಮಾತುಗಳು ಕವನಗಳು ಬಗ್ದಾದ್ ನಗರವನ್ನು ತಲ್ಲಣಗೊಳಿಸಿತು. ಹಲ್ಲಾಜರು ಪ್ರವಾದಿ ಎಂದೂ ದೇವನೆಂದೂ ವಾದಿಸಿರುವನೆಂದೂ ಜನ ಆರೋಪಿಸಿ ತಕ್ಕ ಶಿಕ್ಷೆ ನೀಡುವಂತೆ ಕೇಳತೊಡಗಿದರು . ಹದ್ದು ಮೀರಿದ ಹಲ್ಲಾಜರ ನಡತೆ ಜನರನ್ನು ರೊಚ್ಚಿಗೆಬ್ಬಿಸಿತು , ಕೊನೆಗೆ ಹಲ್ಲಾಜರ ಮೇಲೆ ವಿಧಿ ಬರೆಯಲ್ಪಟ್ಟಿತು. ಖಲೀಫ ಮುಖ್ತದಿರ್ ಬಿಲ್ಲಾಹಿಯ ಮಂತ್ರಿ ಹಾಮಿದರು ಹಲ್ಲಾಜರನ್ನು ಪ್ರಶ್ನಿಸಿದರು . ಹಲ್ಲಾಜರು ಎಲ್ಲವನ್ನೂ ನಿಶೇಧಿಸುತ್ತಾ ತನಗೆ ಪ್ರವಾದಿ ಎಂದೋ ದೇವನೆಂದೋ ಯಾವುದೇ ರೀತಿಯ ವಾದವಿಲ್ಲ, ಅಂತವುಗಳಿಂದ ನಾನು ಅಲ್ಲಾಹನಲ್ಲಿ ಬೇಡುವೆನು . ನಾನು ಅಲ್ಲಾಹನ ಒಬ್ಬ ದಾಸ ಮಾತ್ರವಾಗಿರುವೆನು, ಉಪವಾಸ ಮತ್ತು ನಮಾಝ್ ಸ್ವಲ್ಪ ಜಾಸ್ತಿ ಮಾಡುತ್ತಿರುವೆನೇ ಹೊರತು ಬೇರೇನೂ ನನ್ನಲ್ಲಿ ಇಲ್ಲ. ಆರೋಪಗಳು ಜಾಸ್ತಿಯಾಗ ತೊಡಗಿದಾಗ ಖಲೀಫರು ಉಲಮಾಗಳ ಮೊರೆ ಹೋದರು . ಉಲಮಾಗಳು ಮೂರು ವಿಭಾಗಗಳಾಗಿ ನಿಂತರು . ಪ್ರಮುಖ ವಿಭಾಗವು ಹಖೀಖತ್ ಮತ್ತು ಮಅರಿಫತ್ ಇವೆರಡೂ ಅಧೃಶ್ಯ ಕಾರ್ಯವಾಗಿರೋದರಿಂದ ಹಲ್ಲಾಜರು ಮಹಾ ಪಾಪ ಮಾಡಿದರೆಂದೂ , ಕ್ಷಮೆ ಕೇಳದ ಹೊರತು ವಧಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು . ಅವರು ನೀಡಿದ ಕಾರಣ ನಮಾಝ್ ನಿರ್ವಹಿಸದ ವಲಿಯ್ಯಿನ ಮುಂದೆ ಖಡ್ಗ ಬೀಸಿದ ಎರಡನೇ ಖಲೀಫ ಉಮರ್(ರಅ) ರವರ ನಡತೆಯಾಗಿತ್ತು . ಆದರೆ ಮತ್ತೊಂದು ವಿಭಾಗ ಮೌನವಹಿಸಿತು , ಮೂರನೇ ವಿಭಾಗದವರು ಹಲ್ಲಾಜರು ಉನ್ಮಾದ ಸ್ಥಿತಿಯಲ್ಲಿರುವುದರಿಂದ ಶರೀಅತಿನ ನಿಯಮಕ್ಕೆ ಒಳಗಾಗುವುದಿಲ್ಲ ಎಂಬ ವಾದವಾಗಿತ್ತು . ಉಲಮಾಗಳ ಅಭಿಪ್ರಾಯಗಳಿಂದ ತೃಪ್ತಿಯಾಗದೆ ಖಲೀಫರು ಸೂಫಿಗಳನ್ನು ಸಮೀಪಿಸಿದರು . ಆಂತರಿಕ ಅರ್ಥ ಬಲ್ಲವರು ಸೂಫಿಗಳು ಮಾತ್ರವಾಗಿದ್ದಾರೆಂದೂ , ಈ ರೀತಿಯ ಪದ ಬಳಕೆಯು ಸಾಮನ್ಯ ಜನರೆಡೆಯಲ್ಲಿ ಮುಜುಗರಕ್ಕೊಳಗಾಗುವ ನಡವಳಿಕೆ ಕಂಡುಬರುವುದೆಂದೂ , ಈ ರೀತಿಯ ಮಾತುಗಳನ್ನಾಡುವವರ ವಿರುದ್ದ ಶರೀಅತ್ ಕಾನೂನು ಕ್ರಮ ಕೈಗೊಳ್ಳಬಹುದೆಂದೂ , ಹಲ್ಲಾಜ್ ಮತ್ತು ಸೃಷ್ಟಿಕರ್ತನ ನಡುವಿನ ಬಂಧವನ್ನು ಅರಸುವ ಅವಶ್ಯಕತೆ ಖಲೀಫರಿಗೆ ಇಲ್ಲವೆಂದೂ, ಖಲೀಫ ತೀರ್ಪು ನೀಡಬೇಕಾದುದು  ಶರೀಅತ್ ಕಾನೂನಿನ ಪ್ರಕಾರವೆಂದೂ ಅವರು ಅಭಿಪ್ರಾಯ ಪಟ್ಟರು.

ಸೂಫೀ ಭಾಷೆಯ ಆಂತರಿಕ ಅರ್ಥಗಳು ಸೂಫಿಗಳಿಗೆ ಮಾತ್ರ ಅರ್ಥವಾಗುವುದಾದರೂ ಮಜ್ತಬ ತಲುಪಿದ ಅವಸ್ಥೆಯಲ್ಲಿ ಹಲ್ಲಾಜರಿಂದ ಹೊರಡುತ್ತಿರುವ ಮಾತುಗಳು ಇಸ್ಲಾಮಿಕ ಶರೀಅತ್ ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿದೆ ಎಂಬುವುದರಲ್ಲಿ ಯಾರಿಗೂ ವಿರೋಧವಿರಲಿಲ್ಲ.

*ಸೂಫೀ ಚಕ್ರರ್ತಿಯ ಮರಣ*

ನಿಯಮೋಪದೇಶ ಲಭ್ಯವಾದಂತೆ ಬಗ್ದಾದಿನ ಅಬ್ಬಾಸಿಯ ಖಲೀಫರಾದ *ಮುಖ್ತದಿರ್ ಬಿಲ್ಲಾಹಿ ಹಲ್ಲಾಜರೊಂದಿಗೆ ಪಶ್ಚಾತಾಪ ಪಡಲು ಕೇಳಿಕೊಂಡರು , ಆದರೆ ಹಲ್ಲಾಜರು ತಾನು ಪಶ್ಚಾತಾಪ ಪಡಲು ಯಾವ ತಪ್ಪನ್ನೂ ಮಾಡಿಲ್ಲವೆಂದು ಹೇಳುತ್ತಾ ಮುಗುಳ್ನಗೆಯೊಂದಿಗೆ ಕವನ ಆಲಾಪಿಸುತ್ತಾ ನಡೆದರು . ಇದರೊಂದಿಗೆ ಅನೇಕ ಸಮಯಗಳ ಕಾಲಾವಕಾಶಗಳು ನೀಡಿದ ಬಗ್ದಾದ್ ಸುಪ್ರೀಂ ಕೋರ್ಟ್ ವಧಶಿಕ್ಷೆ ಪ್ರಖ್ಯಾಪಿಸಿತು . ಖಾಝಿಯಾಗಿದ್ದ ಹಲ್ಲಾಜರ ಗುರು ಜುನೈದುಲ್ ಬಗ್ದಾದಿಯವರು ಸಹಿ ಹಾಕಲಾಗದೆ ಮೌನಿಯಾದರು . ಆಗ ಹಲ್ಲಾಜರು "ಗುರೋ. . ಸೂಫಿಸಂನ ಅಂಗಿಯನ್ನು ತೆಗೆದಿಟ್ಟಲ್ಲದೇ ನಿಮ್ಮಿಂದ ಸಹಿ ಹಾಕಲು ಸಾಧ್ಯವಿಲ್ಲ" ಎಂದು ಹೇಳಿದಾಗ ಜುನೈದುಲ್ ಬಗ್ದಾದಿಯವರು ನಿಯಮಜ್ಞರು ಧರಿಸುವ ಅಂಗಿಯುಟ್ಟು ಕೊಂಡು ಬಂದು ಸಹಿ ಹಾಕಿದರು . ನಂತರ ತನ್ನ ಕಣ್ಣು ತುಂಬಿಕೊಂಡು ಬಗ್ದಾದಿಯವರು ಹೀಗೆ ಹೇಳಿದರು *"ನಾನು ಮತ್ತು ಹಲ್ಲಾಜ್ ಒಂದೇ . . ಹುಚ್ಚು ನನ್ನನ್ನು ರಕ್ಷಿಸಿತು ಯುಕ್ತಿ ಹಲ್ಲಾಜರನ್ನು ಕೊನೆಗೊಳಿಸಿತು"* . ಕ್ರಿ. 922-ರಲ್ಲಿ ದುಲ್ಹಿಜ್ಜ 24 ರಂದು *ಹಲ್ಲಾಜ್ ಬಿನ್ ಮನ್ಸೂರ್* ಎಂಬ ಸೂಫೀ ಚಕ್ರವರ್ತಿಯ ವಧಶಿಕ್ಷೆಯು ಸಾರ್ವಜನಿಕವಾಗಿ ನಡೆಸಿದರು . ಕ್ರೂರವಾಗಿ ಹಲ್ಲೆಗೈದು ಕೈಕಾಲುಗಳನ್ನು ತಲೆಯನ್ನು ಕಡಿದು, ವಿವಿಧ ಅಂಗಾಂಗಗಳನ್ನು ತುಂಡು ತುಂಡಾಗಿ ಕತ್ತರಿಸಿ ಬೆಂಕಿಯಿಟ್ಟು ಬಸ್ಮವನ್ನು ನದಿಗೆಸೆದು ಜನತೆಯು  ಸಂಭ್ರಮಿಸಿದರು . ಮೂರನೇ ದಿನ ಯೂಪ್ರಟೀಸ್ ನದಿಯಲ್ಲಿ ಪ್ರವಾಹ ಉಂಟಾಯಿತು . ತನ್ನ ಮರಣ ಸಮೀಪಿಸಿದಾಗಲೂ ಕೊಲ್ಲಲು ಬಂದವರ ಮುಖವನ್ನು ನೋಡಿ ಈ ರೀತಿ ಪ್ರಾರ್ಥಿಸಿದರು *"ನೀವು ನನ್ನನ್ನು ಕೊಂದರೂ. . . ನಿಮಗೆ ಪ್ರತಿಫಲ ಲಭಿಸುವುದು , ನನಗೆ ಶಹೀದಿನ ಪದವಿಯೂ .. ಅಲ್ಲಾಹನೇ .. ನನಗೆ ನಿನ್ನಲ್ಲಿಗಿರುವ ದೂರವನ್ನು ಕಡಿಮೆ ಮಾಡುತ್ತಿದ್ದಾರೆ . ಇವರ ಸಂತೋಷ, ಆನಂದಗಳನ್ನು ಇವರಲ್ಲಿ  ಸದಾ ಕರುಣಿಸು"* .

 〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ಪ್ರೇಮ

*══❁✿🕳.﷽ .🕳✿❁══*

▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

〰〰❁✿🌹🌹✿❁ 〰〰
*ಪ್ರೇಮ.!?*
〰〰❁✿🌹🌹✿❁ 〰〰


ಮುಸ್ಲಿಂ ಹೆಣ್ಣು ಮಕ್ಕಳಿಗೆ ಹೊರಗಡೆ ಅಲೆದಾಡಲು, ಗಂಡು ಮಕ್ಕಳೊಂದಿಗೆ ಬೆರೆಯಲು , ಸಲ್ಲಪಿಸಲು ಪ್ರಪಂಚದ ಎಲ್ಲಾ ಕಡೆಗಳಲ್ಲೂ ಸೌಕರ್ಯವಿದೆ . ಪೋಷಕರು , ಅಧ್ಯಾಪಕರು ಮತ್ತು ಸಮುದಾಯ ನಾಯಕರುಗಳು ನಿಯಂತ್ರಣವಿಟ್ಟಿದ್ದರೂ, ಪ್ರೇಮ ಸಲ್ಲಾಪಗಳನ್ನಾಗಲೀ, ಪ್ರೀತಿ ಬಂಧಗಳನ್ನಾಗಲೀ , ಶಾರೀರಿಕ ಲೈಂಗಿಕ ಬಂಧಗಳನ್ನಾಗಲೀ ತಡೆಯಲು ಸಾಧ್ಯವಾಗಲಿಲ್ಲ. ವ್ಯಕ್ತಿ ಸ್ವಾತಂತ್ರ್ಯ, ತಮ್ಮ ಅವಕಾಶಗಳು , ವಿಧ್ಯಾಬ್ಯಾಸ, ಕಸುಬು ಇವೆಲ್ಲವುಗಳು ಎಲ್ಲಾ ಧರ್ಮೀಯರಂತೆ ಮುಸ್ಲಿಂ ಹೆಣ್ಣುಮಕ್ಕಳೂ ಪಡೆಯುತ್ತಿದ್ದಾರೆ .

ಎಲ್ಲಾ ತಡೆಗಳನ್ನಿಟ್ಟು ಭದ್ರವಾಗಿಡಲು ಶ್ರಮಿಸುತ್ತಿರುವ ಕುಟುಂಬಗಳಲ್ಲೂ ಕೂಡ ಗಂಡು ಹೆಣ್ಣು ಸಮ್ಮಿಶ್ರವಾಗಿ ಶಾರೀರಿಕ ಹಾಗೂ ಲೈಗಿಕ ಬಂಧಗಳಲ್ಲಿ ತೊಡಗಿಕೊಂಡಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ . ಲೈಂಗಿಕತೆಗೆ ಪ್ರೀತಿ ಪ್ರೇಮದ ಅಗತ್ಯವಿಲ್ಲ,  ಸೌಹಾರ್ಧತೆ ಕೂಡಾ ಮನುಷ್ಯರನ್ನು ಕೆಲವೊಮ್ಮೆ ಲೈಂಗಿಕತೆಗೆ ಕೊಂಡೊಯ್ಯುತ್ತದೆ .
ಧಾರ್ಮಿಕ ನಿಯಮಾವಳಿಗಳನ್ನು ಗಾಳಿಗೆ ತೂರಿದ ಆಧುನಿಕ ಗಂಡು ಹೆಣ್ಣು ಬಂಧಗಳು ಧರ್ಮ ಸಂಸ್ಕೃತಿಯನ್ನು ದುರ್ಭಲವಾಗಿಸಿದೆ .

ಮುಸ್ಲಿಂ ಹೆಣ್ಣಿನ ಲೋಕ ಬದಲಾಗಿದೆ , ಒಂದು ಕಾಲದಲ್ಲಿ ಬುರ್ಖಾದಲ್ಲಿ ಶರೀರವನ್ನು ಅಡಗಿಸಿಟ್ಟಿದ್ದವರು , ಇಂದು ಅದೇ ಬುರ್ಖಾವನ್ನು ತಮ್ಮ ಶರೀರ ಉಬ್ಬು ತಗ್ಗುಗಳು ಅನ್ಯರಿಗೆ ಗೋಚರವಾಗುವಂತೆ ಹೊಸ ರೂಪು ಕೊಟ್ಟಿದ್ದಾರೆ .

ಯೌವ್ವನ ತುಂಬಿ ತುಳುಕುವ ಹೃದಯಗಳು , ಸಿನೆಮಾ ತಾರೆಗಳನ್ನು , ಆಟಗಾರರನ್ನು ಮಾದರಿಯನ್ನಾಗಿಸಿ ಪ್ರೀತಿ ಪ್ರೇಮಕ್ಕೆ ಮರುಳಾಗಿ ಹೋಗಿದ್ದಾರೆ . ಕಾಲ್ಪನಿಕ ಪ್ರೇಮ ಕಥೆಗಳನ್ನು ತಮ್ಮ ಗುರಿಯನ್ನಾಗಿಸಿದ ಯೌವ್ವನದ ಚಿಗುರೊಡೆಯುತ್ತಿರುವ ಮೃದು ಹೃದಗಳು. ಎಂಟು ಒಂಬತ್ತು ತರಗತಿಗಳಲ್ಲೇ ಮೊಳಕೆಯೊಡೆಯುವ ಈ ಪ್ರೀತಿ ಪ್ರೇಮಗಳು ಕ್ರಮೇಣ, ತಮ್ಮ ಹಾವಭಾವಗಳನ್ನು ಬದಲಿಸುತ್ತಾ ಇರುಳನ್ನು ಹುಡುಕಲು ಶುರುವಾಗುತ್ತದೆ . ತಾವಿಬ್ಬರಿರುವ ಒಂದು ಲೋಕವನ್ನು ಸಂಕಲ್ಪಿಸುತ್ತಾ ಯಾವುದಾದರೂ ಲಾಡ್ಜ್-ಗಳಲ್ಲೋ, ಗುಡ್ಡೆ-ಗಾಡುಗಳಲ್ಲೋ , ಯಾವುದಾದರೂ ಶಿಥಿಲಗೊಂಡ ಮನೆಯಲ್ಲೋ ತಮ್ಮ ಶಾರೀರಿಕ ಇಚ್ಛೆಗಳನ್ನು ಪೂರೈಸಿಕೊಳ್ಳಲು ನೋಡುತ್ತಾರೆ . ಈ ವಿಧ್ಯಾರ್ಥಿನಿಗಳ ಭಾವನೆ ತಾವು ತಮ್ಮ ಯೌವ್ವನವನ್ನು ಪ್ರೇಮಿಸಿ ಪ್ರೀತಿಸಿ ಆಗ್ರಹಗಳನ್ನು ಪೂರೈಸಿಕೊಂಡರೆ ಅದು ನಮಗೆ ಸಾರ್ಥಕ, ಮುಂದಕ್ಕೆ ಮುಂದೂಡಿದರೆ ಯೌವ್ವನದ ಉಲ್ಲಾಸ ನಿಮಿಶಗಳು ನಷ್ಟವಾದೀತು ಎಂದಾಗಿದೆ .

ಯೂನಿಫೋಂ ಹಾಕಿದ ವಿಧ್ಯಾರ್ಥಿನಿಗಳು ಐಸ್ ಕ್ರೀಂ ಪಾರ್ಲರ್ಗಳಲ್ಲೂ , ಮಾಲ್-ಗಳಲ್ಲೂ , ಕಾಫಿ ಕೆಫೆಗಳಲ್ಲೂ , ಸೈಬರ್ ಸೆಂಟರ್ ಗಳಲ್ಲೂ ತಮ್ಮ ತಮ್ಮ ಗೆಳೆಯ ಗೆಳತಿಯರೊಂದಿಗೆ ಪ್ರೇಮ ಹಂಚಿಕೊಳ್ಳಲು ಅಲೆದಾಡುತ್ತಿದ್ದಾರೆ . ಜಾಗೃತರಾಗಬೇಕಾದ ಪೋಶಕರು ಮಕ್ಕಳಿಗೆ ಬುಧ್ದಿವಾದ ಹೇಳಲು ಹಿಂಜರಿಯುತ್ತಿದ್ದಾರೆ , ಮಕ್ಕಳೇನಾದರು ಎಡವಟ್ಟು ಮಾಡುವರೋ ಎಂಬ ಭಯ. 

ಧಾರ್ಮಿಕತೆಗೆ ಮಂಕು ಬೂದಿ ಎರಚಿದ ಹದಿ ಹರೆಯದ ಯುವಕ-ಯುವತಿಯರು ತಮ್ಮ ಬಾಳ ಬೆಳಕನ್ನು ತಾವಾಗಿಯೇ ನಂದಿಸುತ್ತಿದ್ದಾರೆ. ಪ್ರಾಯದ ಬಿಸುಪಿಗೆ ಹರೆಯದ ಆಸೆಗಳಿಗೆ ಕಡಿವಾಣ ಹಾಕಲಾರದೆ ಕ್ಷಣಿಕ ಸುಖದ ಬೆನ್ನು ಬಿದ್ದು ಜೀವನ ಏನೆಂದು ಅರ್ಥವಾಗುವ ಮೊದಲೇ ಜೀವನಕ್ಕೆ ನಾಂದಿ ಹಾಡುತ್ತಿದ್ದಾರೆ . ಸ್ವ ಶರೀರವನ್ನು ನಿಯಂತ್ರಿಸಲಾಗದ ಯುವತಿಯರನ್ನು ಕಂಡು , ತಮ್ಮ ಮಕ್ಕಳಿಗೆ ಸರಿದಾರಿ ತೋರಿಸಿ ಕೊಡಲಾಗದ ಪೋಷಕರು ತಲೆಯ ಮೇಲೆ ಕೈ ಇಟ್ಟು ಕುಳಿತಿದ್ದಾರೆ .

ಇಷ್ಟಕ್ಕೂ ಕಾರಣವೇನು. . ?
ಇದಕ್ಕೆಲ್ಲಾ ಹೊಣೆ ಯಾರು. . ?
ಸರಿಪಡಿಸಲು ದಾರಿ ಇದೆಯೇ. . ?


ಚಿಂತಿಸಿ,

*ನಿಮ್ಮ ಮಕ್ಕಳು ನಿಮಗೆ ಅನುಗ್ರಹವೆಂದು ನುಡಿದ ಅದೇ ಪವಿತ್ರ ಗ್ರಂಥ ಖುರ್-ಆನ್ ಮತ್ತೊಂದೆಡೆ ನಿಮ್ಮ ಮಕ್ಕಳು ನಿಮಗೆ ನಾಶವೆಂದೂ ನುಡಿದಿದೆ .*

ನಿಮ್ಮ ಮಕ್ಕಳು ನಿಮಗೆ ಅನುಗ್ರಹವಾಗಿರಬೇಕಾದರೆ ಧಾರ್ಮಿಕತೆಗೆ ಮರಳಿ , ಧಾರ್ಮಿಕ ಚೌಕಟ್ಟಿನಲ್ಲಿ ಬೆಳೆಸಿ , , , , ,

*ಅಲ್ಲಾಹನು ಕರುಣಿಸಲಿ. . . .

 〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰

ಹಝ್ರತ್ ಫತಹ್ ಅಲಿ ಟಿಪ್ಪು ಸುಲ್ತಾನ್


 السَّلاَمُ عَلَيْكُمْ وَرَحْمَةُ اللّٰهِ وَبَرَكَاتُهُ
*══❁✿🕳.﷽ .🕳✿❁══*
▪•••┈┈•••💧•••┈┈•••▪
*::::: 🌳🌱ಮೊಳಕೆ🌱🌳 :::::*
▪•••┈┈•✿❁✿•┈┈•••▪

▪•••┈┈•••💧•••┈┈•••▪
*:::🌳🌱ಶಹೀದ್ ಆಝಮ್ ಸುಲ್ತಾನುಲ್ ಮುಜಾಹಿದ್ದೀನ್ ಅಬುಲ್ ಫತ್ತಾಹ್ ಫತಹ್ ಅಲಿ ಟಿಪ್ಪು ಸುಲ್ತಾನ್ (ಖಸಿ)🌱🌳:::*
▪•••┈┈•✿❁✿•┈┈•••▪
                       
ದೇಶ ಕಂಡ ಮಹಾನ್ ದೊರೆ, ಬದುಕನ್ನು ದೇಶಕ್ಕಾಗಿ ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರ . ಜಾತಿ ಧರ್ಮ ಭೇದವಿಲ್ಲದೆ ಮಾನವ ಕುಲವನ್ನು ಪ್ರೀತಿಸಿದ ಶಾಂತಿ ಸೌಹಾರ್ದತೆಯ ಪ್ರತೀಕ. ಅದರೊಂದಿಗೆ ಆಧ್ಯಾತ್ಮಿಕ ಲೋಕದಲ್ಲಿ ಏಕಾಂತತೆಯನ್ನು ಪ್ರೀತಿಸಿದ ಅಲ್ಲಾಹನ ಆರಿಫರುಗಳಲ್ಲಿ ಶ್ರೇಷ್ಠ..... *ಶಹೀದ್ ಆಝಮ್ ಸುಲ್ತಾನುಲ್ ಮುಜಾಹಿದ್ದೀನ್ ಅಬುಲ್ ಫತ್ತಾಹ್ ಫತಹ್ ಅಲಿ ಟಿಪ್ಪು ಸುಲ್ತಾನ್ (ಖಸಿ)* ಪ್ರಮುಖರಾಗಿದ್ದರು .

ಮೈಸೂರು ದೇವನಹಳ್ಳಿಯಲ್ಲಿ ಹಿಜ್ರ 1163 ದುಲ್ ಹಿಜ್ಜ 20 ಶುಕ್ರವಾರ ದೇಶಭಕ್ತ ವೀರ ಶೂರ ಪರಾಕ್ರಮಿ ಬಾಬಾಜಾನ್ ಹೈದರ್ ಅಲಿ ಖಾನ್ ಮತ್ತು ಮಡದಿ ಫಾತಿಮಾ ಬೀಗಂ ದಂಪತಿಗಳ ಪುತ್ರರಾಗಿ ಮಹಾನುಭಾವರು ಜನಿಸಿದರು . ಮಗುವಿಗೆ ಫಾತಿಮಾ ಬೇಗಂ ಟಿಪ್ಪು ಮಸ್ತಾನ್ (ಖಸಿ) ಯವರ ನಿರ್ದೇಶನದಂತೆ *ಟಿಪ್ಪು ಸುಲ್ತಾನ್* ಎಂಬ ಹೆಸರನ್ನಿಟ್ಟರು . ಬಾಲ್ಯದಲ್ಲೇ ಪ್ರತಿಭಾಶಾಲಿಯಾಗಿದ್ದ ಟಿಪ್ಪು ಉಲೆಮಾ ಶ್ರೇಷ್ಠರಾದ ಮೌಲಾನಾ ಉಬೈದುಲ್ಲ  ಮೌಲವಿಯವರಲ್ಲಿ ಪ್ರಾಥಮಿಕ ವಿಧ್ಯೆಯನ್ನು ಪಡೆದರು . ಉನ್ನತ ವಿದ್ವಾಂಸರುಗಳಿಂದ ಧಾರ್ಮಿಕ ವಿಧ್ಯೆಯನ್ನು ಕರಗತಮಾಡಿದ ಸುಲ್ತಾನರು ಅಧಿಕ ಸಮಯವೂ ಸೃಷ್ಟಿಕರ್ತನಾದ ಅಲ್ಲಾಹನ ಧ್ಯಾನದಲ್ಲಿ ಕಳೆಯುತ್ತಿದ್ದರು . ಸೃಷ್ಠಿ ವೈಭವದ ಮಧುವನ್ನು ಹೀರಿದ ಸುಲ್ತಾನರು , ಹಲವು ತ್ವರೀಖತುಗಳನ್ನು ಸ್ವೀಕರಿಸಿದ್ದರು.  ಅಂತಿಮವಾಗಿ ಮೈಸೂರು ಸಾಮ್ರಾಜ್ಯದ ಅಜೇಯ ಬದುಶಾರಾಗಿ , ಮೈಸೂರು ಸಾಮ್ರಾಜ್ಯದ ಅಧಿಕಾರವೇರಿದರು . ಸ್ವರಾಜ್ಯ ಸ್ನೇಹಿಯಾಗಿದ್ದ ಯುಗ ಪುರುಷ ಸ್ವತಂತ್ರ ಭಾರತಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು . ಚರಿತ್ರೆ ಪರಿಶೀಲಿಸಿದರೆ ನಮಗೆ ಆ ಮಹಾನುಭಾವರ ಕುರಿತು ತಿಳಿಯಬಹುದು.

ಮುಗ್ಧರೂ , ನಿಸ್ವಾರ್ಥ ವ್ಯಕ್ತಿಯೂ ಆಗಿದ್ದ *ಮೈಸೂರು ಹುಲಿ* ಎಂಬ ನಾಮದಲ್ಲಿ ಪ್ರಸಿದ್ಧಿ ಹೊಂದಿದ ಹಝ್ರತ್ ಅಬುಲ್ ಫತ್ತಾಹ್ ಫತಹ್ ಅಲಿ ಟಿಪ್ಪು ಸುಲ್ತಾನ್ (ರಅ) ರವರು 1799 ರಂಜಾನ್ 14 ರಂದು ಮೈಸೂರಿನ ಶ್ರೀರಂಗಪಟ್ಟಣದಲ್ಲಿ ವೀರ ಹೋರಾಟದಲ್ಲಿ ಶಹೀದರಾದರು .

ಅಲ್ಲಾಹನು ಮಹಾನುಭಾವರ ದರಜ ಮತ್ತಷ್ಟು ಉನ್ನತಿಗೇರಿಸಲಿ .
ಆ ಮಹಾನರ ಹಖ್ಖ್ ಜಾಹ್ ಬರಕತ್ತಿನಿಂದ ನಮ್ಮೆಲ್ಲರ ಪರಲೋಕ ಜೀವನ ಸುಗಮಗೊಳಿಸಲಿ.....ಆಮೀನ್. 

*ನೋಟ್:-* 👉 ಶೈಖುನಾ ಶಂಸುಲ್ ಉಲಮಾ (ಖಸಿ) ರವರು ತಮ್ಮ ಅನೇಕ ಪ್ರಸಿದ್ಧ ಭಾಷಣಗಳಲ್ಲಿ ಟಿಪ್ಪು ಸುಲ್ತಾನ್ (ರಅ) ರನ್ನು ಸ್ಮರಿಸುತ್ತಿದ್ದರು . ಸುಲ್ತಾನರನ್ನು ಆರಿಫ್ ಮತ್ತು ವಲಿಯ್ಯಿ ಎಂದು  ಸಮೂಹಕ್ಕೆ ಪರಿಚಯಿಸುತ್ತಿದ್ದರು . ಶೈಖುನಾ ಶಂಸುಲ್ ಉಲಮಾ (ಖಸಿ)ರವರು ಆಫತ್ ಮುಸೀಬತ್ಗಳಿಂಧ ರಕ್ಷೆಹೊಂದಲು ಸುಲ್ತಾನ್ (ರಅ) ರವರ ಸನ್ನಿಧಿಗೆ ಹತ್ತು ಫಾತಿಹಾಗಳನ್ನು ಪಠಿಸಿ ಹದಿಯ ಮಾಡಲು ನಿರ್ದೇಶಿಸುತ್ತಿದ್ದರು .

🤲ಆ ಸನ್ನಿಧಿಗೆ ಒಂದು ಫಾತಿಹ ಸಮರ್ಪಿಸೋಣ..!


صلّوا على النبي ﷺ 
اللهم صل على سيدنا محمد وعلى اله وصحبه وسلم

〰〰❁✿🌹•🌹✿❁〰〰
 *✍|🅜|🅤|🅢|🅐|🅕|🅘|🅡|*
 〰〰❁✿🌹•🌹✿❁〰〰